ರಾಹು ಗ್ರಹದ 12 ಮನೆಗಳಲ್ಲಿ ಫಲಿತಾಂಶ ಲಾಲ್ ಕಿತಾಬ್ ಪುಸ್ತಕದ ಪ್ರಕಾರ
ಲಾಲ್ ಕಿತಾಬ್ ನಲ್ಲಿ, ರಾಹು ಗ್ರಹವನ್ನು ವಿನಾಶಕಾರಿ ಗ್ರಹ ಎಂದು ವಿವರಿಸಲಾಗಿದೆ. ರಾಹುವಿನ ಪರಿಣಾಮವು ತೇವಾ (ಜಾತಕ) ದ 12 ಮನೆಗಳಲ್ಲಿ ವಿವಿಧ ರೂಪಗಳಲ್ಲಿ ಬೀರುತ್ತದೆ. ಆದರೆ ರಾಹು ಯಾವಾಗಲೂ ವ್ಯಕ್ತಿಗೆ ಕೆಟ್ಟ ಫಲವನ್ನು ನೀಡುತ್ತಾನೆ ಎಂಬುದು ಏನು ಇಲ್ಲ. ಈ ಗ್ರಹವು ಜಾತಕದಲ್ಲಿ ಉತ್ತಮವಾಗಿದ್ದರೆ ಜಾತಕದ ವ್ಯಕ್ತಿ ಇದರ ಉತ್ತಮ ಫಲಿತಾಂಶವನ್ನು ಪಡೆಯುತ್ತಾನೆ. ನಮಗೆ ತಿಳಿದಿರುವಂತೆ ಜಾತಕದ ಹನ್ನೆರಡು ಮನೆಗಳು ವ್ಯಕ್ತಿಯ ಜೀವನದಿಂದ ಸಾಯುವವರೆಗಿನ ಪ್ರಯಾಣದ ಬಗ್ಗೆ ಹೇಳುತ್ತದೆ. ಆದ್ದರಿಂದ, ಲಾಲ್ ಕಿತಾಬ್ ಪ್ರಕಾರ, ರಾಹು 12 ಮನೆಗಳಲ್ಲಿ ಹೇಗೆ ಪ್ರಭಾವ ಬೀರುತ್ತಾನೆ ಎಂಬುದನ್ನು ನಾವು ತಿಳಿದುಕೊಳ್ಳುವುದು ಅವಶ್ಯಕ:--
ಲಾಲ್ ಕಿತಾಬ್ನಲ್ಲಿ ರಾಹು ಗ್ರಹದ ಮಹತ್ವ
ಜ್ಯೋತಿಷ್ಯ ವಿಜ್ಞಾನ ಕ್ಷೇತ್ರದಲ್ಲಿ, ಕೆಂಪು ಪುಸ್ತಕವು ಅದರ ಸುಲಭ ಪರಿಹಾರಕ್ಕಾಗಿ ಹೆಚ್ಚು ಪ್ರಚಲಿತವಾಗಿದೆ. ಆದಾಗ್ಯೂ, ಜ್ಯೋತಿಷ್ಯಕ್ಕೆ ಸಂಬಂಧಿಸಿದ ಈ ಪುಸ್ತಕದಲ್ಲಿ ವ್ಯಾಪಕವಾದ ಜ್ಞಾನವಿದೆ. ಆದರೆ ಇದು ವೈದಿಕ ಜ್ಯೋತಿಷ್ಯಕ್ಕಿಂತ ಭಿನ್ನವಾಗಿದೆ. ಲಾಲ್ ಕಿತಾಬ್ ಪ್ರಕಾರ, ರಾಹು ಗ್ರಹವು ಎಲ್ಲವನ್ನೂ ನಾಶಪಡಿಸುವ ಗ್ರಹವಾಗಿದೆ. ಆದರೆ ಇದು ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳನ್ನು ಉಂಟುಮಾಡುವ ಗ್ರಹ.
ವೈದಿಕ ಜ್ಯೋತಿಷ್ಯದ ಪ್ರಕಾರ, ರಾಹು ಭೌತಿಕ ರೂಪವಿಲ್ಲದ ನೆರಳು ಗ್ರಹ. ಇದಕ್ಕೆ ಯಾವುದೇ ಭೌತಿಕ ರೂಪವಿಲ್ಲ. ಹಿಂದೂ ಜ್ಯೋತಿಷ್ಯದಲ್ಲಿ, ರಾಹುವನ್ನು ಪಾಪ ಗ್ರಹವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ, ರಾಹು ಗ್ರಹವು ಯಾವುದೇ ಮಾಲೀಕತ್ವವನ್ನು ಹೊಂದಿಲ್ಲ, ಆದರೆ ಮಿಥುನ ರಾಶಿಚಕ್ರದಲ್ಲಿ ಇದು ಉತ್ತಮವಾಗಿ ಮತ್ತು ಧನು ರಾಶಿಚಕ್ರದಲ್ಲಿ ಬೂರ್ಬಲವಾಗಿ ಇರುತ್ತದೆ ಎಂದು ಪರಿಗಣಿಸಲಾಗಿದೆ.
ಲಾಲ್ ಕಿತಾಬ್ ಪ್ರಕಾರ ಸೂರ್ಯನೊಂದಿಗೆ ಶನಿ ಅಥವಾ ಶುಕ್ರನಿದ್ದರೆ ರಾಹುವಿನ ಪರಿಣಾಮವು ನಿಧಾನವಾಗುತ್ತದೆ. ಆದಾಗ್ಯೂ ಬೂರ್ಬಲ ರಾಹುವು ಚಂದ್ರನ ಪರಿಹಾರಗಳಿಗೆ ಸಹಾಯಕನಾಗುತ್ತಾನೆ. ಏಕೆಂದರೆ ಚಂದ್ರನಿಂದ ರಾಹು ಶಾಂತನಾಗುತ್ತಾನೆ. ಆದರೆ ರಾಹುವನ್ನು ಶಾಂತಗೊಳಿಸುವಾಗ ಚಂದ್ರನ ಪರಿಣಾಮವು ದುರ್ಬಲವಾಗುತ್ತದೆ.
ವ್ಯಕ್ತಿಯ ಜಾತಕದ ಟೇವಾದಲ್ಲಿನ ಚಂದ್ರನು ಪ್ರಬಲವಾಗಿದ್ದರೆ ಅದು ರಾಹುವನ್ನು ನಿಯಂತ್ರಣದಲ್ಲಿಡುತ್ತಾನೆ. ಲಾಲ್ ಕಿತಾಬ್ ಪ್ರಕಾರ, ಬುಧ, ಶನಿ ಮತ್ತು ಕೇತುವು ರಾಹುವಿನ ಸ್ನೇಹಿತ ಗ್ರಹಗಳು. ಸೂರ್ಯ, ಮಂಗಳ ಮತ್ತು ಶುಕ್ರವನ್ನು ರಾಹುವಿನ ಶತ್ರು ಗ್ರಹಗಳೆಂದು ಪರಿಗಣಿಸಲಾಗುತ್ತದೆ.
ರಾಹು ಗ್ರಹದ ಅಂಶಗಳು
ರಾಹು ಮಾನವ ಮೆದುಳಿನಲ್ಲಿ ಒಳ್ಳೆಯ ಆಲೋಚನೆಗಳಿಗೆ ಜನ್ಮ ನೀಡುತ್ತಾನೆ. ಇದರ ಪಾತ್ರ ನೀಲಿ. ಆದ್ದರಿಂದ ನೀಲಿ ಬಣ್ಣದ ವಿಷ, ನೀಲಿ ಥಂಪ್ ಇತ್ಯಾದಿ. ತಮ್ಮ ಪ್ರಭಾವವನ್ನು ತೋರಿಸಿ ನೀಲಿ ಬಣ್ಣವನ್ನು ನೀಡುವವರು, ಎಲ್ಲರೂ ರಾಹುವನ್ನು ಪ್ರತಿನಿಧಿಸುತ್ತಾರೆ. ಆನೆ, ಬೆಕ್ಕು, ನಾಣ್ಯ, ಶತ್ರುಗಳು, ಶಕ್ತಿ, ಹಗರಣ ಮತ್ತು ದುರುಪಯೋಗ ಮಾಡುವವರೆಲ್ಲರೂ ರಾಹು ಗ್ರಹದ ಸಂಕೇತಗಳಾಗಿವೆ.
ಲಾಲ್ ಕಿತಾಬ್ಪ್ರಕಾರ ರಾಹು ಗ್ರಹದ ಸಂಬಂಧ
ಲಾಲ್ ಕಿತಾಬ್ ಪ್ರಕಾರ ರಾಹುವಿನ ಸಂಬಂಧವು ವಿಧ್ಯೆಯ ದೇವಿ ಸರಸ್ವತಿಯೊಂದಿಗಿದೆ. ಇದರೊಂದಿಗೆ ರಾಹು ಖುಫಿಯಾ ಪೊಲೀಸರು, ಗುಪ್ತಚರ ಮುಖ್ಯಸ್ಥರು, ಜೈಲು, ಅತ್ತೆಮನೆ, ಭೂಕಂಪ, ಬಾರ್ಲಿ, ಸಾಸಿವೆ, ಕಾಡು ಇಲಿ, ಕುಶಲ, ಕಚ್ಚಾ ಕಲ್ಲಿದ್ದಲು, ಕಪ್ಪು ನಾಯಿ, ಹೊಲಸು ಡ್ರೈನ್, ಮೆತು ಕಬ್ಬಿಣ, ಕಿವುಟ, ಕುಂಟ, ಪ್ಲೇಗ್, ಜ್ವರ, ಭಯ ಇತ್ಯಾದಿ. ವಸ್ತುಗಳು ರಾಹು ಗ್ರಹಕ್ಕೆ ಸಂಬಂಧಿಸಿವೆ. ರಾಹುವಿನ ಸಂಬಂಧವು ಗೊಮೆದ್ ರತ್ನ, ಎಂಟು ಮುಖ ರುದ್ರಾಕ್ಷ ಮತ್ತು ತುಂಗೆಗಡ್ಡೆಗಳಿಗೆ ಸಂಬಂಧಿಸಿದೆ.
ಲಾಲ್ ಕಿತಾಬ್ ಪ್ರಕಾರ ರಾಹುಗ್ರಹದ ಪರಿಣಾಮ
ಒಬ್ಬ ವ್ಯಕ್ತಿಯ ಜಾತಾಕದಲ್ಲಿ ರಾಹುವು ಪ್ರಬಲವಾಗಿದ್ದರೆ ಜಾತಕ ಇದರ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾನೆ ಇದು ವ್ಯಕ್ತಿಗೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯಶಸ್ಸನ್ನು ನೀಡುತ್ತದೆ ಮತ್ತು ವಿಮೋಚನೆಗೆ ದಾರಿ ಮಾಡಿಕೊಡುತ್ತದೆ. ರಾಹು ಗ್ರಹವು ತನ್ನ ಸ್ನೇಹಿತ ಗ್ರಹಗಳೊಂದಿಗೆ ಪ್ರಬಲವಾಗಿರುತ್ತಾನೆ. ಇದಕ್ಕೆ ವಿರುದ್ಧವಾಗಿ, ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹುವಿನ ಸ್ಥಿತಿ ದುರ್ಬಲವಾಗಿದ್ದರೆ ಅಥವಾ ಅದು ಬಳಲುತ್ತಿದ್ದರೆ ಅದು ವ್ಯಕ್ತಿಗೆ ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ರಾಹು ತನ್ನ ಶತ್ರು ಗ್ರಹಗಳೊಂದಿಗೆ ‘;ದುರ್ಬಲವಾಗಿರುತ್ತಾನೆ. ಒಟ್ಟಾರೆಯಾಗಿ ವ್ಯಕ್ತಿಯ ಜೀವನದಲ್ಲಿ ರಾಹುವಿನ ಪರಿಣಾಮವು ಧನಾತ್ಮಕ ಮತ್ತು ನಕಾರಾತ್ಮಕ ಎರಡು ರೀತಿಯಿಂದಲೂ ಬೀರುತ್ತದೆ ಎಂದು ಹೇಳಬಹುದು. ರಾಹುವಿನ ಧನಾತ್ಮಕ ಮತ್ತುನಕಾರಾತ್ಮಕ ಪರಿಣಾಮಗಳು ಏನೆಂದು ತಿಳಿಯೋಣ:
-
ಧನಾತ್ಮಕ ಪರಿಣಾಮ - ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಶುಭವಾಗಿದ್ದರೆ, ಅವನು ಒಳ್ಳೆಯ ಕಾರ್ಯಗಳನ್ನು ಮಾಡುವಂತೆ ವ್ಯಕ್ತಿಯ ಮನಸ್ಸಿನಲ್ಲಿ ಶುಭ ಆಲೋಚನೆಗಳು ಉದ್ಭವಿಸುತ್ತವೆ. ವ್ಯಕ್ತಿಯ ಬುದ್ಧಿವಂತಿಕೆ ಸರಿಯಾದ ದಿಕ್ಕಿನಲ್ಲಿದ್ದರೆ ಅವನು ಎತ್ತರವನ್ನು ಸಾಧಿಸಬಹುದು. ರಾಹುವಿನ ಸಕಾರಾತ್ಮಕ ಪರಿಣಾಮದಿಂದ, ವ್ಯಕ್ತಿಯು ಬುದ್ಧಿವಂತಿಕೆಯಿಂದ ಕೆಲಸ ಮಾಡುತ್ತಾನೆ ಮತ್ತು ಒಬ್ಬ ವ್ಯಕ್ತಿಯು ತನ್ನ ಬುದ್ಧಿಯ ಕೆಲಸವನ್ನು ಮಾಡಿದರೆ, ಅವನು ದೊಡ್ಡ ಪರ್ವತವನ್ನು ಅಲುಗಾಡಿಸಬಹುದು.
-
ನಕಾರಾತ್ಮಕ ಪರಿಣಾಮ - ಒಬ್ಬ ವ್ಯಕ್ತಿಯ ಟೇವೆಯಲ್ಲಿ ಬೂರ್ಬಲವಾಗಿರುವ ರಾಹುವಿನ ಕಾರಣದಿಂದ, ಅವನು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಹ ಸಂಭವಿಸಬಹುದು. ಬಳಲುತ್ತಿರುವ ರಾಹುವಿನ ಕಾರಣದಿಂದ ವಿಕಸನ, ಹುಚ್ಚುತನ, ಕರುಳಿನ ತೊಂದರೆ, ಹುಣ್ಣು, ಗ್ಯಾಸ್ಟ್ರಿಕ್ ಇತ್ಯಾದಿಗಳ ಸಮಸ್ಯೆಗಳನ್ನು ಉಂಟಾಗುತ್ತವೆ. ಆದ್ದರಿಂದ, ಜಾತಕದಲ್ಲಿ ರಾಹು ಗ್ರಹವನ್ನು ಬಲಪಡಿಸಬೇಕು.
ರಾಹು ಗ್ರಹಕ್ಕೆ ಲಾಲ್ ಕಿತಾಬ್ನ ಪರಿಹಾರಗಳು
ಜ್ಯೋತಿಷ್ಯದಲ್ಲಿ ಲಾಲ್ ಕಿತಾಬ್ ಪರಿಹಾರಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಲಾಲ್ ಕಿತಾಬ್ ನಲ್ಲಿ ರಾಹು ಗ್ರಹದ ಶಾಂತಿಯ ತಂತ್ರಗಳು ಜಾತಕದವರಿಗೆ ತುಂಬಾ ಪ್ರಯೋಜನಕಾರಿ ಮತ್ತು ಸುಲಭವಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿಯು ಅದನ್ನು ಸ್ವತಃ ಸುಲಭವಾಗಿ ಮಾಡಬಹುದು. ರಾಹು ಗ್ರಹಕ್ಕೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಜನರು ರಾಹು ಗ್ರಹದ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ರಾಹು ಗ್ರಹಕ್ಕೆ ಸಂಬಂಧಿಸಿದ ಲಾಲ್ ಕಿತಾಬ್ಗೆ ಪರಿಹಾರಗಳು ಈ ಕೆಳಗಿನಂತಿವೆ.
- ಯಾವಾಗಲು ನಾಣ್ಯವನ್ನು ನಿಮ್ಮ ಹತ್ತಿರ ಇಡಿ.
- ಹರಿಯುವ ನೀರಿನಲ್ಲಿ ರಾಹುವಿನ ವಸ್ತುಗಳನ್ನು ಹಾಕಿ
- ಗಂಗಾ ಸ್ನಾನ ಮಾಡಿ
- ಕಪ್ಪು ನಾಯಿಯನ್ನು ಬಳಸಿ ಅಥವಾ ಅದಕ್ಕೆ ಆಹಾರವನ್ನು ನೀಡಿ
- ಕುರುಡರಿಗೆ ಸಹಾಯ ಮಾಡಿ
- ಮಾಂಸ ಮತ್ತು ಮೀನು ಮತ್ತು ಮದ್ಯದಂತಹ ಮಾದಕವಸ್ತುಗಳನ್ನು ಸೇವಿಸಬೇಡಿ
- ಭ್ರಷ್ಟಾಚಾರದಿಂದ ದೂರವಿರಿ
- ಬಡವರಿಗೆ ಆರ್ಥಿಕವಾಗಿ ಸಹಾಯ ಮಾಡಿ
- ಕಬ್ಬಿಣದ ಉಂಗುರವನ್ನು ಧರಿಸುವುದು ಅಥವಾ ಬಳೆ ಹಾಕಿಕೊಳ್ಳುವುದು ಪ್ರಯಿಯೋಜನಕಾರಿ
ಲಾಲ್ ಕಿತಾಬ್ನ ಪರಿಹಾರಗಳು ಜ್ಯೋತಿಷ್ಯದ ತತ್ವಗಳನ್ನು ಆಧರಿಸಿವೆ. ಆದ್ದರಿಂದ ಈ ಪುಸ್ತಕವು ಜ್ಯೋತಿಷ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ರಾಹು ಗ್ರಹಕ್ಕೆ ಸಂಬಂಧಿಸಿದ ಲಾಲ್ ಕಿತಾಬ್ನಲ್ಲಿ ನೀಡಲಾಗಿರುವ ಈ ಮಾಹಿತಿಯು ನಿಮ್ಮ ಕೆಲಸವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಗ್ರಹಗಳ ಪರಿಣಾಮಗಳು ಮತ್ತು ಪರಿಹಾರಗಳು
Astrological services for accurate answers and better feature
Astrological remedies to get rid of your problems

AstroSage on MobileAll Mobile Apps
AstroSage TVSubscribe
- When Fire Meets Ice: Saturn-Mars Mutual Aspect; Its Impact on India & Zodiacs!
- Jupiter Nakshatra Phase Transit 2025: Change Of Fortunes For 5 Zodiacs!
- Ganesh Chaturthi 2025: Check Out Its Date, Time, & Bhog!
- Sun-Ketu Conjunction 2025: Good Fortunes & Strength For 5 Zodiacs!
- Venus Transit In Cancer: Fate Of These Zodiac Signs Will Change
- Sun Transit Aug 2025: Alert For These 3 Zodiac Signs!
- Understanding Karako Bhave Nashaye: When the Karaka Spoils the House!
- Budhaditya Yoga in Leo: The Union of Intelligence and Authority!
- Venus Nakshatra Transit 2025: 3 Zodiacs Destined For Wealth & Prosperity!
- Lakshmi Narayan Yoga in Cancer: A Gateway to Emotional & Financial Abundance!
- इस भाद्रपद अमावस्या 2025 पर खुलेंगे भाग्य के द्वार, जानिए क्या करें, क्या न करें
- शनि-मंगल की दृष्टि से, इन 2 राशियों की बढ़ सकती हैं मुश्किलें; हो जाएं सावधान!
- गणेश चतुर्थी 2025: जानें तिथि, शुभ मुहूर्त और राशि अनुसार भोग
- शुक्र का कर्क राशि में गोचर, इन राशियों की पलट देंगे तकदीर, होगा भाग्योदय!
- कारको भाव नाशाये: अगस्त में इन राशि वालों पर पड़ेगा भारी!
- सिंह राशि में बुधादित्य योग, इन राशि वालों की चमकने वाली है किस्मत!
- शुक्र-बुध की युति से बनेगा लक्ष्मीनारायण योग, इन जातकों की चमकेगी किस्मत!
- अजा एकादशी 2025 पर जरूर करें ये उपाय, रुके काम भी होंगे पूरे!
- शुक्र का कर्क राशि में गोचर, इन राशि वालों पर पड़ेगा भारी, इन्हें होगा लाभ!
- अगस्त के इस सप्ताह राशि चक्र की इन 3 राशियों पर बरसेगी महालक्ष्मी की कृपा, धन-धान्य के बनेंगे योग!
- Horoscope 2025
- Rashifal 2025
- Calendar 2025
- Chinese Horoscope 2025
- Saturn Transit 2025
- Jupiter Transit 2025
- Rahu Transit 2025
- Ketu Transit 2025
- Ascendant Horoscope 2025
- Lal Kitab 2025
- Shubh Muhurat 2025
- Hindu Holidays 2025
- Public Holidays 2025
- ராசி பலன் 2025
- రాశిఫలాలు 2025
- ರಾಶಿಭವಿಷ್ಯ 2025
- ਰਾਸ਼ੀਫਲ 2025
- ରାଶିଫଳ 2025
- രാശിഫലം 2025
- રાશિફળ 2025
- రాశిఫలాలు 2025
- রাশিফল 2025 (Rashifol 2025)
- Astrology 2025