ಮಂಗಳ ಸಂಚಾರ ಮಕರ ರಾಶಿಯಲ್ಲಿ - Mars Transit in Capricorn in Kannada

22 ಮಾರ್ಚ್, ಭಾನುವಾರ ಮಧ್ಯಾಹ್ನ 13:44 ಗಂಟೆಗೆ ಮಂಗಳ ಗ್ರಹವು ಧನು ರಾಶಿಚಕ್ರದಿಂದ ಮಕರ ರಾಶಿಯಲ್ಲಿ ಪ್ರವೇಶಿಸಲಿದೆ. ಇದು ಮಂಗಳದ ಉನ್ನತ ರಾಶಿಯಾಗಿದೆ, ಆದ್ದರಿಂದ ಇಲ್ಲಿ ಮಂಗಳ ಗ್ರಹವು ಸಾಕಷ್ಟು ಶಕ್ತಿಶಾಲಿಯಾಗುತ್ತದೆ. ಮಂಗಳ ಗ್ರಹ ಅಗ್ನಿ ಅಂಶದ ಗ್ರಹ ಮತ್ತು ಮಕರವು ಭೂಮಿಯ ಅಂಶದ ರಾಶಿ. ಈ ರೀತಿಯಲ್ಲಿ ಒಂದು ಬೆಂಕಿಯ ಅಂಶದ ಗ್ರಹವು ಭೂಮಿಯ ಅಂಶದ ರಾಶಿಚಕ್ರದಲ್ಲಿ ಪ್ರೇವೇಶಿಸಿದಾಗ ಮಂಗಳನ ಪ್ರಭಾವದಲ್ಲಿ ಹೆಚ್ಚಳವಾಗುತ್ತದೆ. ನಡೆಯಿರಿ ಈಗ ಮಕರ ರಾಶಿಯಲ್ಲಿ ಮಂಗಳನ ಸಂಚಾರದ ಪರಿಣಾಮವು ಎಲ್ಲಾ ಹನ್ನೆರಡು ರಾಶಿಚಕ್ರಗಳ ಮೇಲೆ ಹೇಗೆ ಬೀರುತ್ತದೆ ಎಂಬುದನ್ನು ತಿಳಿಯೋಣ.

ಈ ರಾಶಿ ಭವಿಷ್ಯ ಚಂದ್ರ ರಾಶಿಯನ್ನು ಆಧರಿಸಿದೆ. ನಿಮ್ಮ ಚಂದ್ರ ರಾಶಿ ತಿಳಿಯಿರಿ

ಮೇಷ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ರಾಶಿ ಸ್ವಾಮಿ ಆಗಿರುವುದರೊಂದಿಗೆ ನಿಮ್ಮ ಎಂಟನೇ ಮನೆಯ ಅಧಿಪತಿಯಾಗಿದೆ ಮತ್ತು ತನ್ನ ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ಹತ್ತನೇ ಮನೆಯಲ್ಲಿ ಕುಳಿತಿರುತ್ತದೆ. ಹತ್ತನೇ ಮನೆಯಲ್ಲಿ ಮಂಗಳ ಗ್ರಹವು ದಿಗ್ಬಲವನ್ನು ಪಡೆಯುತ್ತದೆ. ಈ ಕಾರಣದಿಂದಾಗಿ ಇನ್ನಷ್ಟು ಶಕ್ತಿಶಾಲಿಯಾಗುತ್ತದೆ. ಅದೇ ಸಮಯದ್ಲಲಿ ಮತ್ತೊಂದೆಡೆ ಉನ್ನತ ರಾಶಿಯಲ್ಲಿ ಮಂಗಳ ನೆಲೆಗೊಂಡ ಕಾರಣದಿಂದಾಗಿ ಅದರ ಸಂಪೂರ್ಣ ಪರಿಣಾಮವನ್ನು ನೀವು ಪಡೆಯಲಿದ್ದೀರಿ, ಇದರ ಪರಿಣಾಮದಿಂದಾಗಿ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಅದ್ಭುತ ಲಾಭದ ಸಾಧ್ಯತೆ. ನೀವು ಉನ್ನತ ಹುದ್ದೆಯನ್ನು ಪಡೆಯಬಹುದು ಮತ್ತು ನಿಮ್ಮ ಸಂಬಳವೂ ಹೆಚ್ಚಾಗಬಹುದು.

ನೀವು ಯಾವುದೇ ರೀತಿಯ ಕಾಂಟ್ರೊವರ್ಸಿಯಲ್ಲಿ ಬೀಳುವುದನ್ನು ಮತ್ತು ಹೆಚ್ಚು ಮನೋಬಲವನ್ನು ತಪ್ಪಿಸಬೇಕು. ಈ ಸಂಚಾರವು ನಿಮಗಾಗಿ ಸಾಕಷ್ಟು ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಕುಟುಂಬದ ಸದಸ್ಯರು ನಿಮ್ಮ ಬಡ್ತಿ ಕಾಣುವ ಸಂತೋಷವನ್ನು ಪಡೆಯುತ್ತಾರೆ. ಕುಟುಂಬದ ಬಗೆಗಿನ ನಿಮ್ಮ ಜವಾಬ್ದಾರಿಗಳನ್ನು ಸಹ ನೀವು ನಿರ್ವಹಿಸುತ್ತೀರಿ ಮತ್ತು ಇದ್ದಕ್ಕಿದ್ದಂತೆ ಕೆಲಸದಲ್ಲಿ ಲಾಭ ಪಡೆಯುವ ಯೋಗವು ರೂಪುಗೊಂಡಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಬಹಳ ಬಲವಾಗಿರುತ್ತದೆ ಮತ್ತು ದೀರ್ಘಕಾಲದ ರೋಗದಿಂದ ಮುಕ್ತರಾಗುವಿರಿ. ಈ ಸಮಯದಲ್ಲಿ ತಂದೆಯ ಆರೋಗ್ಯವು ದುರ್ಬಲಗೊಳ್ಳಬಹುದು. ಆದ್ದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರೀತಿ ಜೀವನಕ್ಕೆ ಈ ಸಮಯವೂ ಹೆಚ್ಚು ಅನುಕೂಲಕರವಾಗಿಲ್ಲ ಮತ್ತು ನಿಮ್ಮ ಸಂಬಂಧವು ದುರ್ಬಲವಾಗಿದ್ದರೆ ಈ ಸಂಚಾರದ ಪರಿಣಾಮದಿಂದಾಗಿ ಸಂಬಂಧದಲ್ಲಿ ಬೇರ್ಪಡುವಿಕೆ ಸಹ ಸಂಭವಿಸಬಹುದು ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ.

ಪರಿಹಾರ - ಮೂರು ಮುಖ ರುದ್ರಾಕ್ಷವನ್ನು ಕೆಂಪು ದಾರದಲ್ಲಿ ಹಾಕಿ ಮಂಗಳವಾರದಂದು ನೀವು ಧರಿಸಬಹುದು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ವೃಷಭ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಏಳನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಈ ಸಂಚದರ ಫಲಿತಾಂಶವನ್ನು ನೀವು ಶೀಘ್ರದಲ್ಲೇ ನೋಡಲಿದ್ದೀರಿ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನಿಮ್ಮ ಬಲದ ಮೇಲೆ ಅನೇಕ ದೊಡ್ಡ ಸವಾಲುಗಳನ್ನು ಬಹಳ ಸುಲಭವಾಗಿ ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ದೂರಸ್ಥ ಸ್ಥಳಗಳಿಗೆ ನೀವು ಪ್ರಯಾಣಿಸುವ ಸಾಧ್ಯತೆ ಇದೆ. ಕೆಲವು ಜನರು ವಿದೇಶಕ್ಕೆ ಹೋಗುವಲ್ಲಿ ಯಶಸ್ವಿಯಾಗುತ್ತಾರೆ.

ವ್ಯಾಪಾರದ ವಿಷಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯಲಿದ್ದೀರಿ ಎಂದು ನಿರೀಕ್ಷಿಸಲಾಗಿದೆ. ಸಮಾಜದಲ್ಲಿ ನಿಮ್ಮ ಸ್ಥಿತಿ ಹೆಚಾಗುತದೆ. ತಂದೆ ಅಥವಾ ತಂದೆಯಂತಹ ವ್ಯಕ್ತಿಯ ಆರೋಗ್ಯವು ಹದಗೆಡಬಹುದು. ಜೀವನ ಸಂಗಾತಿಯ ಮೂಲಕ ನೀವು ಯಾವುದೇ ದೊಡ್ಡ ಲಾಭವನ್ನು ಪಡೆಯಬಹುದು ಮತ್ತು ಸಮಾಜದಲ್ಲಿನ ನಿಮ್ಮ ಚಿತ್ರವು ಬಲಗೊಳ್ಳುತ್ತದೆ. ನಿಮ್ಮ ವೆಚ್ಚಗಳು ಕಡಿಮೆಯಾಗುವ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಈ ಸಾಗುವಿಕೆಯ ಸಮಯವು ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಸ್ವಲ್ಪ ದುರ್ಬಲವಾಗಿರಬಹುದು ಮತ್ತು ಈ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾಗಬಹುದು. ಕುಟುಂಬದ ಮೇಲೆ ಇದು ಉತ್ತಮ ಪರಿಣಾಮವನ್ನು ಬೀರುತ್ತದೆ ಮತ್ತು ಈ ಸಮಯದಲ್ಲಿ ನೀವು ಯಾವುದೇ ಆಸ್ತಿಯನ್ನು ಖರೀದಿಸಬಹುದು ಅಥವಾ ಹಳೆ ಮನೆಯಲ್ಲಿ ನಿರ್ಮಾಣದ ಕೆಲಸ ಮಾಡಬಹುದು. ವಿದೇಶದಲ್ಲಿ ವಾಸಿಸುವವರು ಅಥವಾ ತಮ್ಮ ಮನೆಯಿಂದ ದೂರ ವಾಸಿಸುತ್ತಿರುವ ಜನರು ಈ ಸಮಯದಲ್ಲಿ ಮನೆಗೆ ಮರಳಿ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರನ್ನು ಭೇಟಿಸುವಿರಿ ಮತ್ತು ಅವರೊಂದಿಗೆ ಸಮಯ ಕಳೆದು ನೀವಿ ಸಾಕಷ್ಟು ಸಂತೋಷಪಡುತ್ತೀರಿ.

ಪರಿಹಾರ - ನೀವು ಮಂಗಳವಾರದಂದು ರಕ್ತದಾನ ಮಾಡಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಮಿಥುನ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಆರನೇ ಮತ್ತು ಹನ್ನೊಂದನೇ ಮನೆಯ ಸ್ವಾಮಿ ಮತ್ತು ತನ್ನ ಸಂಚಾರದ ಸಮಯ್ದಲ್ಲಿ ಅವರು ನಿಮ್ಮ ಎಂಟನೇ ಮನೆಗೆ ಪ್ರವೇಶಿಸಲಿದ್ದಾರೆ. ಈ ಮನೆಯಲ್ಲಿ ಮಂಗಳನ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ ಆದ್ದರಿಂದ ನೀವು ಗಮನಾರ್ಹ ಕಾಳಜಿ ವಹಿಸಬೇಕು. ಮಂಗಳ ತನ್ನ ಉನ್ನತ ಸ್ಥಾನದಲ್ಲಿರುವ ಕಾರಣದಿಂದಾಗಿ ಇದರ ಪರಿಣಾಮವು ಹೆಚ್ಚು ಶಕ್ತಿಶಾಲಿಯಾಗಿರುವುದಿಲ್ಲ, ಈ ಕಾರಣದಿಂದಾಗಿ ನಿಮ್ಮ ಆರೋಗ್ಯದಲ್ಲಿ ಪತನ ಬರಬಹುದು. ನೀವು ಯಾವುದೇ ರೀತಿಯ ಗಾಯ ಅಥವಾ ಅಪಘಾತದ ಬಲಿಯಾಗಬಹುದು.

ರಕ್ತದ ಅನಿಯಮಿತತೆ, ಚರ್ಮ ಸಂಬಂಧಿತ ರೋಗ ಅಥವಾ ಗುದಕ್ಕೆ ಸಂಬಂಧಿಸಿದ ರೋಗವಾಗುವ ಸಾಧ್ಯತೆ ಇರಬಹುದು. ಈ ಸಮಯದಲ್ಲಿ ಕೆಲವು ಜನರು ಮತ್ತು ಅನಿರೀಕ್ಷಿತ ರೀತಿಯಿಂದ ಲಾಭವನ್ನು ಪಡೆಯಬಹುದು. ಇದ್ದಕ್ಕಿದ್ದಂತೆ ನೀವು ಹಣವನ್ನು ಪಡೆಯುವ ಸಾಧ್ಯತೆಯೂ ಇದೆ ಮತ್ತು ಪೂರ್ವಜರ ಆಸ್ತಿಯನ್ನು ಸಹ ಪಡೆಯಬಹುದು. ಯಾವುದೇ ವಿಷಯದ ಬಗ್ಗೆ ನಿಮ್ಮ ಅತ್ತೆ ಮನೆ ಕಡೆಯವರೊಂದಿಗೆ ನಿಮ್ಮ ವಿವಾದವಾಗಬಹುದು ಮತ್ತು ಯಾರಿದಾದರೂ ಆರೋಗ್ಯವು ಹದಗೆಡಬಹುದು. ನಿಮ್ಮ ಸಹೋದರ ಸಹೋದರಿಯರು ಸಹ ಈ ಸಮಯದಲ್ಲಿ ಯಾವುದೇ ಸಮಸ್ಯೆಯಿಂದ ಬಳಲಬಹುದು, ಆದ್ದರಿಂದ ಈ ಸಮಯದಲ್ಲಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಸಾಲವನ್ನು ಮರುಪಾವತಿಸಲು ಈ ಸಮಯ ಉತ್ತಮ ಮತ್ತು ನಿಮ್ಮ ಹೆಚ್ಚಿನ ಸಾಲಗಳನ್ನು ಈ ಸಮಯದಲ್ಲಿ ನಿವಾರಿಸಬಹುದು. ಈ ಸಮಯದಲ್ಲಿ ಕೆಲವು ವಿರೋಧಿಗಳು ನಿಮ್ಮನ್ನು ಕಾಡಬಹುದು, ಅವರ ಬಗ್ಗೆ ನೀವು ಜಾಗರೂಕರಾಗಿರಬೇಕು. ಉದ್ಯೋಗಕ್ಕೆ ಈ ಸಮಯ ಉತ್ತಮವಾಗಿರುತ್ತದೆ.

ಪರಿಹಾರ - ನೀವು ಮಂಗಳವಾರದಂದು ಕೆಂಪು ದಾಳಿಂಬೆಯ ದಾನ ಮಾಡಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಕರ್ಕ

ನಿಮ್ಮ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಸಂಯೋಜಕ ಗ್ರಹ ಏಕೆಂದರೆ ನಿಮ್ಮ ಕೇಂದ್ರ ಮನೆ ಮತ್ತು ತ್ರಿಕೋನ ಮನೆ ಅಂದರೆ ಹತ್ತನೇ ಮತ್ತು ಐದನೇ ಮನೆಯ ಮಾಲೀಕ. ಆದ್ದರಿಂದ ಈ ಸಾಂಚಾರವು ನಿಮಗೆ ಬಹಳಷ್ಟು ಮುಖ್ಯವಾಗಿದೆ. ತನ್ನ ಸಾಗುವಿಕೆಯ ಈ ಸಮಯದಲ್ಲಿ ಮಂಗಳ ತನ್ನ ಏಳನೇ ಮನೆಯಲ್ಲಿ ಕುಳಿತಿರುತ್ತದೆ. ಈ ಕಾರಣದಿಂದಾಗಿ ವ್ಯಾಪಾರದಲ್ಲಿ ಅದ್ಭುತ ಲಾಭವಾಗುತ್ತದೆ. ನೀವು ನಿಮ್ಮ ಎದುರಾಳಿಗಳನ್ನು ಸೋಲಿಸುವಿರಿ ಮತ್ತು ನಿಮ್ಮ ವ್ಯಾಪಾರಕ್ಕೆ ವೇಗ ಸಿಗಲಿದೆ.

ನಿಮ್ಮ ವ್ಯಾಪಾರವು ಬೆಳೆಯುತ್ತದೆ. ಇದಲ್ಲದೆ ನೀವು ಸಾಟಿಯಿಲ್ಲದ ಹಣವನ್ನು ಸಹ ಪಡೆಯಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ದಾಂಪತ್ಯ ಜೀವನಕ್ಕೆ ಈ ಗೋಚರವು ಹೆಚ್ಚು ಅನುಕೂಲಕರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ ಏಕೆಂದರೆ ಈ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧವು ಸ್ವಲ್ಪ ಮಟ್ಟಿಗೆ ಪ್ರಭಾವಿತವಾಗಬಹುದು. ಯಾವುದೇ ಕಾರಣವಿಲ್ಲದಿದ್ದರೂ ನಿಮ್ಮ ಸಂಗಾತಿಯ ಮೆದುಳು ಬಿಸಿಯಾಗಿರುತ್ತದೆ ಮತ್ತು ಅವರು ಪ್ರತಿಯೊಂದು ವಿಷಯದ ಬಗ್ಗೆ ಜಗಳವಾಡುವ ಸ್ಥಿತಿಯಲ್ಲಿರಬಹುದು. ಚಿಕ್ಕ ವಿಷಯ ದೊಡ್ಡದಾಗಬಹುದು. ಆದ್ದರಿಂದ ನೀವು ತಾಳ್ಮೆಯಿಂದಿರಬೇಕು. ಈ ಸಮಯದಲ್ಲಿ ನೀವು ಮಕ್ಕಳ ಸಂತೋಷವನ್ನು ಪಡೆಯಲಿದ್ದೀದೀರಿ. ಪ್ರೀತಿ ಸಂಬಂಧವು ಮದುವೆಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ಅಂದರೆ ಕೆಲವು ಜನರ ಪ್ರೀತಿ ಮದುವೆಯಾಗಬಹುದು. ಯಾರೊಂದಿಗಾದರೂ ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ನಡೆಸುತ್ತಿದ್ದರೆ ತಮ್ಮ ಪಾಲುದಾರರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಈ ಸಮಯದಲ್ಲಿ ನಿಮ್ಮಿಬ್ಬರ ನಡುವೆ ಯಾವುದೇ ವಿವಾದ ಅಥವಾ ಜಗಳವಾಗಬಹುದು. ವಿಶೇಷವಾಗಿ ನಿಮ್ಮ ನಡವಳಿಕೆಯ ಬಗ್ಗೆ ಗಮನ ಹರಿಸಿ. ಏಕೆಂದರೆ ಯಾವುದೇ ವಿಷಯದ ಬಗ್ಗೆ ನೀವು ಉಗ್ರರಾಗಬಹುದು ಮತ್ತು ನಿಮ್ಮ ಮಾನಸಿಕ ಒತ್ತಡವು ಹೆಚ್ಚಾಗಬಹುದು.

ಪರಿಹಾರ - ನೀವು ಮಂಗಳ ಯಂತ್ರವನ್ನು ಸ್ಥಾಪಿಸಿ ದೈನಂದಿನ ವಿಧಾನದೊಂದಿಗೆ ಅದನ್ನು ಪೂಜಿಸಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಸಿಂಹ

ನಿಮ್ಮ ರಾಶಿಚಕ್ರದ ಸ್ವಾಮಿ ಸೂರ್ಯನ ಆಪ್ತ ಸ್ನೇಹಿತ ಮಂಗಳ ಗ್ರಹವು ನಿಮಗಾಗಿ ಸಂಯೋಜಕವಾಗಿದೆ. ಏಕೆಂದರೆ ಅದು ನಿಮ್ಮ ಕೇಂದ್ರ ಮನೆ ಅಂದರೆ ನಾಲ್ಕನೇ ಮನೆ ಮತ್ತು ತ್ರಿಕೋನ ಮನೆ ಅಂದರೆ ಒಂಬತ್ತನೇ ಮನೆಯ ಮಾಲೀಕ. ತನ್ನ ಸಾಗುವಿಕೆಯ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ಆರನೇ ಮನೆಗೆ ಪ್ರವೇಶಿಸಲಿದ್ದಾರೆ. ಆರನೇ ಮನೆಯಲ್ಲಿರುವ ಮಂಗಳ ಗ್ರಹವು ಸಾಮಾನ್ಯವಾಗಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಉನ್ನತ ರಾಶಿಯಲ್ಲಿರುವ ಕಾರಣದಿಂದ ಇದರ ಪ್ರಭಾವವು ಇನ್ನಷ್ಟು ಹೆಚಾಗುತದೆ. ಈ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಕಾನೂನು ಪ್ರಕರಣದಲ್ಲಿ ಯಾವುದೇ ಕೇಸ್ ನಡೆಯುತ್ತಿದ್ದರೆ, ಅದರ ನಿರ್ಧಾರವು ನಿಮ್ಮ ಪರವಾಗಿ ಬರಬಹುದು, ಇದರಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ.

ನಿಮ್ಮ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಕಡೆಗೆ ಮುಂದುವರಿಯಲು ನೀವು ಅವಕಾಶವನ್ನು ಪಡೆಯುತ್ತೀರಿ. ನೀವು ಅದ್ಭುತ ಪರಿಶ್ರಮವನ್ನು ಮಾಡುವಿರಿ ಮತ್ತು ಅದರ ಫಲಿತಾಂಶವು ಸಹ ನಿಮಗೆ ಸಂಪೂರ್ಣ ರೀತಿಯಲ್ಲಿ ಸಿಗುತ್ತದೆ. ಅದೃಷ್ಟವು ಹೆಚ್ಚಾಗುತ್ತದೆ. ವೆಚ್ಚಗಳು ಕಡಿಮೆಯಾಗುತ್ತವೆ. ಆದಾಗ್ಯೂ ಸ್ವಭಾವತಃ ನೀವು ಸ್ವಲ್ಪ ಕೋಪದವರಾಗಬಹುದು, ಇದನ್ನು ನಿಯಂತ್ರಿಸುವುದು ಅತ್ಯಂತ ಅವಶ್ಯಕವಾಗಿದೆ. ಈ ಸಮಯದಲ್ಲಿ ನೀವು ವಾಹನವನ್ನು ಅತ್ಯಂತ ಜಾಗರೂಕತೆಯಿಂದ ಚಲಾಯಿಸಬೇಕು. ಏಕೆಂದರೆ ವಾಹನ ಅಪಘಾತ ಸಂಭವಿಸಬಹುದು. ಈ ಸಾಗುವಿಕೆಯ ಸಮಯದಲ್ಲಿ ನಿಮ್ಮ ತಂದೆಗೆ ಕೂಡ ತಮ್ಮ ವೃತ್ತಿಯಲ್ಲಿ ಉತ್ತಮ ಫಲಿತಾಂಶಗಳನು ಸಿಗುತ್ತವೆ. ಈ ಸಾಗುವಿಕೆ ನಿಮ್ಮ ಮಕ್ಕಳಿಗೆ ಕೂಡ ಉತ್ತಮವಾಗಿರುತ್ತದೆ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಪ್ರಗತಿ ಪಡೆಯುತ್ತಾರೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿದ್ದರೆ, ಅದರಲ್ಲಿ ನೀವು ಯಶಸ್ವಿಯಾಗುತ್ತೀರಿ ಎಂದು ನಿರೀಕ್ಷಿಸಲಾಗಿದೆ.

ಪರಿಹಾರ - ನೀವು ಮಂಗಳ ಗ್ರಹದ "ಓಂ ಅಂ ಅಂಗಾರಕಾಯ ನಮಃ" ಮಂತ್ರವನ್ನು ನಿಯಮಿತವಾಗಿ ಜಪಿಸಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಕನ್ಯಾ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಮೂರನೇ ಮತ್ತು ಎಂಟನೇ ಮನೆಯ ಸ್ವಾಮಿ. ಮಕರ ರಾಶಿಚಕ್ರದಲ್ಲಿ ತನ್ನ ಸಾಗುವಿಕೆಯ ಕಾರಣದಿಂದ ಇದು ನಿಮ್ಮ ಐದನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮಗೆ ಕೆಲವು ಅನಿರೀಕ್ಷಿತ ಲಾಭವಾಗುತ್ತದೆ ಮತ್ತು ನಿಮ್ಮ ಆದಾಯದಲ್ಲಿ ಅದ್ಭುತ ಹೆಚ್ಚಳವಾಗಬಹುದು. ನೀವು ಶೇರ್ ಮಾರ್ಕೆಟ್, ಬ್ಯಾಟಿಂಗ್, ಲಾಟರಿ, ಇತ್ಯಾದಿಗಳಿಂದ ಲಾಭವಾಗುವ ಪ್ರಬಲ ಸಾಧ್ಯತೆ ಇದೆ. ನೀವು ನಿರ್ಮಾಣದ ಕೆಲಸದಲ್ಲಿ ತೊಡಗಿದ್ದರು ಕೂಡ ಈ ಸಂಚಾರದ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ.

ನೀವು ವಿವಾಹಿತರಾಗಿದ್ದರೆ, ಈ ಸಂಚಾರವು ನಿಮ್ಮ ಮಕ್ಕಳಿಗೆ ಸಮಸ್ಯೆ ನೀಡಬಹುದು ಮತ್ತು ಅವರ ಆರೋಗ್ಯದ ಆಬಗ್ಗೆ ನೀವು ಚಿಂತೆಕ್ಕೊಳಗಾಗಬಹುದು. ಈ ಸಮಯದಲ್ಲಿ ನಿಮ್ಮ ಸ್ವತಃ ಪ್ರಯತ್ನಗಳಿಂದ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ಸ್ನೇಹಿತರೊಂದಿಗೆ ವಿವಾದವಾಗಬಹುದು. ಆದರೆ ಕೆಲವು ಹೊಸ ಸ್ನೇಹಿತರು ಸಹ ಆಗುತ್ತಾರೆ ಮತ್ತು ಕೆಲವು ಸಂಬಂಧಿಕರು ಅಥವಾ ನೆರೆಹೊರೆಯವರು ಯಾವುದೇ ವಿಶೇಷ ಸಹಾಯವನ್ನು ಸಹ ನಿಮಗೆ ಮಾಡಬಹುದು. ಶಿಕ್ಷಣದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಸಮಯವೂ ಬಹಳ ಉತ್ತಮವಾಗಿರುತ್ತದೆ ಮತ್ತು ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ವೆಚ್ಚಗಳು ನಿಯಂತ್ರಣದಲ್ಲಿರುತ್ತವೆ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಈ ಸಾಗಣೆಯ ಸಮಯದಲ್ಲಿ ಪ್ರಯಾಣಿಸುವಾಗ ನೀವು ಸ್ವಲ್ಪ ಜಾಗರೂಕರಾಗಿರಬೇಕು ಏಕೆಂದರೆ ಪ್ರಯಾಣ ಮಾಡುವುದರಿಂದಾಗಿ ದೈಹಿಕವಾಗಿ ನೀವು ತೊಂದರೆಕ್ಕೊಳಗಾಗಬಹುದು. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಕಠಿಣ ಕ್ಷಣಗಳನ್ನು ಸಹ ಎದುರಿಸಬೇಕಾಗಬಹುದು ಮತ್ತು ನಿಮ್ಮ ಪ್ರೀತಿ ಸಂಬಂಧದಲ್ಲಿ ವಿಚ್ಛೇದನೆ ಸಹ ಸಂಭವಿಸಬಹುದು. ಆದ್ದರಿಂದ ತಾಳ್ಮೆಯಿಂದಿರಿ ಮತ್ತು ಯಾವುದೇ ರೀತಿಯ ವಿವಾದವನ್ನು ಹೆಚ್ಚಿಸಬೇಡಿ.

ಪರಿಹಾರ - ನೀವು ಮಂಗಳವಾರದಂದು ಗೋಧಿ ಮತ್ತು ಬೆಲ್ಲದ ದಾನ ಮಾಡಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ತುಲಾ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಎರಡನೇ ಮತ್ತು ಏಳನೇ ಮನೆಯ ಮಾಲೀಕ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸಲಿದೆ. ಈ ಸಾಗಣೆಯ ಪರಿಣಾಮದಿಂದಾಗಿ ನಿಮ್ಮ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು, ಅದೇ ಸಮಯದಲ್ಲಿ ಮತ್ತೊಂದೆಡೆ ಜೀವನ ಸಂಗಾತಿ ಉದ್ಯೋಗದಲ್ಲಿದ್ದರೆ, ಅವರು ವೃತ್ತಿ ಜೇವನದಲ್ಲಿ ಯಾವುದೇ ದೊಡ್ಡ ಸ್ಥಾನವನ್ನು ಪಡೆಯಬಹುದು. ಉನ್ನತ ಸ್ಥಾನದೊಂದಿಗೆ ಅಧಿಕಾರಗಳು ಹೆಚ್ಚಾಗುತ್ತವೆ ಮತ್ತು ಅವರ ವೃತ್ತಿ ಉತ್ತಮವಾಗಿರುತ್ತದೆ.

ಅದೇ ಸಮಯದಲ್ಲಿ ಮತ್ತೊಂದೆಡೆ, ನಿಮ್ಮ ಕುಟುಂಬದಲ್ಲಿ ನಿಮ್ಮ ತಾಯಿಯ ಆರೋಗ್ಯವು ದುರ್ಬಲಗೊಳ್ಳಬಹುದು ಆದ್ದರಿಂದ ಅವರ ಬಗ್ಗೆ ನೀವು ಸ್ವಲ್ಪ ಗಮನ ಹರಿಸಬೇಕು. ಈ ಸಮಯದಲ್ಲಿ ನೀವು ಯಾವುದೇ ಹೊಸ ಆಸ್ತಿಯನ್ನು ಖರೀದಿಸಬಹುದು ಅಥವಾ ಯಾವುದೇ ಹಳೆ ಆಸ್ತಿಯ ಮೇಲೆ ನಿರ್ಮಾಣವನ್ನು ಮಾಡಿಸಬಹುದು. ಇದಲ್ಲದೆ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಥವಾ ಯಾವುದೇ ಆಸ್ತಿಯನ್ನು ಮಾರಾಟ ಮಾಡುವುದರಿಂದ ನಿಮಗೆ ಲಾಭವಾಗಬಹುದು. ದಾಂಪತ್ಯ ಜೀವನದ ದೃಷ್ಟಿಯಿಂದ ಈ ಸಮಯವು ಸ್ವಲ್ಪ ದುರ್ಬಲವಾಗಿರಬಹುದು. ಏಕೆಂದರೆ ಒಂದೆಡೆ ನಿಮ್ಮ ಜೀವನ ಸಂಗಾತಿ ತಮ್ಮ ಕೆಲಸದಲ್ಲಿ ಸಮಯ ನೀಡಿದರೆ ಅದೇ ಸಮಯದಲ್ಲಿ ಮತ್ತೊಂದೆಡೆ ಯಾವುದೇ ವಿಶೇಷ ವಿಷಯದ ಬಗ್ಗೆ ನಿಮ್ಮಿಬ್ಬರ ನಡುವೆ ತೀವ್ರ ವಿವಾದವಾಗುವ ಸಾಧ್ಯತೆ ಇದೆ. ಆದ್ದರಿಂದ ದಾಂಪತ್ಯ ಜೀವನದಲ್ಲಿ ಮಾಧುರ್ಯವನ್ನು ಕಾಪಾಡಿಕೊಳ್ಳಲು ನೀವು ಸ್ವಲ್ಪ ತಾಳ್ಮೆಯಿಂದಿರಬೇಕು. ಕೆಲಸದ ಸ್ಥಳದಲ್ಲಿ ಈ ಸಾಗುವಿಕೆಯ ಅನುಕೂಲಕರ ಪರಿಣಾಮ ಬೀರುತ್ತದೆ ಮತ್ತು ನೀವು ನಿಮ್ಮ ಮಾನೋಬಲದ ಕಾರಣದಿಂದ ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ಸಾಗಣೆಯ ಈ ಸಮಯದಲ್ಲಿ ವ್ಯಾಪಾರದಲ್ಲಿ ನಿಮಗೆ ಉತ್ತಮ ಫಲಿತಾಂಶಗಳು ಸಿಗಲಿವೆ.

ಪರಿಹಾರ - ಹಸುವಿಗೆ ಬೆಲ್ಲ ಮತ್ತು ಗೋಧಿಯನ್ನು ತಿನ್ನಿಸಬೇಕು

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ವೃಶ್ಚಿಕ

ಮಂಗಳ ಗ್ರಹದ ಯಾವುದೇ ಸಂಚಾರವು ನಿಮಗೆ ಬಹಳ ಪ್ರಮುಖವಾಗಿದೆ. ಏಕೆಂದರೆ ಮಂಗಳ ಗ್ರಹವು ನಿಮ್ಮ ರಾಶಿಚಕ್ರದ ಮಾಲೀಕ ಮತ್ತು ರಾಶಿಚಕ್ರದ ಸ್ವಾಮಿಯೊಂದಿಗೆ ಮಂಗಳ ನಿಮ್ಮ ಆರನೇ ಮನೆಯ ಸ್ವಾಮಿ. ಮಕರ ರಾಶಿಯಲ್ಲಿ ಮಂಗಳನ ಸಂಚರಿಸಿದಾಗ ಅದು ನಿಮ್ಮ ಮೂರನೇ ಮನೆಯಲ್ಲಿ ಪ್ರವೇಶಿಸುತ್ತಾರೆ. ಮೂರನೇ ಮನೆಯಲ್ಲಿ ಮಂಗಳನ ಸಂಚಾರವನ್ನು ಉತ್ತಮ ಎಂದು ಪರಿಗಣಿಸಲಾಗಿದೆ. ಇದರ ಅನುಕೂಲಕರ ಪರಿಮಗಲು ಅನುಭವದಲ್ಲಿ ಬರುತ್ತವೆ. ಈ ಸಂಚಾರದ ಪ್ರಮುಖ ಪ್ರಭಾವದ ಬಗ್ಗೆ ಮಾತನಾಡಿದರೆ, ಇದರಿಂದ ನಿಮ್ಮ ಧೈರ್ಯ ಮತ್ತು ಪರಾಕ್ರಮದಲ್ಲಿ ಬೆಳವಣಿಗೆಯಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ಹೊಳೆಯುತ್ತದೆ , ಇದರಿಂದ ನೀವು ದೂರದರ್ಶಿ ಆಲೋಚನೆಯೊಂದಿಗೆ ಯಾವುದೇ ಕೆಲಸ ಮಾಡಲು ಸಿದ್ಧರಾಗಿರುತ್ತೀರಿ ಮತ್ತು ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ನೀವು ವ್ಯಾಪಾರದಲ್ಲಿದ್ದರೆ, ಈ ಸಮಯದಲ್ಲಿ ನೀವು ನಿಮ್ಮ ಕೆಲಸಕ್ಕೆ ಬರಲಾಗುವಂತಹ ಯಾವುದೇ ಹೊಸ ನೀತಿಯನ್ನು ತಯಾರಿಸುತ್ತೀರಿ. ನೀವು ಉದ್ಯೋಗದಲ್ಲಿದ್ದರೆ, ಈ ಸಮಯದಲ್ಲಿ ನೀವು ನಿಮ್ಮ ಕೆಲಸವನ್ನು ಪೂಜೆಯೆಂದು ತುಂಬಾ ಪರಿಶ್ರಮಿಸುತ್ತೀರಿ ಮತ್ತು ನಿಮ್ಮ ಕೆಲಸದೊಂದಿಗೆ ನಿಮ್ಮೊಂದಿಗೆ ಕೆಲಸ ಮಾಡುವ ಜನರು ಸಹ ನಿಮ್ಮನ್ನು ಬೆಂಬಲಿಸುತ್ತಾರೆ. ನೀವು ಆಟಗಾರರಾಗಿದ್ದರೆ, ಈ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮಗೆ ನಿಮ್ಮ ಆಟಕ್ಕಾಗಿ ಯಾವುದೇ ಪ್ರಶಸ್ತಿಯನ್ನು ಸಹ ಪಡೆಯಬಹುದು. ನೀವು ನಿಮ್ಮ ಸ್ನೇಹಿತರೊಂದಿಗೆ ಉತ್ತಮವಾಗಿ ವರ್ತಿಸಬೇಕು ಮತ್ತು ಅವರೊಂದಿಗೆ ಯಾವುದೇ ರೀತಿಯ ವಿವಾದವನ್ನು ತಪ್ಪಿಸಬೇಕು. ಸಹೋದರ ಸಹೋದರಿಯ ಬಗ್ಗೆ ನೀವು ಸ್ವಲ್ಪ ಕಾಳಜಿ ವಹಿಸಬೇಕು ಏಕೆಂದರೆ ಈ ಅವರ ಆರೋಗ್ಯವು ಹದಗೆಡಬಹುದು. ಈ ಸಮಯದಲ್ಲಿ ನಿಮ್ಮ ಪ್ರವಾಸಗಳು ಹೆಚ್ಚಾಗಿರುತ್ತವೆ.

ಪರಿಹಾರ - ನೀವು ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಯಾವುದಾದರು ಉಡುಗೊರೆಯನ್ನು ನೀಡಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಧನು

ಧನು ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಐದನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಸಂಚಾರದ ಸಮಯದಲ್ಲಿ ನಿಮ್ಮ ಎರಡನೇ ಮನೆಯ ಮೇಲೆ ಮಂಗಳ ಗ್ರಹದ ವಿಶೇಷ ಪರಿಣಾಮ ಬೀರಲಿದೆ. ಏಕೆಂದರೆ ಇದು ನಿಮ್ಮ ಎರಡನೇ ಮನೆಯಲ್ಲಿ ಪ್ರವೇಶಿಸುತ್ತದೆ. ಈ ಸಾಗಣೆಯ ಕರಣಾದಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಕೆಲವು ಒತ್ತಡಗಳು ಹೆಚ್ಚಾಗಬಹುದು ಮತ್ತು ನಿಮ್ಮ ಕುಟುಂಬದಲ್ಲಿ ಯಾವುದೇ ಆಸ್ತಿ ಅಥವಾ ಯಾವುದೇ ಇತರ ವಿಷಯದ ಬಗೆ ವಿವಾದವು ಉದ್ಭವಿಸಬಹುದು.

ಈ ಸಮಯದಲ್ಲಿ ನೀವು ಕಹಿಯಾಗಿ ಮಾತನಾಡಬಾರದು ಏಕೆಂದರೆ ಆ ಮಾತು ಎಲ್ಲರಿಗೂ ತಪ್ಪನಿಸಬಹುದು ಮತ್ತು ಅದರಿಂದ ನಿಮ್ಮ ಸಂಬಂಧಗಳು ಹದಗೆಡಬಹುದು. ಈ ಸಮಯದಲ್ಲಿ ಮಕ್ಕಳ ಕಡೆಯಿಂದ ನಿಮಗೆ ಸಂತೋಷ ಸಿಗುತ್ತದೆ ಮತ್ತು ನಿಮಗೂ ಹಣಕಾಸಿನ ಲಾಭವಾಗುವ ಪ್ರಬಲ ಸಾಧ್ಯತೆ ಇದೆ. ವಿದೇಶಿ ಮೂಲಗಳಿಂದ ಅಥವಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಮಯದಲ್ಲಿ ಹೆಚ್ಚು ಲಾಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವಿಶೇಷವಾಗಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರಿವ ವಿದ್ಯಾರ್ಥಿಗಳಿಗೆ ಈ ಸಂಚಾರವು ಸುವರ್ಣದ ಕೆಲಸ ಮಾಡುತ್ತದೆ. ಪ್ರೀತಿ ಜೀವನಕ್ಕೆ ಈ ಸಮಯವು ಏರಿಳಿತದಿಂದ ತುಂಬಿರುತ್ತದೆ. ಒಂದೆಡೆ ನಿಮ್ಮ ಪ್ರೀತಿಪಾತ್ರರ ಬಗೆಗಿನ ನಿಮ್ಮ ಪ್ರೀತಿ ಕಾಣುತ್ತಿದ್ದರೆ, ಮತ್ತೊಂದೆಡೆ ಅವರು ಯಾವುದೇ ಅಸಮಾಧಾನದಲ್ಲಿರುತ್ತಾರೆ ಮತ್ತು ನಿಮ್ಮ ಕುಟುಂಬದ ಸದಸ್ಯರು ಅವರ ವರ್ತನೆಯನ್ನು ಇಷ್ಟಪಡದಿರಬಹುದು. ಅಂತಹ ಸಂದರ್ಭದಲ್ಲಿ ನೀವು ಮಧ್ಯಸ್ಥಿಕೆಯನ್ನು ಹೊಂದಬೇಕು .

ಪರಿಹಾರ - ಮಂಗಳನ ಶುಭ ಫಲಿತಾಂಶವನ್ನು ಪಡೆಯಲು ನೀವು ಮಂಗಳ ಬೀಜ ಮಂತ್ರವನ್ನು ಜಪಿಸಬೇಕು "ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ".

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಮಕರ

ಮಕರ ರಾಶಿಚಕ್ರಕ್ಕೆ ಮಂಗಳ ಗ್ರಹವು ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ತನ್ನ ಈ ಸಾಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಮನೆ ಅಂದರೆ ನಿಮ್ಮದೇ ರಾಶಿಚಕ್ರದಲ್ಲಿ ಪ್ರವೇಶಿಸಲಿದ್ದಾರೆ. ಆದ್ದರಿಂದ ಈ ಸಂಚಾರದ ಪರಿಣಾಮವು ಪ್ರಮುಖವಾಗಿ ನಿಮ್ಮ ಮೇಲು ಕಂಡುಬರುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ವರ್ತನೆಯಲ್ಲಿ ಕೆಲವು ಬಲಾವಣೆಯನ್ನು ಕಾಣಲಾಗುತ್ತದೆ. ನೀವು ಸ್ವಲ್ಪ ಉಗ್ರರಾಗುವ ಸಾಧ್ಯತೆ ಇದೆ, ಆದ್ದರಿಂದ ನೀವು ಸಂಯಮದಿಂದಿರಲು ನಿಮಗೆ ಸಲಹೆ ನೀಡಲಾಗಿದೆ. ಯಾವುದೇ ಕ್ಷೇತ್ರವಾಗಿರಲಿ ನೀವು ಧೈರ್ಯದಿಂದ ಮಾತನಾಡಿದರೆ ಉತ್ತಮವಾಗಿರುತ್ತದೆ.

ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಯಾವುದೇ ವಿಷಯದ ಬಗ್ಗೆ ಜೀವನ ಸಂಗಾತಿಯೊಂದಿಗೆ ನಿಮ್ಮ ಜಗಳ ಸಂಭವಿಸಬಹದು ಏಕೆಂದರೆ ನೀವು ನಿಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಮತ್ತು ತಪ್ಪು ಮಾತುಗಳನ್ನು ಹೇಳಬಹುದು. ವ್ಯಾಪಾರದ ವಿಷಯದಲ್ಲಿ ಈ ಸಂಚಾರ ಸಾಮಾನ್ಯವಾಗಿರುತ್ತದೆ ಮತ್ತು ಭಾಗಶಃ ಉತ್ತಮ ಫಲಿತಾಂಶಗಳು ಸಿಗಬಹುದು. ಇದು ನೀವು ಯಾವುದೇ ಆಸ್ತಿಯನ್ನು ಖರೀದಿಸುವ ಸಮಯ ಮತ್ತು ಅದರಲ್ಲಿ ಯಾವುದೇ ನಿರ್ಮಾಣ ಮಾಡುವಲ್ಲಿಯೂ ನೀವು ಯಶಸ್ಸು ಪಡೆಯುತ್ತೀರಿ. ಈ ಸಮಯದಲ್ಲಿ ಕೆಲವರು ಮನೆ ಬದಲಾಯಿಸುವಲ್ಲಿ ಯಶ್ವಸಿಯಾಗುತ್ತಾರೆ. ನಿಮ್ಮ ಆದಾಯವನ್ನು ನೀವು ನಿಮ್ಮ ಮೇಲೆ ಖರ್ಚಿಸುವಿರಿ. ಇದರಿಂದ ನಿಮ್ಮ ವೆಚ್ಚಗಳಾಗುತ್ತವೆ ಆದರೆ ನೀವು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು, ಆದ್ದರಿಂದ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಪರಿಹಾರ - ಮಂಗಳವಾರದಂದು ಯಾವುದೇ ಉದ್ಯಾನ ಅಥವಾ ದೇವಾಲಯದಲ್ಲಿ ದಾಳಿಂಬೆ ಸಸ್ಯವನ್ನು ನೆಡಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಕುಂಭ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಮಂಗಳ ಗ್ರಹವು ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಾಗುವಿಕೆಯ ಈ ಸಮಯದಲ್ಲಿ ಅವರು ನಿಮ್ಮ ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾರೆ. ನಿಮ್ಮ ಹಾತ್ತಾನೆ ಮನೆಯ ಅಧಿಪತಿಯಾಗಿರುವ ಕಾರಣದಿಂದ ಕೆಲಸದ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು ಮತ್ತು ನಿಮ್ಮ ವರ್ಗಾವಣೆಯು ಸಂಭವಿಸಬಹುದು. ಕುಂಭ ರಾಶಿಚಕ್ರದ ಕೆಲವು ಸ್ಥಳೀಯರು ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘಕಾಲದ ಪ್ರಯಾಣಗಳಿಗೆ ಹೋಗಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಸ್ವಲ್ಪ ಹೆಚ್ಚಾಗುತ್ತವೆ ಮತ್ತು ಆರೋಗ್ಯದಲ್ಲಿ ಸ್ವಲ್ಪ ಬಳಲಬಹುದು. ಆದ್ದರಿಂದ ನೀವು ನಿಮ್ಮ ಕೆಲಸದೊಂದಿಗೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ನಿಮ್ಮ ಕುಟುಂಬದ ಕಿರಿಯ ಸಹೋದರ ಸಹೋದರಿಯರಂತಹ ಒಬ್ಬ ವ್ಯಕ್ತಿ ವಿದೇಶಕ್ಕೆ ಹೋಗಬಹುದು. ಆದಾಗ್ಯೂ ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಮತ್ತೊಂದೆಡೆ ನಿಮ್ಮ ದಾಂಪತ್ಯ ಜೀವಾಂದಲ್ಲಿ ಕೆಲವು ಸಮಸ್ಯೆಗಳು ಹೆಚ್ಚಾಗಬಹುದು ಮತ್ತು ಜೀವನ ಸಂಗಾತಿಯು ಒತ್ತಡದ ಪರಿಸ್ಥಿತಿಯನ್ನು ಅನುಭವಿಸಬಹುದು. ಈ ಸಮಯದಲ್ಲಿ ನೀವು ಕಣ್ಣಿನ ಸಮಸ್ಯೆ ಅಥವಾ ನಿದ್ರಾಹೀನತೆಯ ಸಮಸ್ಯೆಯನ್ನು ಹೊಂದಿರಬಹುದು. ಆರೋಗ್ಯದ ಬಗ್ಗೆ ಕೆಲವು ವೆಚ್ಚಗಳಾಗಬಹುದು. ವಿದೇಶದಲ್ಲಿ ವಾಸಿಸುತ್ತಿರುವ ಜನರು, ಮನೆಯಿಂದ ದೂರ ಆಸ್ತಿ ಖರೀದಿಸುವಲ್ಲಿ ಉತ್ತಮ ಯಶಸ್ಸನ್ನು ಕೈಗೊಳ್ಳುತ್ತಾರೆ. ನಿಮ್ಮ ಸಹೋದರ ಸಹೋದರಿಯರು ಈ ಸಮಯದಲ್ಲಿ ಉದ್ಯೋಗದಲ್ಲಿ ಪ್ರಗತಿ ಪಡೆಯಬಹುದು.

ಪರಿಹಾರ - ನೀವಾಗಿ ನೀವೇ ಮಂಗಳವಾರದಂದು ರಕ್ತದಾನ ಮಾಡಬೇಕು ಮತ್ತು ನಿಮ್ಮ ಕಿರಿಯ ಸಹೋದರ ಸಹೋದರಿಯರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ಮೀನಾ

ನಿಮ್ಮ ರಾಶಿಚಕ್ರಕ್ಕೆ ಮಂಗಳ ನಿಮ್ಮ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಾಗಣೆಯ ಈ ಸಮಯದಲ್ಲಿ ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತಾನೆ. ಮಂಗಳ ನಿಮ್ಮ ಅದೃಷ್ಟ ಸ್ಥಾನದ ಮಾಲೀಕ ಆದ್ದರಿಂದ ಈ ಸಾಗುವಿಕೆ ನಿಮಗೆ ಬಹಳ ಪ್ರಮುಖವಾಗಿದೆ. ಹನ್ನೊಂದನೇ ಮನೆಯಲ್ಲಿ ಮಂಗಳನ ಹೋಗುವಿಕೆ ಇಂದಾಗಿ ನಿಮ್ಮ ಕೆಲಸಗಳಲ್ಲಿ ವೇಗ ಬರಲಾಗುತ್ತದೆ ಮತ್ತು ಸಿಲುಕಿಕೊಂಡಿರುವ ನಿಮ್ಮ ಯೋಜನೆಗಳು ಈ ಸಮಯದಲ್ಲಿ ಪೂರ್ಣಗೊಳ್ಳಲು ಆರಂಭಿಸುತ್ತವೆ. ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುತ್ತದೆ. ಅವರ ಮೂಲಕ ನಿಮ್ಮ ಯಾವುದೇ ಕೆಲಸವನ್ನು ಕೆಡಿಸಲು ಸಾಧ್ಯವಾಗುವುದಿಲ್ಲ. ಕಾನೂನು ಪ್ರಕರಣದಲ್ಲಿನ ವಿಷಯಗಳಲ್ಲಿ ನಿಮಗೆ ಪ್ರಯೋಜನವಾಗುತ್ತದೆ ಅಮ್ತ್ತು ಅವುಗಳಿಂದ ನಿಮಗೆ ಲಾಭವಾಗುತ್ತದೆ. ಕುಟುಂಬದ ಸದಸ್ಯರು ನಿಮ್ಮ ಕೆಲಸದಲ್ಲಿ ಹೂಡಿಕೆ ಮಾಡಬಹುದು ಮತ್ತು ನಿಮಗೆ ಆರ್ಥಿಕ ಸಹಾಯ ಮಾಡಬಹುದು.

ಈ ಸಮಯದಲ್ಲಿ ಆರ್ಥಿಕವಾಗಿ ನೀವು ಬಲಗೊಳ್ಳುತ್ತಿರಿ ಮತ್ತು ನಿಮ್ಮ ಸಾಮಾಜಿಕ ಮತ್ತು ಎತ್ತರವಾಗುತ್ತದೆ ಮತ್ತು ನಿಮ್ಮ ಸಾಮಾಜಿಕ ವಲಯವನ್ನು ಹೆಚ್ಚಿಸುವಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಶಿಕ್ಷಣದ ಕ್ಷೇತ್ರದಲ್ಲಿ ಈ ಸಮಯದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು ಮತ್ತು ನೀವು ವಿಚಲಿತರಾಗಬಹುದು. ಈ ಸಮಯದಲ್ಲಿ ಹಿರಿಯ ಅಧಿಕಾರಿಗಳೊಂದಿಗಿನ ನಿಮ್ಮ ಸಂಬಂಧವನ್ನು ನೀವು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಅವರೊಂದಿಗೆ ಜಗಳ ಸಂಭವಿಸಬಹುದು ಮತ್ತು ಅದರ ಪರಿಣಾಮವು ನಿಮ್ಮ ಕೆಲಸದ ಮೇಲೆ ಕಾಣುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳನ್ನು ದೈಹಿಕ ನೋವು ಕಾಡಬಹುದು ಅದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಾಗಿವಿಕೆಯ ಎರಡನೇ ಭಾಗವೇನೆಂದರೆ ಈ ಸಮಯದಲ್ಲಿ ನಿಮ್ಮ ತಂದೆಗೆ ಲಾಭವಾಗುತ್ತದೆ ಮತ್ತು ಅವರ ವೃತ್ತಿ ಜೀವನದಲ್ಲಿ ಪ್ರಗತಿಯಾಗಬಹುದು.

ಪರಿಹಾರ - ನೀವು ಮಂಗಳ ಯಂತ್ರವನ್ನು ಸ್ಥಾಪಿಸಿ, ನಿಯಮಿತವಾಗಿ ಅದನ್ನು ಪೂಜಿಸಬೇಕು.

ಶುಕ್ರ ಸಂಚಾರದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿಯಲ್ಲಿ ಶುಕ್ರ ಸಂಚಾರ

ರತ್ನದ ಕಲ್ಲು, ರುದ್ರಾಕ್ಷಗಳೊಂದಿಗೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಕ್ಲಿಕ್ ಮಾಡಿ : ಆಸ್ಟ್ರೋಸೇಜ್ ಆನ್ ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 399/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer