ಸೂರ್ಯ ಸಂಚಾರ ಮೀನಾ ರಾಶಿಯಲ್ಲಿ - Sun Transit in Pisces in Kannada

ಸೂರ್ಯ ದೇವರು 14 ಮಾರ್ಚ್ ರಂದು , ಶನಿವಾರ, ಮಧ್ಯಾಹ್ನ 11 ಗಂಟೆ 45 ನಿಮಿಷಕ್ಕೆ ಮೀನಾ ರಾಶಿಯಲ್ಲಿ ಸಂಚರಿಸುತ್ತಾರೆ. ಇಂದು ಸೂರ್ಯ ದೇವರು ತನ್ನ ಸ್ನೇಹ ಗ್ರಹ ಗುರುವಿನ ಸ್ವಾಮಿತ್ವದ ಮೀನಾ ರಾಶಿಯಲ್ಲಿ ಪ್ರವೇಶಿಸುತ್ತಾರೆ. ಇದು ನೀರಿನ ಅಂಶದ ರಾಶಿ. ಹೀಗಾಗಿ, ಉರಿಯುತ್ತಿರುವ ಅಂಶದ ಸೂರ್ಯ ಗ್ರಹದ ಪ್ರವೇಶವು ನೀರಿನ ಅಂಶದ ರಾಶಿಯಲ್ಲಿರುತ್ತದೆ. ನಡೆಯಿರಿ ಸೂರ್ಯನ ಮೀನಾ ರಾಶಿಚಕ್ರದಲ್ಲಿ ಸಂಚಾರಾವು ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ:

ಈ ರಾಶಿ ಭವಿಷ್ಯವು ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ತಿಳಿಯಿರಿ

ಮೇಷ ರಾಶಿಚಕ್ರ

ಸೂರ್ಯ ದೇವ ಮೇಷ ರಾಶಿಚಕ್ರದ ಸ್ಥಳೀಯರ ಐದನೇ ಮನೆಯ ಮಾಲೀಕ. ನಿಮ್ಮ ರಾಶಿಚಕ್ರದ ಅಧಿಪತಿ ಮಂಗಳನೊಂದಿಗೂ ಸೂರ್ಯ ದೇವರು ಸ್ನೇಹಪರವಾಗಿರುತ್ತಾರೆ. ಮೀನಾ ರಾಶಿಯಲ್ಲಿ ಸಾಗುವಿಕೆಯ ಕಾರಣದಿಂದಾಗಿ ಸೂರ್ಯ ದೇವರು ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಾಗಣೆ ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ ಏಕೆಂದರೆ ಇದರಿಂದ ವಿದೇಶದಲ್ಲಿ ಶಿಕ್ಷಣ ಪಡೆಯಲು ಕನಸು ಕಾಣುತ್ತಿರುವ ಜನರ ಅಸೆ ಈಡೇರುತ್ತದೆ ಮತ್ತು ವಿದೇಶಿ ಕಾಲೇಜು ಅಥವಾ ವಿಶ್ವವಿಧ್ಯಾಲಯದಲ್ಲಿ ಪ್ರವೇಶ ಪಡೆಯುವುದರಿಂದ ನೀವು ತುಂಬಾ ಸಂತೋಷಪಡುವಿರಿ. ಕೆಲವು ಸ್ಥಳೀಯರು ಪ್ರೀತಿ ಜೀವನದಲ್ಲಿ ಹತಾಶೆಯನ್ನು ಎದುರಿಸಬೇಕಾಗಬಹುದು ಮತ್ತು ಈ ರಾಶಿಚಕ್ರದ ಸ್ಥಳೀಯರ ಪ್ರೀತಿಪಾತ್ರರು ಯಾವುದಾದರು ದೀರ್ಘಕಾಲದ ಪ್ರವಾಸ ಮಾಡಬಹುದು, ಇದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗದಿರಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮಗೆ ಧೈರ್ಯ ನೀಡುವುದು ಬಹಳ ಉತ್ತಮ. ಈ ರೀತಿಯಲ್ಲಿ ಕೆಲವು ಜನರಿಗೆ ವಿದೇಶಕ್ಕೆ ಹೋಗುವ ಉಂಡುಗೊರೆ ಸಿಗಬಹುದು. ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ ಮತ್ತು ಅವರು ನಿಮ್ಮ ನಿಯಂತ್ರಣದಲ್ಲಿರುತ್ತಾರೆ. ಆದರೆ ಈ ಸಮಯದಲ್ಲಿ ಅನಿರೀಕ್ಷಿತವಾಗಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಇದರ ಹೊರವು ನಿಮ್ಮ ಜೇಬಿನ ಮೇಲೆ ಬೀಳುತ್ತದೆ. ಹಣಕಾಸಿನ ಬಗ್ಗೆ ಯೋಚಿಸಿ ಖರ್ಚಿಸಿ. ಯಾವುದೇ ರೀತಿಯ ಹೂಡಿಕೆಯನ್ನು ಬುದ್ಧಿವಂತಿಕೆಯಿಂದ ಯೋಜಿಸಿ. ಇಲ್ಲದಿದ್ದರೆ ಕೆಲವು ಸಮಯಕ್ಕೆ ಈ ಹೂಡಿಕೆಯನ್ನು ತಪ್ಪಿಸಿ. ಇದರೊಂದಿಗೆ ನಿಮ್ಮ ಆರೋಗ್ಯದಲ್ಲಿ ಕುಸಿತವನ್ನು ಕಾಣಬಹುದು ಮತ್ತು ನಿಮಗೆ ಹೆಚ್ಚು ಜ್ವರ ಅಥವಾ ಈ ರೀತಿಯ ಯಾವುದೇ ಸಮಸ್ಯೆ ನಿಮ್ಮನ್ನು ಕಾಡಬಹುದು. ಯಾವುದೇ ರೀತಿಯ ವಿವಾದ ಅಥವಾ ಕಾನೂನು ಕಚೇರಿಯ

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ಆದಿತ್ಯ ಹೃದಯ ಸ್ತ್ರೋತವನ್ನು ಪಠಿಸಬೇಕು.

ವೃಷಭ ರಾಶಿಚಕ್ರ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ನಿಮ್ಮ ಸಂತೋಷದ ಸ್ಥಾನ ಅಂದರೆ ನಿಮ್ಮ ಮನೆಯ ಸ್ವಾಮಿ ಮತ್ತು ತನ್ನ ಈ ಸಂಚಾರದಲ್ಲಿ ಅವರು ಮೀನಾ ರಾಶಿಯಲ್ಲಿ ನಿಮ್ಮ ರಾಶಿಚಕ್ರದಿಂದ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾರೆ. ಹನ್ನೊಂದನೇ ಮನೆಯನ್ನು ಅನುಕೂಲಕರ ಪರಿಣಾಮವನ್ನು ನೀಡುವ ಮನೆಯೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಾಗುವಿಕೆಯ ಪರಿಣಾಮವಾಗಿ ನಿಮ್ಮ ಆದಾಯದಲ್ಲಿ ಹೆಚ್ಚಳದ ಉಡುಗೊರೆಯನ್ನು ನೀವು ಪಡೆಯಲಿದ್ದೀರಿ.

ಆರ್ಥಿಕವಾಗಿ ನಿಮಗೆ ಸಾಕಷ್ಟು ಲಾಭವಾಗುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ನಿಮಗೆ ಸಹಾಯ ಮಾಡುತ್ತದೆ. ಸಮಾಜದಲ್ಲಿ ನಿಮ್ಮ ಮಟ್ಟವು ಏರುತ್ತದೆ ಮತ್ತು ಸಮಾಜದ ಗಣ್ಯರನ್ನು ಭೇಟಿ ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಕೆಲವು ಹೊಸ ಸಂಪರ್ಕಗಳನ್ನು ಹೊಂದುತ್ತೀರಿ, ಇವು ಭವಿಷ್ಯದಲ್ಲಿ ನಿಮ್ಮ ಕೆಲಸಕ್ಕೆ ಬರುತ್ತವೆ. ಶಿಕ್ಷಣದ ಕ್ಷೇತ್ರದಲ್ಲಿ ಮಾಡಲಾಗಿರುವ ಪ್ರಯತ್ನಗಳಲ್ಲಿ ಯಶಸ್ವಿಯಾಗುವಿರಿ ಮತ್ತು ನೀವು ವಿವಾಹಿತರಾಗಿದ್ದರೆ, ನಿಮ್ಮ ಮಕ್ಕಳಿಂದ ನಿಮಗೆ ಉತ್ತಮ ಲಾಭವಾಗಬಹುದು. ನಿಮ್ಮ ಮನಸ್ಸಿನ ಆಸೆಗಳು ಈಡೇರುತ್ತವೆ. ದೀರ್ಘಕಾಲದಿಂದ ನಡೆಯುತ್ತಿರುವ ನಿಮ್ಮ ಯೋಜನೆಗಳು ಈ ಸಮಯದಲ್ಲಿ ಪೂರ್ಣಗೊಳ್ಳಲು ಆರಂಭಿಸುತ್ತವೆ. ಇದರಿಂದ ನಿಮಗೆ ಲಾಭವಾಗುತ್ತದೆ ಮತ್ತು ನಿಮ್ಮ ಮನೋಬಲವು ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಾಮರಸ್ಯವೂ ಸುಧಾರಿಸುತ್ತದೆ. ಮೊದಲಿಗೆ ಹೋಲಿಸಿದರೆ ಕೆಲಸದ ಸ್ಥಳದಲ್ಲಿ ವರಿಷ್ಠ ಅಧಿಕಾರಿಗಳಿಗಿಂತ ನಿಮ್ಮ ಸ್ಥಾನವು ಉತ್ತಮವಾಗಿರುತ್ತದೆ, ಇದರ ಲಾಭವನ್ನು ನೀವು ಪಡೆಯುತ್ತೀರಿ. ಸರ್ಕಾರಿ ಕ್ಷೇತ್ರದಿಂದ ಲಾಭದ ಸಾಧ್ಯತೆ ಇದೆ ಮತ್ತು ವಿವಾದದಲ್ಲಿ ಯಶಸ್ವಿಯಾಗುತ್ತೀರಿ.

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರನ್ನು ಆರಾಧಿಸಬೇಕು.

ಮಿಥುನ ರಾಶಿಚಕ್ರ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ಮೂರನೇ ಮನೆಯ ಸ್ವಾಮಿ. ಅವರು ತನ್ನ ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಹತ್ತನೇ ಮನೆಗೆ ಸಾಗಣಿಸುತ್ತಾರೆ.ಹತ್ತನೇ ಮನೆಯಲ್ಲಿ ಸೂರ್ಯನು ದೈವಿಕ ಬಲವನ್ನು ಪಡೆಯುತ್ತಾನೆ ಮತ್ತು ಬಹಳ ಬಲಶಾಲಿ ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ತುಂಬಾ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ಸ್ಥಾನ ಮತ್ತು ಅಧಿಕಾರದಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ಯಶಸ್ಸು ಮತ್ತು ಗೌರವ ಹೆಚ್ಚಾಗುತ್ತದೆ ಮತ್ತು ನಿಮ್ಮ ಮನೋಬಲವು ಸಹ ಹೆಚ್ಚಾಗುತ್ತದೆ. ನೀವು ಸರ್ಕಾರಿ ಅಥವಾ ರಾಜ್ಯದ ಭಾಗದಿಂದ ಲಾಭವನ್ನು ಪಡೆಯಬಹುದು.

ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರುವವರು ಈ ಸಮಯದಲ್ಲಿ ವಿಶೇಷವಾಗಿ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಶುಭ ಸುದ್ಧಿಯನ್ನು ಪಡೆಯಬಹುದು ಮತ್ತು ನಿಮ್ಮ ಸಾಮಾಜಿಕ ಮಟ್ಟವು ಏರುತ್ತದೆ. ಪ್ರತಿಯೊಂದು ಕೆಲಸವನ್ನು ನೀವು ಬಹಳ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುತ್ತೀರಿ ಮತ್ತು ನಿಮ್ಮ ಸಾಮರ್ಥ್ಯವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತದೆ. ನಿಮ್ಮ ವಿರೋಧಿಗಳು ಶಾಂತವಾಗಿರುತ್ತಾರೆ ಮತ್ತು ಸಮಾಜದಲ್ಲಿ ನಿಮ್ಮ ಸ್ಥಾನವು ಪ್ರಬಲವಾಗುತ್ತದೆ. ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗುತ್ತದೆ ಮತ್ತು ಈ ಸಮಯದಲ್ಲಿ ನೀವು ಹಣದ ಉತ್ತಮ ಲಾಭವನ್ನು ಪಡೆಯಬಹುದು. ನೀವು ನಿಮ್ಮ ಪ್ರಯತ್ನಗಳಿಂದ ನಿಮ್ಮ ಕೆಲಸವನ್ನು ಉತ್ತಮಗೊಳಿಸುವಿರಿ ಮತ್ತು ಕೆಲವು ಜನವು ತಮ್ಮ ಯಾವುದೇ ಹವ್ಯಾಸವನ್ನು ತಮ್ಮ ವೃತ್ತಿಯನ್ನಾಗಿ ಮಾಡಬಹುದು, ಅದರಲ್ಲಿ ಅವರು ಯಶಸ್ಸನ್ನು ಪಡೆಯುತ್ತಾರೆ. ನೀವು ಯಾವುದಾದರು ವ್ಯಾಪಾರದಲ್ಲಿ ತೊಡಗಿದ್ದರೆ, ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಮಾರ್ಕೆಟಿಂಗ್ ಮತ್ತು ಸೋಶಿಯಲ್ ಮೀಡಿಯ ಸಹಾಯದಿಂದ ನೀವು ನಿಮ್ಮ ವ್ಯವಹಾರವನ್ನು ಹೆಚ್ಚಿಸುವಲ್ಲಿ ನೀವು ಯಶಸ್ವಿಯಾಗುವಿರಿ.

ಪರಿಹಾರ - ನೀವು ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.

ಕರ್ಕ ರಾಶಿಚಕ್ರ

ನಿಮ್ಮ ರಾಶಿಚಕ್ರದ ಸ್ವಾಮಿ ಚಂದ್ರ ದೇವರ ಆಪ್ತ ಸ್ನೇಹಿತ ಸೂರ್ಯ ದೇವ ನಿಮ್ಮ ರಾಶಿಚರ್ಕದಿಂದ ಒಂಬತ್ತನೇ ಮನೆಗೆ ಸಾಗುತ್ತಾರೆ. ಅವರು ನಿಮ್ಮ ಮೂರನೇ ಮನೆಯ ಅಧಿಪತಿ. ಸೂರ್ಯನ ಈ ಸಾಗುವಿಕೆಯ ಪರಿಣಾಮದಿಂದಾಗಿ ನೀವು ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ತಂದೆಗೆ ಅರೋಗ್ಯ ಸಂಬಂಧಿಸಿಯೇ ಸಮಸ್ಯೆಗಳು ಸುತ್ತುವರಿಯಬಹುದು. ಈ ಕಾರಣದಿಂದ ಅವರ ಆರೋಗ್ಯವು ಬಳಲಬಹುದು. ಆದರೆ ನಿಮ್ಮ ಗೌರವ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ನೀವು ಬಯಸುವ ಯಶಸ್ಸು ಪಡೆಯುವ ಸಾಧ್ಯತೆ ಇದೆ. ನೀವು ಯಾವುದಾದರು ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸಬಹುದು. ಇದರಿಂದ ನಿಮಗೆ ಮಾನಸಿಕ ಶಾಂತಿ ದೊರೆಯುತ್ತದೆ. ಕುಟುಂಬದ ಹೆಚ್ಚುವರಿ ಮತ್ತು ಸಮೃದ್ಧಿಗಾಗಿ ನೀವು ಯಾವುದಾದರು ವಿಶೇಷ ಪೂಜೆಯನ್ನು ಆಯೋಜಿಸಬಹುದು. ನಿಮ್ಮ ಹಣವನ್ನು ವಿಶೇಷ ಲೋಕೋಪಕಾರದಲ್ಲಿ ಬಳಸುವಿರಿ, ಇದರಿಂದ ನೀವು ಆತ್ಮಿಕ ಸಮಾಧಾನವನ್ನು ಅನುಭವಿಸುವಿರಿ. ಸೂರ್ಯನ ಈ ಸಾಗುವಿಕೆಯ ಸಮಯದಲ್ಲಿ ನೀವು ಆತ್ಮಾವಲೋಕನದ ಮನಸ್ಥಿತಿಯನ್ನು ಹೊಂದಿರುತೀರಿ. ಈ ಸಮಯದಲ್ಲಿ ನೀವು ಹಿರಿಯ ಅಥವಾ ಗುರುವಿನಂತಹ ವ್ಯಕ್ತಿಯನ್ನು ಭೇಟಿಯಾಗಲು ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ಇದು ನಿಮ್ಮನ್ನು ಜೀವನದ ಹೊಸ ದಿಕ್ಕಿನ ಕಡೆಗೆ ತಿರುಗಿಸಬಹುದು. ಈ ದಿಕ್ಕು ಭವಿಷ್ಯದಲ್ಲಿ ನಿಮ್ಮ ಕೆಲಸಕ್ಕೆ ಬರುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ನಿಮ್ಮ ಹಣವನ್ನು ಅನೇಕ ಪಟ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತೀರಿ. ಸೂರ್ಯನ ಈ ಸಾಗುವಿಕೆಯು ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ.

ಪರಿಹಾರ - ಯಕ್ಕರದ ಮರವನ್ನು ಪೂಜಿಸಬೇಕು ಮತ್ತು ಅದಕ್ಕೆ ನೀರನ್ನು ಅರ್ಪಿಸಬೇಕು.

ಸಿಂಹ ರಾಶಿಚಕ್ರ

ನಿಮಗಾಗಿ ಸೂರ್ಯ ದೇವರ ಯಾವುದೇ ಸಂಚಾರವು ವಿಶೇಷವಾಗಿ ಪ್ರಮುಖವಾಗಿದೆ ಏಕೆಂದರೆ ಸೂರ್ಯ ದೇವ ನಿಮ್ಮ ರಾಶಿಚಕ್ರದ ಅಧಿಪತಿ. ಸೂರ್ಯನ ಮೀನಾ ರಾಶಿಯಲ್ಲಿ ಸಾಗಣೆಯ ಸಮಯದಲ್ಲಿ ಇದು ನಿಮ್ಮ ರಾಶಿಚಕ್ರದಿಂದ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನೀವು ಮಿಶ್ರ ಫಲಿತಾಂಶವನ್ನು ಪಡೆಯುತ್ತೀರಿ. ಒಂದೆಡೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಮತ್ತು ನಿಮ್ಮ ಆರೋಗ್ಯವು ಬಳಲಬಹುದು, ಅದೇ ಸಮಯದಲ್ಲಿ ಮತ್ತೊಂದೆಡೆ ನೀವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಒಲವು ಹೊಂದಿರಬಹುದು.

ನೀವು ಧ್ಯಾನ ವಹಿಸಿದರೆ ಈ ಸಮಯವು ನಿಮಗೆ ಬಹಳಷ್ಟು ಅನುಕೂಲಕರವಾಗಿರುತ್ತದೆ ಮತ್ತು ನೀವು ಉತ್ತಮವಾಗಿ ಅನುಭವಿಸುವಿರಿ. ಈ ಸಮಯದಲ್ಲಿ ಸರ್ಕಾರಿ ವಲಯದಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು. ನೀವು ಯಾವುದೇ ರಹಸ್ಯವನ್ನು ಮರೆಮಾಡಿದ್ದರೆ, ಈ ಸಮಯದಲ್ಲಿ ಅದು ಹೊರಬರುವುದರಿಂದಾಗಿ ನಿಮ್ಮ ಚಿತ್ರಕ್ಕೆ ನಷ್ಟವನ್ನು ನೀಡಬಹುದು. ಇದಲ್ಲದೆ ನೀವು ಶಾಸನಕ್ಕೆ ವಿರುದ್ಧವಾಗಿ ಯಾವುದೇ ಕಾರ್ಯವನ್ನು ಮಾಡಿದ್ದರೆ, ಈ ಸಮಯದಲ್ಲಿ ಅದಕ್ಕಾಗಿ ನಿಮಗೆ ಶಿಕ್ಷೆಯನ್ನು ಸಹ ನೀಡಬಹುದು. ಸಾಮಾನ್ಯವಾಗಿ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಕುಸಿತವಾಗಬಹುದು ಮತ್ತು ಕಾರಣವಿಲ್ಲದ ಪ್ರಯಾಣಗಳ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಗೌರವ ಮತ್ತು ಖ್ಯಾತಿಯ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು ಏಕೆಂದರೆ ಈ ಸಮಯದಲ್ಲಿ ನಿಮ್ಮ ವಿರೋಧಿಗಳು ನಿಮಗೆ ವಿರುದ್ಧವಾಗಿ ಯಾವುದೇ ಪಿತೂರಿ ಮಾಡಬಹುದು, ಇದರಿಂದ ನೀವು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ತೊಂದರೆಕ್ಕೊಳಗಾಗಬಹುದು. ಧಾರ್ಮಿಕ ಆಚರಣೆ ಮಾಡಿ ಮತ್ತು ತಂದೆಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.

ಪರಿಹಾರ - ನೀವು ನಿಮ್ಮ ಕುತ್ತಿಗೆಯಲ್ಲಿ ಚಿನ್ನದ ಸೂರ್ಯನನ್ನು ಧರಿಸಿ, ಇದನ್ನು ನೀವು ಚಿನ್ನದ ಸರಪಳಿ ಅಥವಾ ಕೆಂಪು ದಾರದಲ್ಲಿ ಭಾನುವಾರದಂದು ಬೆಳಿಗ್ಗೆ ಎಂಟು ಗಂಟೆಗೆ ಮೊದಲು ಧರಿಸಬಹುದು.

ಕನ್ಯಾ ರಾಶಿಚಕ್ರ

ಕನ್ಯಾ ರಾಶಿಚಕ್ರದಲ್ಲಿ ಜನಿಸಿರುವ ಜನರಿಗೆ ಸೂರ್ಯ ದೇವ ಹನ್ನೆರಡನೇ ಮನೆಯ ಸ್ವಾಮಿ. ತನ್ನ ಮೀನಾ ರಾಶಿಚಕ್ರದಲ್ಲಿ ಸಂಚಾರದ ಸಮಯದಲ್ಲಿ ಸೂರ್ಯ ನಿಮ್ಮ ಏಳನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಾಗುವಿಕೆಯ ಪರಿಣಾಮದಿಂದಾಗಿ ನೀವು ವ್ಯಾಪಾರದ ವಿಷಯದಲ್ಲಿ ನೀವು ಅತ್ಯಂತ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ವ್ಯಾಪಾರವು ವೇಗವನ್ನು ಹಿಡಿಯುತ್ತದೆ ಮತ್ತು ನಿಮ್ಮ ವ್ಯಾಪಾರವು ವಿಸ್ತರಿಸುತ್ತದೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಮೂಲಕ ನೀವು ನಿಮ್ಮ ವ್ಯಾಪಾರದಲ್ಲಿ ಗಮನಾರ್ಹ ಲಾಭವನ್ನು ಪಡೆಯಬಹುದು. ನೀವು ಉದ್ಯೋಗದಲ್ಲಿದ್ದರೆ, ಸೂರ್ಯನ ಸಂಚಾರವು ನಿಮಗಾಗಿ ಸಂತೋಷದ ಉಡುಗೊರೆಯನ್ನು ತರಲಿದೆ ಮತ್ತು ನೀವು ಉತ್ತಮ ಸ್ಥಾನವನ್ನು ಪಡೆಯಬಹುದು ಮತ್ತು ಕೆಲವು ಗಮನಾರ್ಹ ಪರಿಸ್ಥಿತಿಗಳಲ್ಲಿ ನಿಮ್ಮ ಸಂಬಳ ಹೆಚ್ಚಾಗುತದೆ ಎಂದು ನಿರೀಕ್ಷಿಸಲಾಗಿದೆ.

ಈ ಸಾಗಣೆಯು ನಿಮಗೆ ಬಹಳಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ವಿದೇಶಿ ಮೂಲಗಳಿಂದಲೂ ನಿಮ್ಮ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ನೀವು ಪಡೆಯುತ್ತೀರಿ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ತೊಡಗಿರುವ ಜನರಿಗೆ ಸಂತೋಷದ ಸಮಯ ಬರಲಿದೆ. ಇದಕ್ಕೆ ವಿರುದ್ಧವಾಗಿ ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆ ಏಕೆಂದರೆ ಈ ಮನೆಯಲ್ಲಿ ಸೂರ್ಯನ ಸಾಗುವಿಕೆಯು ದಾಂಪತ್ಯ ಜೀವನಕ್ಕೆ ಉತ್ತಮವೆಂದು ಹೇಳಲಾಗುವುದಿಲ್ಲ. ಬೆಂಕಿಯ ಅಂಶದ ಸೂರ್ಯನು ನೀರಿನ ಅಂಶದ ರಾಶಿಯಲ್ಲಿ ದಾಂಪತ್ಯ ಜೀವನದಲ್ಲಿ ತಳಮಳಿಯನ್ನು ತರಬಹುದು ಮತ್ತು ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಯಾವುದೇ ಜಗಳವಾಗಬಹುದು. ಆದ್ದರಿಂದ ನೀವು ಕಾಳಜಿ ವಹಿಸಬೇಕು. ನಿಮ್ಮ ವ್ಯವಹಾರದ ನೀವು ಬಗ್ಗೆ ಗಮನ ಹರಿಸಿದರೆ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಪರಿಹಾರ - ನೀವು “ಓಂ ಸೂರ್ಯಾಯ ನಮಃ” ಮಂತ್ರವನ್ನು ಜಪಿಸಬೇಕು.

ತುಲಾ ರಾಶಿಚಕ್ರ

ನಿಮ್ಮ ರಾಶಿಚಕ್ರದ ಜನರಿಗೆ ಸೂರ್ಯ ದೇವ ಲಾಭದ ಮನೆಯ ಸ್ವಾಮಿ. ಏಕೆಂದರೆ ಅವರು ನಿಮ್ಮ ಹನ್ನೊಂದನೇ ಮನೆಯ ಮೇಲೆ ಅಧಿಕಾರವನ್ನು ಹೊಂದಿರುತ್ತಾರೆ. ಮೀನಾ ರಾಶಿಯಲ್ಲಿ ಸಂಚಾರದ ಕಾರಣದಿಂದಾಗಿ ಅವರು ನಿಮ್ಮ ರಾಶಿಚಕ್ರದಿಂದ ಆರನೇ ಮನೆಗೆ ಪ್ರವೇಶಿಸುತ್ತಾರೆ. ಆರನೇ ಮನೆಯಲ್ಲಿ ಸೂರ್ಯನ ಸಂಚಾರವು ಸಾಮಾನ್ಯವಾಗಿ ಲಾಭದಾಯಕವೆಂದು ಸಾಬೀತುಪಡಿಸುತ್ತದೆ, ಆದ್ದರಿಂದ ಈ ಗೋಚರದ ಸಮಯದಲ್ಲಿ ಕಾನೂನು ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ನೀವು ಯಾರ ಮೇಲಾದರೂ ಮೊಕದ್ದಮೆಯನ್ನು ಹಾಕಲು ಬಯಸುತ್ತಿದ್ದರೆ, ಅದರಲ್ಲಿ ಕೂಡ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಸ್ವಲ್ಪ ಕೊರತೆಯ ಸಾಧ್ಯತೆ ಇದೆ ಆದರೆ ಮುಂಬರುವ ಸಮಯದಲ್ಲಿ ಆರ್ಥಿಕವಾಗಿ ಬಲಗೊಳ್ಳಲು ನೀವು ಕೆಲವು ಕಠಿಣ ನಿರ್ಧಾರಗಳನ್ನು ಈ ಸಮಯದಲ್ಲಿ ತೆಗೆದುಕೊಳ್ಳಬಹುದು. ಸ್ವಲ್ಪ ವೆಚ್ಚಗಳಾಗಬಹುದು ಆದರೆ ಆಡಳಿತದ ಬೆಂಬಲವನ್ನು ನೀವು ಪಡೆಯುತ್ತೀರಿ.

ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಇದರ ಉತ್ತಮ ಫಲಿತಾಂಶವನ್ನು ನೀವು ನಿಮ್ಮ ಉದ್ಯೋಗದಲ್ಲಿ ಪಡೆಯಲಿದ್ದೀರಿ. ಅತ್ಯಂತ ವಿಷಯವೆಂದರೆ ಈ ಸಮಯದಲ್ಲಿ ನೀವು ನಿಮ್ಮ ಸಾಲ ಅಥವಾ ಬ್ಯಾಂಕ್ ಲೋನ್ ಅನ್ನು ಮರುಪಾವತಿಸುವಲ್ಲಿ ಯಶಸ್ಸು ಪಡೆಯುತ್ತೀರಿ. ಇದರಿಂದ ಸಾಕಷ್ಟು ಉತ್ತಮವಾದದ್ದನ್ನು ನೀವು ಅನುಭವಿಸುವಿರಿ. ಮಾಮ ಕಡೆಯವರೊಂದಿಗೆ ಹಣಕಾಸಿನ ಬಗ್ಗೆ ವಿವಾದವಾಗುವ ಸಾಧ್ಯತೆ ಇದೆ. ನಿಮಗೆ ಸಣ್ಣ ಪುಟ ಜ್ವರವಾಗುವ ಸಾಧ್ಯತೆ ಇದೆ ಆದರೆ ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ. ಈ ಸಾಗಣೆಯಿಂದಾಗಿ ನೀವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವಿಶೇಷ ಲಾಭವನ್ನು ಪಡೆಯಬಹುದು.

ಪರಿಹಾರ - ಭಾನುವಾರದಂದು ಅಸ್ವಸ್ಥ ಜನರಿಗೆ ನೀವು ಔಷಧಿಗಳನ್ನು ವಿತರಿಸಬೇಕು.

ವೃಶ್ಚಿಕ ರಾಶಿಚಕ್ರ

ವೃಶ್ಚಿಕ ರಾಶಿಚಕ್ರಕ್ಕಾಗಿ ಸೂರ್ಯ ದೇವರ ಬಹಳ ಪ್ರಮುಖ ಪಾತ್ರವಿದೆ ಏಕೆಂದರೆ ನಿಮ್ಮ ಹತ್ತನೇ ಮನೆಯ ಸ್ವಾಮಿಯಾಗಿದ್ದರೆ ಮತ್ತು ಹತ್ತನೇ ಮನೆ ಅಂದರೆ ಕರ್ಮದ ಮನೆ. ಸೂರ್ಯನ ಮೀನಾ ರಾಶಿಯಲ್ಲಿ ಸಾಗುವಿಕೆಯ ಕಾರಣದಿಂದಾಗಿ ನಿಮ್ಮ ರಾಶಿಚಕ್ರದಿಂದ ಐದನೇ ಮನೆಗೆ ಸಂಚರಿಸುತ್ತಾರೆ. ಇದರ ಪರಿಣಾಮದಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಏರಿಳಿತವನ್ನು ಎದುರಿಸಬೇಕಾಗಬಹುದು. ನೀವು ಉದ್ಯೋಗದಲ್ಲಿದ್ದರೆ ನೀವು ಅದನ್ನು ಬಲಾಯಿಸಲು ಅಥವಾ ಇನ್ನೊಂದು ಉದ್ಯೋಗವನ್ನು ಹುಡುಕಲು ಪ್ರಯತ್ನಿಸುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು, ಆದರೆ ಯಾವುದೇ ರೀತಿಯ ವ್ಯಾಪಾರದಲ್ಲಿ ತೊಡಗಿರುವವರು, ಈ ಸಾಗುವಿಕೆಯ ಸಾಕಷ್ಟು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ವ್ಯಾಪಾರಾದಲ್ಲಿ ಉತ್ತಮ ಹಣಕಾಸಿನ ಲಾಭವನ್ನು ಪಡೆಯಲಿದ್ದಾರೆ.

ಸಮಾಜದ ಪ್ರಭಾವಿ ಸಂಬಂಧದ ಮೂಲಕ ನೀವು ಲಾಭವನ್ನು ಪಡೆಯಲಾಗುವ ಸಮಯವಿದು. ಇದರಿಂದ ನೀವು ಸರಿಯಾದ ಫಲಿತಾಂಶವನ್ನು ಪಡೆಯುತ್ತೀರಿ. ಈ ಸಮಯಾವಧಿಯಲ್ಲಿ ನೀವು ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಯಾವುದೇ ದೊಡ್ಡ ಸುದ್ಧಿಯನ್ನು ಪಡೆಯಬಹುದು. ನೀವು ವಿಧ್ಯಾರ್ಥಿಯಾಗಿದ್ದರೆ, ಚೆನ್ನಾಗಿ ಮನಸ್ಸನ್ನು ಹೊಂದಿದ್ದು ಅಧ್ಯಯನ ಮಾಡುವ ಸಮಯ ಇದಾಗಿದೆ. ಈ ಸಮಯದಲ್ಲಿ ನಿಮ್ಮ ಆಲೋಚನೆಯಲ್ಲಿ ಸಂಪೂರ್ಣ ಬದಲಾವಣೆ ಬರಬಹುದು. ದೇಶ ಮತ್ತು ಜಗತ್ತಿನ ಘಟನೆಗಳಿಂದ ಸಾಕಷ್ಟು ಪ್ರಭಾವಿತರನ್ನಾಗಿ ಅನುಭವಿಸುವಿರಿ. ಉದ್ಯೋಗದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು.

ಪರಿಹಾರ - ನೀವು ತಾಮ್ರದ ಪಾತ್ರದಲ್ಲಿ ಕೆಂಪು ಮೆಣಸಿನಕಾಯಿಯ ಬೀಜವನ್ನು ನೀರಿನಲ್ಲಿ ಸೇರಿಸಿ ಸೂರ್ಯ ದೇವರಿಗೆ ಅರ್ಪಿಸಬೇಕು.

ಧನು ರಾಶಿಚಕ್ರ

ಧನು ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವರು ನಿಮ್ಮ ಅದೃಷ್ಟದ ಸ್ವಾಮಿಯಾಗಿದ್ದಾರೆ. ಏಕೆಂದರೆ ಇವರು ನಿಮ್ಮ ಜಾತಕದಲ್ಲಿನ ಒಂಬತ್ತನೇ ಮನೆಯಮೇಲೆ ಅಧಿಕಾರವನ್ನು ಹೊಂದಿರುತ್ತಾರೆ. ಸೂರ್ಯನ ಮೀನಾ ರಾಶಿಯಲ್ಲಿ ಸಂಚರಿಸುವ ಸಮಯದಲ್ಲಿ ನಿಮ್ಮ ರಾಶಿಚಕ್ರದಿಂದ ನಾಲ್ಕನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಾಗುವಿಕೆಯ ಪರಿಣಾಮದಿಂದಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. ಇದರಲ್ಲಿ ಕೌಟುಂಬಿಕ ಜೀವನದಲ್ಲಿ ಕೆಲವು ಅಸಮಾಧಾನ ಮತ್ತು ಸಾಮರಸ್ಯದ ಕೊರತೆಯನ್ನು ಕಾಣಬಹುದು ಮತ್ತು ನಿಮ್ಮ ಕುಟುಂಬದಲ್ಲಿ ವಿಶೇಷವಾಗಿ ನಿಮ್ಮ ತಾಯಿಯ ಆರೋಗ್ಯವು ಹದಗೆಡಬಹುದು.

ನೀವು ಕುಟುಂಬದ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು ಮತ್ತು ನಿಮ್ಮನ್ನು ನೀವು ಉತ್ತಮವರೆಂದು ತೋರಿಸಲು ಎಲ್ಲರಿಗಿಂತ ಮುಂದುವರಿಯಲು ಬಯಸುತ್ತೀರಿ, ಇದು ನಿಮ್ಮ ಕೌಟುಂಬಿಕ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇದಲ್ಲದೆ ಕುಟುಂಬದ ಸದಸ್ಯರೊಂದಿಗೆ ನೀವು ಕೆಲವು ಕಠಿಣ ಪದಗಳನ್ನು ಸಹ ಬಳಸಬಹುದು. ಇದಕ್ಕೆ ವಿರುದ್ಧವಾಗಿ ಕೆಲಸದ ಸ್ಥಳದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅದೃಷ್ಟದಿಂದ ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಗೌರವದೊಂದಿಗೆ ಉತ್ತಮ ಅಧಿಕಾರವನ್ನು ಸಹ ಪಡೆಯಲಿದ್ದೀರಿ.

ಕೆಲವು ಜನರು ಉದ್ಯೋಗದಲ್ಲಿ ವರ್ಗಾವಣೆಯ ನಂತರ ಉತ್ತಮ ಸ್ಥಾನವನ್ನು ಪಡೆಯಬಹುದು. ಇದರಿಂದ ಅವರು ತುಂಬಾ ಸಂತೋಷ ಪಡೆಯುತ್ತಾರೆ. ಇದರೊಂದಿಗೆ ಸರ್ಕಾರದಿಂದ ಯಾವುದೇ ಉತ್ತಮ ಲಾಭವನ್ನು ಪಡೆಯಬಹುದು ಮತ್ತು ಯಾವುದೇ ಆಸ್ತಿಯನ್ನು ಖರೀದಿಸಲು ಪ್ರಯತ್ನಿಸಬಹುದು. ಮನೆಯಿಂದ ದೂರ ವಾಸಿಸುತ್ತಿರುವ ಜನರು ಈ ಸಮಯದಲ್ಲಿ ಹಿಂತಿರುಗಿ ಬರುವ ಅವಕಾಶವನ್ನು ಪಡೆಯುತ್ತಾರೆ ಮತ್ತು ಕುಟುಂಬದ ಸದ್ಯರೊಂದಿಗೆ ಸೇರಿ ಅವರ ಹೃದಯವು ಭಾವನಾತ್ಮಕವಾಗುತ್ತದೆ.

ಪರಿಹಾರ - ನೀವು ಉತ್ತಮ ಗುಣಮಟ್ಟದ ಮಾಣಿಕ್ಯ ರತ್ನ ವನ್ನು ಧರಿಸಬೇಕು, ಇದನ್ನು ನೀವು ಶುಕ್ಲ ಪಕ್ಷದ ಭಾನುವಾರದಂದು ನಿಮ್ಮ ಉಂಗುರದ ಬೆರಳಿನಲ್ಲಿ ಧರಿಸಬಹುದು.

ಮಕರ ರಾಶಿಚಕ್ರ

ಮಕರ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ದೇವ ನಿಮ್ಮ ವಯಸ್ಸಿನ ಮನೆಯ ಅಧಿಪತಿ ಅಂದರೆ ಎಂಟನೇ ಮನೆಯ ಸ್ವಾಮಿ, ಆದರೆ ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯನು ಅಷ್ಟಮೇಶದ ದೋಷವನ್ನು ಹೊಂದಿರುವುದಿಲ್ಲ. ತನ್ನ ಪುತ್ರ ಶನಿಯ ಮಕರ ರಾಶಿಗೆ ಅವರ ತಂದೆ ಸೂರ್ಯ ದೇವ ಈ ಸಾಗುವಿಕೆಯಲ್ಲಿ ಮೂರನೇ ಮನೆಗೆ ಪ್ರವೇಶಿಸುತ್ತಾರೆ. ಸಾಮಾನ್ಯವಾಗಿ ಮೂರನೇ ಮನೆಯಲ್ಲಿ ಸೂರ್ಯನ ಸಾಗುವಿಕೆಯು ಅನುಕೂಲಕರವಾಗಿರುತ್ತದೆ. ಆದರೆ ಎಂಟನೇ ಮನೆಯ ಅಧಿಪತಿ ಮೂರನೇ ಮನೆಯಲ್ಲಿದ್ದಾಗ, ಆರೋಗ್ಯಕ್ಕಾಗಿ ಈ ಸಮಯವೂ ಸ್ವಲ್ಪ ದುರಾಬಲವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಈ ಸಂಚಾರದ ಕಾರಣದಿಂದಾಗಿ ನಿಮ್ಮ ಆರೋಗ್ಯದಲ್ಲಿ ಕುಸಿತವನ್ನು ಕಾಣಬಹುದು.

ಇಷ್ಟೇ ಅಲ್ಲದೆ, ನಿಮ್ಮ ತಂದೆ ತಾಯಿಯ ಆರೋಗ್ಯವು ಸಹ ದುರ್ಬಲವಾಗಿರುವ ಸಾಧ್ಯತೆ ಇದೆ. ಆದರೆ ನಿಮ್ಮ ಪ್ರಯತ್ನಗಳಲ್ಲಿ ಕೊರತೆ ಇರುವುದಿಲ್ಲ. ವ್ಯಾಪಾರದಲ್ಲಿ ನೀವು ಅಪಾಯವನ್ನು ತೆಗೆದುಕೊಳ್ಳುತ್ತೀರಿ ಮತ್ತು ಮುಂದುವರಿಯಲು ಪ್ರಯತ್ನಿಸುತ್ತೀರಿ. ಈ ಸಮಯದಲ್ಲಿ ಕೆಲವರು ಉದ್ಯೋಗದಲ್ಲಿ ಹೆಚ್ಚು ಆತ್ಮವಿಶ್ವಾಸದೊಂದಿಗೆ ತಮ್ಮ ಕೆಲಸವನ್ನು ಮಾಡುತ್ತಾರೆ. ಇದರ ಉತ್ತಮ ಫಲಿತಾಂಶವನ್ನು ಅವರು ಪಡೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಸಣ್ಣ ಪ್ರವಾಸಗಳನ್ನು ಸಹ ಮಾಡಬಹುದು ಮತ್ತು ಕುಟುಂಬದ ಸದಸ್ಯರೊಂದಿಗೆ ಯಾವುದಾದರು ತೀರ್ಥ ಯಾತ್ರೆಗೆ ಸಹ ಹೋಗಬಹುದು. ಈ ಸಮಯದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ನೀವು ನಿಮ್ಮ ಬಾಹುಬಲದಿಂದ ಸವಾಲುಗಳನ್ನು ಎದುರಿಸುವಿರಿ. ಈ ಸಂಚಾರವು ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ, ಆದ್ದರಿಂದ ಈ ಸಮಯದಲ್ಲಿ ನೀವು ಅವರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಪರಿಹಾರ - ಉತ್ತಮ ಆರೋಗ್ಯಕ್ಕಾಗಿ ನೀವು ಬನ್ನಿ ಮರವನ್ನು ಪೂಜಿಸಬೇಕು ಮತ್ತು ಅದಕ್ಕೆ ನೀರನ್ನು ಅರ್ಪಿಸಬೇಕು.

ಕುಂಭ ರಾಶಿಚಕ್ರ

ಸೂರ್ಯ ದೇವ ನಿಮ್ಮ ರಾಶಿಚಕ್ರಕ್ಕೆ ಏಳನೇ ಮನೆಯ ಸ್ವಾಮಿ ಮತ್ತು ಮೀನಾ ರಾಶಿಯಲ್ಲಿ ಸಂಚಾರದ ಕಾರಣದಿಂದಾಗಿ ಅವರು ನಿಮ್ಮ ರ್ಶಿಚಕ್ರದಿಂದ ಎರಡನೇ ಮನೆಯಲ್ಲಿ ಪ್ರವೇಶಿಸುತ್ತಾರೆ. ಈ ಸಾಗುವಿಕೆಯ ಪರಿಣಾಮದಿಂದಾಗಿ ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕೊರತೆಯನ್ನು ಕಾಣಬಹುದು ಮತ್ತು ನಿಮ್ಮ ಆರೋಗ್ಯವು ಸಹ ಕುಸಿಯಬಹುದು. ಈ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಮಧ್ಯೆ ಆಲೋಚನೆಗಳಲ್ಲಿ ಸಂಘರ್ಷದ ಸಾಧ್ಯತೆಯೂ ಇದೆ.

ಅಂತಹ ಸಂದರ್ಭದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು ಮತ್ತು ವಿಷಯ ದೊಡ್ಡದಾಗುವಂತಹ ಯಾವುದೇ ಕೆಲಸವನ್ನು ಮಾಡಬೇಡಿ. ನಿಮ್ಮ ಜೀವನ ಸಂಗಾತಿ ಕುಟುಂಬದ ಬಗೆಗಿನ ಎಲ್ಲಾ ಜವಾಬ್ದಾರಿಗಳನ್ನು ಬಹಳ ಉತ್ತಮವಾಗಿ ನಿರ್ವಹಿಸುತ್ತಾರೆ. ಇದರಿಂದ ಕುಟುಂಬದ ಸದಸ್ಯರಲ್ಲಿ ನಿಮ್ಮಿಬ್ಬರ ಸ್ಥಾನ ಹೆಚ್ಚಾಗುತ್ತದೆ ಮತ್ತು ಅವರು ನಿಮ್ಮಿಬ್ಬರ ಮೇಲೆ ತಮ್ಮ ಬಾಂಧವ್ಯವನ್ನು ತೋರಿಸುತ್ತಾರೆ. ವ್ಯಾಪಾರದ ವಿಷಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದೀರಿ ಮತ್ತು ಈ ಸಮಯದಲ್ಲಿ ಹಣಕಾಸು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಅಂದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ, ಆದರೆ ನಿಮ್ಮ ಮಾತನಾಡುವ ಸ್ವರದಲ್ಲಿ ಅಹಂಕಾರದ ವಾಸನೆ ಬರಬಹುದು. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಖಂಡಿತವಾಗಿಯೂ ನೀವು ಪ್ರಯತ್ನಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧವು ಹದಗೆಡಬಹುದು ಮತ್ತು ನಿಮ್ಮ ಪೂರ್ಣಗೊಳ್ಳುತ್ತಿರುವ ಕೆಲಸಗಳಲ್ಲಿ ಅಡಚಣೆಗಳು ಉಂಟಾಗಬಹುದು. ನೀವು ರಾಜಕೀಯದ ಕ್ಷೇತ್ರಕ್ಕೆ ಸಂಬಂಧಿಸಿದ್ದರೆ, ಈ ಸಮಯದಲ್ಲಿ ನಿಮ್ಮ ಸಾಮಾಜಿಕ ಚಿತ್ರವೂ ಉತ್ತಮಗೊಳ್ಳುತ್ತದೆ ಮತ್ತು ಜನರ ದೃಷ್ಟಿಯಲ್ಲಿ ನೀವು ಗೌರವವನ್ನು ಪಡೆಯುತ್ತೀರಿ.

ಪರಿಹಾರ - ಭಾನುವಾರದಂದು ನೀವು ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು.

ಮೀನಾ ರಾಶಿಚಕ್ರ

ಮೀನಾ ರಾಶಿಚಕ್ರದ ಜನರಿಗೆ ಸೂರ್ಯ ದೇವ ನಿಮ್ಮ ಆರನೇ ಮನೆಯ ಅಧಿಪತಿ ಮತ್ತು ತನ್ನ ಸಂಚಾರದ ಈ ಸಮಯದಲ್ಲಿ ನಿಮ್ಮ ಮೊದಲನೇ ಮನೆಯಲ್ಲಿ ಪ್ರವೇಶಿಸುತ್ತಾರೆ. ಆದ್ದರಿಂದ ಈ ಗೋಚಾರವು ನಿಮಗಾಗಿ ಬಹಳ ಪ್ರಮುಖವಾಗಿರುತ್ತದೆ. ಈ ಸಾಗುವಿಕೆಯ ಪರಿಣಾಮದಿಂದಾಗಿ ನಿಮ್ಮ ಆರೋಗ್ಯದಲ್ಲಿ ಕೊರತೆಯನ್ನು ಕಾಣಲಾಗುತ್ತದೆ ಮತ್ತು ನಿಮ್ಮ ಆರೋಗ್ಯವು ಏರಿಳಿತದಿಂದ ತುಂಬಿರುತ್ತದೆ.

ಈ ಸಮಯದಲ್ಲಿ ಗಮನಾರ್ಹವಾಗಿ ನೀವು ನಿಮ್ಮ ಆಹಾರ ಪಾನೀಯದ ಹವ್ಯಾಸವನ್ನು ಸುಧಾರಿಸಬೇಕು ಮತ್ತು ನಿಮ್ಮ ದೇಹದ ಬಗ್ಗೆ ಗಮನ ಹರಿಸಬೇಕು ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆ.ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಪ್ರಾಮುಖ್ಯತೆಯ ಸಂಘರ್ಷವಾಗಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಬಗ್ಗೆ ವಿಶೇಷಕಾಳಜಿ ವಹಿಸಬೇಕು ಏಕೆಂದರೆ ನಿಮ್ಮ ಕಡೆಯಿಂದ ತಪ್ಪಾಗುವ ಸಾಧ್ಯತೆ ಇದೆ. ವ್ಯಾಪಾರದ ವಿಷ್ಯದಲ್ಲಿ ಈ ಗೋಚರದ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ ಮತ್ತು ಮೊದಲಿಗಿಂತ ಉತ್ತಮವಾಗಿ ವ್ಯಾಪಾರ ನಡೆಸುವಲ್ಲಿ ನೀವು ಯಶಸ್ವಿಯಾಗುವಿರಿ. ಆದರೆ ನಿಮ್ಮ ಪಾಲುದಾರರೊಂದಿಗಿನ ನಿಮ್ಮ ಸಮಬಂಧದಲ್ಲಿ ಇದರ ಕೆಟ್ಟ ಪರಿಣಾಮ ಬೀರಬಹುದು. ದೂರಸ್ಥ ಪ್ರಯಾಣಗಳ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವ ಅವಕಾಶವನ್ನು ನೀವು ಪಡೆಯುತ್ತೀರಿ.

ಪರಿಹಾರ - ಭಾನುವಾರದಂದು ನೀವು ಬೆಲ್ಲ ಅಥವಾ ಗೋಧಿಯ ದಾನ ಮಾಡಬೇಕು.

ರತ್ನಕಲ್ಲು, ರುದ್ರಾಕ್ಷದೊಂದಿಗೆ ಎಲ್ಲ ಜ್ಯೋತಿಷ್ಯ ಪರಿಹಾರಗಳಿಗಾಗಿ ಕ್ಲಿಕ್ ಮಾಡಿ: ಆಸ್ಟ್ರೋಸೇಜ್ ಆನ್ ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer