ವೃಷಭ ರಾಶಿಯಲ್ಲಿ ವಕ್ರ ಬುಧ ಸಂಚಾರ ( 3rd June 2021 )

ಬುಧವು ನಮ್ಮ ಜೀವನದಲ್ಲಿ ಬುದ್ಧಿ, ಸಂವಹನ, ವ್ಯಾಪಾರ ಮತ್ತು ನಿರ್ವಹಣೆಯ ಅಂಶವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜಾತಕದಲ್ಲಿ ಅದರ ಸ್ಥಾನ ಬಹಳ ಮುಖ್ಯ.ವಕ್ರ ಬುಧಕ್ಕೆ ಸಂಬಂಧಿಸಿದ ಕೆಲವು ಪುರಾಣಗಳಿವೆ. ಸಾಮಾನ್ಯವಾಗಿ, ವಕ್ರ ಬುಧ ಜೀವನದಲ್ಲಿ ದುಃಖ ಮತ್ತು ಕಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ವಾಸ್ತವವಾಗಿ ಇದು ನಿಜವಲ್ಲ. ಏಕೆಂದರೆ ವಕ್ರ ಬುಧ ಯಾವಾಗಲೂ ಕಷ್ಟ ಮತ್ತು ದುರದೃಷ್ಟವನ್ನು ತರುವುದಿಲ್ಲ.ಇದಕ್ಕೆ ವಿರುದ್ಧವಾಗಿ ಸಾಕಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು.

ಆಸ್ಟ್ರೋಸೇಜ್ ವಾರ್ತಾದೊಂದಿಗೆ ವಿಶ್ವದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ವೈದಿಕ ಜ್ಯೋತಿಷ್ಯದ ಪ್ರಕಾರ, ವಕ್ರ ಬುಧನ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಪರಿಣಾಮಗಳನ್ನು ಬೀರುತ್ತದೆ. ಆದಾಗ್ಯೂ, ವಕ್ರ ಬುಧನ ಪರಿಣಾಮವನ್ನು ಬುಧದ ಸ್ಥಾನ ಮತ್ತು ಇತರ ಗ್ರಹಗಳೊಂದಿಗಿನ ಒಕ್ಕೂಟದ ಆಧಾರದ ಮೇಲೆ ಲೇಕಹಾಕಲಾಗುತ್ತದೆ. ಜ್ಯೋತಿಷ್ಯದಲ್ಲಿ, ಬುಧನನ್ನು ಶುಭ ಪರಿಗಣಿಸಲಾಗಿದೆ, ಆದಾಗ್ಯೂ ದುರುದ್ವೇಷಪೂರಿತ ಗ್ರಹಗಳ ಪ್ರಭಾವದಿಂದಾಗಿ ಇದು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಬುಧ ವಕ್ರನಾದಾಗ ಇದರ ಪರಿಣಾಮವು ಇನ್ನಷ್ಟು ಬಲಗೊಳ್ಳುತ್ತದೆ. ಯಾವುದೇ ಗ್ರಹದ ಮೇಲೆ ಬುಧದ ನಕಾರಾತ್ಮಕ ಪರಿಣಾಮ ಬೀರಿದರೆ, ಬುಧನ ವಕ್ರತೆಯು ಗಂಭೀರ ಪರಿಣಾಮಗಳನ್ನು ತರಬಹುದು. ಆದರೆ ಬುಧ ಬಹಳ ಉತ್ತಮ ಸ್ಥಿತಿಯಲ್ಲಿದ್ದರೆ, ಬುಧವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ.

ವೃಷಭ ರಾಶಿಯಲ್ಲಿ ಬುಧನ ವಕ್ರ ಚಲನೆಯು, 3 ಜೂನ್, 2021 ರಂದು ಬೆಳಿಗ್ಗೆ 3:46 ಗಂಟೆಯಿಂದ ಆರಂಭವಾಗುತ್ತದೆ. ಈ ರಾಶಿಯಲ್ಲಿ 7 ಜೂಲೈ, 2021 ರ ಬೆಳಿಗ್ಗೆ 10:59 ಗಂಟೆಯ ವರೆಗೆ ಇರುತ್ತದೆ. ಅದರ ನಂತರ ಮಿಥುನ ರಾಶಿಗೆ ಪ್ರವೇಶಿಸುತ್ತದೆ.

ನಡೆಯಿರಿ, ಎಲ್ಲಾ ರಾಶಿಗಳ ಮೇಲೆ ಇದರ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧವು ಮೂರನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರ ಬುಧ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಇದನ್ನು ಹಣ, ಧ್ವನಿ, ಆಹಾರ, ಕುಟುಂಬ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಈ ಸಂಚಾರದ ಸ್ಥಾನಕ್ಕೆ ಅನುಗುಣವಾಗಿ ನೀವು ನಿಮ್ಮ ಧ್ವನಿಯನ್ನು ಸರಿಯಾಗಿ ಬಳಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದಾಗಿ ಕೆಲಸದ ಸ್ಥಳ ಮತ್ತು ವೈಯಕ್ತಿಕ ಜೀವನದಲ್ಲಿ ನೀವು ಯಶಸ್ಸು ಪಡೆಯುತ್ತೀರಿ. ನಿಮ್ಮ ಧ್ವನಿಯಲ್ಲಿ ಮಾಧುರ್ಯವನ್ನು ಕಾಣಬಹುದು ಮತ್ತು ಇದರಿಂದಾಗಿ ನಿಮ್ಮ ಸುತ್ತಮುತ್ತಲಿನ ಜನರು ಸಹ ಪ್ರಭಾವಿತರಾಗುತ್ತಾರೆ. ಕುಟುಂಬದ ಸದಾಸರೊಂದಿಗೆ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕೆಲವು ಭಿನ್ನಾಭಿಪ್ರಾಯಗಳು ಸಂಭವಿಸಬಹುದು. ಆರ್ಥಿಕವಾಗಿ ಈ ಸಂಚಾರವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.ಹಣ ಗಳಿಸಲು ನೀವು ಸಾಮರ್ತ್ಯರಾಗುವಿರಿ. ಸಂಚಾರದ ಸಮಯದಲ್ಲಿ ಈ ರಾಶಿಚಕ್ರದ ವಿದ್ಯಾರ್ಥಿಗಳು ಯಶಸ್ಸು ಪಡೆಯುತ್ತಾರೆ, ವಿಶೇಷವಾಗಿ ಸ್ಪರ್ಧಾತಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ನೀವು ಯಾವುದೇ ಸಂಬಂಧದಲ್ಲಿದ್ದರೆ, ಗೊಂದಲಗಳನ್ನು ನಿವಾರಿಸಲು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಈ ಸಮಯ ಉತ್ತಮವಾಗಿದೆ.

ಪರಿಹಾರ - ಭಗವಂತ ಗಣೇಶರ ಪೂಜೆ ಮಾಡಿ.

ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮೊದಲನೇ ಅಂದರೆ ಲಗ್ನದ ಮನೆಗೆ ವಕ್ರನಾಗಿ ಗೋಚರಿಸುತ್ತದೆ. ಮೊದಲನೇ ಮನೆ ಆತ್ಮ ಮತ್ತು ವ್ಯಕ್ತಿತ್ವವನ್ನು ತೋರಿಸುತ್ತದೆ. ಬುಧನ ಈ ಸ್ಥಾನವು ಆರ್ಥಿಕ ವಿಷಯಗಳಲ್ಲಿ ತಗೆದುಕೊಳ್ಳಲಾಗುವ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದವನ್ನು ಮಾಡುವ ಮೊದಲು ಅದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸೂಚಿಸಲಾಗಿದೆ. ಯಾವುದೇ ವ್ಯಾಪಾರವನ್ನುಆರಂಭಿಸುವಾಗ ಬಹಳ ಜಾಗರೂಕರಾಗಿರಿ, ವಿಶೇಷವಾಗಿ ಅದರಲ್ಲಿ ನೀವು ಹೆಚ್ಚು ಹೂಡಿಕೆ ಮಾಡುವಾಗ. ನೀವು ಯಾರೊಂದಿಗಾದರೂ ಪ್ರೀತಿಯ ಸಂಬಂಧದಲ್ಲಿದ್ದರೆ, ಈ ಸಮಯದಲ್ಲಿ ನಿಮ್ಮಲ್ಲಿ ಪ್ರೀತಿ ಮತ್ತು ಮೃದುತ್ವವನ್ನು ಕಾಣಲಾಗುತ್ತದೆ. ಈ ಸಮಯವು ಪ್ರೇಮಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ರೀತಿಯ ತಪ್ಪು ತಿಳುವಳಿಕೆಯನ್ನು ಹೊಂದಿದ್ದರೆ ಅದು ಸಹ ದೂರವಾಗುತ್ತದೆ.ಸಂಬಂಧವನ್ನು ಬಲಪಡಿಸಲು ಇದು ಉತ್ತಮ ಸಮಯ. ನೀವು ವಿಧ್ಯಾರ್ಥಿಯಾಗಿದ್ದರೆ, ನೀವು ಸಹ ಈ ಸಂಚಾರದ ಲಾಭವನ್ನು ಪಡೆಯುತ್ತೀರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯವು ಸಹ ಉತ್ತಮವಾಗಿರುತ್ತದೆ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಅವಧಿಯಲ್ಲಿ ನಿಮ್ಮ ಆರೋಗ್ಯವನ್ನು ಸುಧಾರಿಸುವ ವೇಗವು ವೇಗವಾಗುತ್ತದೆ.

ಪರಿಹಾರ - ‘ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ’ ಬುಧ ಬೀಜ ಮಂತ್ರವನ್ನು ಜಪಿಸಿ

ಮಿಥುನ ರಾಶಿ

ಮುಥುನ ಸ್ರಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೊದಲನೇ ಮತ್ತು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರತೆಯೊಂದಿಗೆ ನಿಮ್ಮ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಹನ್ನೆರಡನೇ ಮನೆ ವಿದೇಶಗಳೊಂದಿಗಿನ ನಿಮ್ಮ ಸಂಬಂಧದ ನಷ್ಟ ಇತ್ಯಾದಿಯನ್ನು ತೋರಿಸುತ್ತದೆ. ವಕ್ರ ಬುಧ ಸಂಚಾರವು ಮಿಥುನ ರಾಶಿಚಕ್ರದ ಸ್ಥಳೀಯರ ಸಂವಹನದ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ಸಾಮಾಜಿಕ ಮಟ್ಟದಲ್ಲಿ. ಈ ಸಮಯದಲ್ಲಿ ಜನರಿಗೆ ನಿಮ್ಮ ಮಾತುಗಳನ್ನು ವಿವರಿಸಲು ಬಯಸುವ ರೀತಿಯಲ್ಲಿ ಅರ್ಥವಾಗದಿರಬಹುದು, ಆದ್ದರಿಂದ ಮಾತನಾಡುವಾಗ ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಬಳಸಲು ನಿಮಗೆ ಸೂಚಿಸಲಾಗಿದೆ. ಇದರೊಂದಿಗೆ ಕಂಪ್ಯೂಟರ್ ಮೊಬೈಲೆಗಳಂತಹ ಸಾಧನಗಳು ಬುಧ ಗ್ರಹಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಕಂಪ್ಯೂಟರ್‌ನಲ್ಲಿರುವ ವಿಷಯಗಳನ್ನು ಎಚ್ಚರಿಕೆಯಿಂದ ಇರಿಸಿ. ಡೇಟಾವನ್ನು ಕಳೆದುಕೊಳ್ಳುವ ಅಥವಾ ಕೆಲವು ರೀತಿಯ ಕಂಪ್ಯೂಟರ್ ಅಸಮರ್ಪಕದ ಕಾರ್ಯದ ಸಾಧ್ಯತೆ ಇದೆ. ಆದ್ದರಿಂದ ಅವಶ್ಯಕ ಫೈಲ್‌ಗಳ ಬ್ಯಾಕಪ್ ಇರಿಸಿ. ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಸಮತೋಲಿತವಾಗಿರುತ್ತದೆ, ಆದರೂ ನೀವು ಕೆಲವು ಖರ್ಚುಗಳನ್ನು ಸಹ ಹೊಂದಿರುತ್ತೀರಿ. ಈ ಸಮಯದಲ್ಲಿ ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಅದರ ಫಲಿತಾಂಶವು ನಿಮ್ಮ ವಿರುದ್ಧ ಹೋಗಬಹುದು. ಆದ್ದರಿಂದ ಅಂತಹ ವಿಷಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಡಿ ಮತ್ತು ಸಾಧ್ಯವಾದರೆ ಅದನ್ನು ಮತ್ತಷ್ಟು ಮುಂದೂಡಿ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕಾಗುತ್ತದ ಮತ್ತು ತಾಯಿಯ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು.ಏಕೆಂದರೆ ಅವರಿಗೆ ಅರೋಗ್ಯ ಸಂಬಂಧಿತ ಕೆಲವು ಸಮಸ್ಯೆಗಳಿರಬಹುದು.

ಪರಿಹಾರ - ಶ್ರೀ ಸೂಕ್ತವನ್ನು ಪ್ರತಿದಿನ ಪಠಿಸಿ ಮತ್ತು ಬುಧವಾರ ಹಸುವಿಗೆ ಪಾಲಕವನ್ನು ತಿನ್ನಿಸಿ.

ಕರ್ಕ ರಾಶಿ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧವು ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರತೆಯೊಂದಿಗೆ ನಿಮ್ಮ ಲಾಭ ಮತ್ತು ಆಸೆಗಳ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಬುಧದ ಈ ಸಂಚಾರವು ನಿಮ್ಮ ದೈನಂದಿನ ಸಂವಹನದಲ್ಲಿ ಕೆಲವು ಬಿಕ್ಕಟ್ಟುಗಳು ಉಂಟಾಗಬಹುದು. ಆದಾಗ್ಯೂ, ಮಾತನಾಡುವ ನಿಮ್ಮ ಉತ್ತಮ ಸಾಮರ್ಥ್ಯದಿಂದ ನೀವು ಅನೇಕ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ಜನರಿಗೆ ನಿಮ್ಮ ಮಾತುಗಳನ್ನು ವಿವರಿಸಲು ನಿಮಗೆ ಸಾಧ್ಯವಾಗುತ್ತದೆ. ಈ ವಕ್ರ ಸಂಚಾರವು ನಿಮ್ಮ ದೇಶೀಯ ಜೀವನಕ್ಕೆ ತುಂಬಾ ಸಂತೋಷವಾಗಿರುತ್ತದೆ. ಮನೆಯ ಯಾವುದೇ ಕೆಲಸವಿದ್ದರೆ ಮತ್ತು ಅದರಲ್ಲಿ ನಿಮ್ಮ ಸಹಾಯ ಬೇಕಾಗಿದ್ದರೆ, ಈ ಸಮಯದಲ್ಲಿ ನೀವು ಕುಟುಂಬದ ಸದಸ್ಯರನ್ನು ನೀವು ಬಹಿರಂಗವಾಗಿ ಬೆಂಬಲಿಸಬಹುದು. ಇದನ್ನು ಮಾಡುವುದು ನಿಮಗೆ ಒಳ್ಳೆಯದು. ಕುಟುಂಬ ಕೂಟಕ್ಕೆ ಇದು ಒಳ್ಳೆಯ ಸಮಯ. ಆದಾಗ್ಯೂ ನೀವು ಹೊಸ ಬಾಡಿಗೆ ಮನೆಗೆ ಹೋಗುವುದು ಅಥವಾ ಹೊಸ ಮನೆಯನ್ನು ಖರೀದಿಸುವುದನ್ನು ತಡೆಯಬೇಕು. ವಿದೇಶಕ್ಕೆ ಹೋಗಿ ಶಿಕ್ಷಣ ಗಳಿಸಲು ಬಯಸುತ್ತಿರುವ ವಿದ್ಯಾರ್ಥಿಗಳು ಬುಧನ ವಕ್ರ ಸಂಚಾರದ ಸಮಯದಲ್ಲಿ ಹಾಗೆ ಮಾಡುವುದನ್ನು ತಪ್ಪಿಸಬೇಕು ಮತ್ತು ಬುಧ ಮಾರ್ಗಿಯಾದಾಗ ವಿದೇಶಕ್ಕೆ ಹೋಗಲು ಯೋಜಿಸಬೇಕು. ಈ ಸಮಯದಲ್ಲಿ ನಿಮ್ಮನ್ನು ಅಧ್ಯಯನ ಮಾಡುವ ಮೂಲಕ ನಿಮ್ಮ ಗುರಿಯನ್ನು ನೀವು ತಿಳಿದುಕೊಳ್ಳಬಹುದು ಮತ್ತು ನಿಮ್ಮ ಗುರಿಗಳತ್ತ ಸಂಪೂರ್ಣವಾಗಿ ಗಮನ ಹರಿಸಬಹುದು.

ಪರಿಹಾರ - ಬುಧವಾರ ಭಗವಂತ ಗಣೇಶರಿಗೆ ದುರ್ವಾ ಹುಲ್ಲು ಅರ್ಪಿಸಿ.

ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೂರನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ತನ್ನ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿಪರ ಮತ್ತು ಪ್ರತಿಷ್ಠೆಯ ಹತ್ತನೇ ಮನೆಗೆ ಗೋಚರಿಸುತ್ತದೆ. ಬುಧನ ಈ ವಕ್ರ ಸಂಚಾರವು ಸಿಂಹ ರಾಶಿಚಕ್ರದ ಸ್ಥಳೀಯರನ್ನು ಭಾವನಾತ್ಮಕವಾಗಿ ಸಕ್ರಿಯಗೊಳಿಸುತ್ತದೆ. ನಿಮ್ಮ ಪದಗಳು ಮತ್ತು ಆಲೋಚನೆಗಳಲ್ಲಿ ಆಕರ್ಷಣೆಯನ್ನು ಕಾಣಬಹುದು. ಇದನ್ನು ಮಾಡುವುದರಿಂದ ನಿಮ್ಮ ಸಂಬಂಧದಲ್ಲಿ ಹೊಸತನವೂ ಬರುತ್ತದೆ. ಈ ಸಂಚಾರವು ನಿಮ್ಮ ಬುದ್ಧಿವಂತಕೆಯನ್ನು ಸಹ ಹೆಚ್ಚಿಸುತ್ತದೆ.ಇದರಿಂದಾಗಿ ವೃತ್ತಿಪರ ಜೀವನದಲ್ಲಿ ಈ ರಾಶಿಚಕ್ರದ ಜನರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಕೆಲವು ಸಮಸ್ಯೆಗಳು ನಿಮ್ಮ ಹಾದಿಗೆ ಬರಬಹುದು ಎಂಬುದನ್ನು ನೆನಪಿನಲ್ಲಿಡಿ. ಆದರೂ ನೀವು ಪ್ರಸ್ತುತ ಪರಿಸ್ಥಿತಿಯನ್ನು ದೊಡ್ಡ ಸನ್ನಿವೇಶದಲ್ಲಿ ನೋಡಬೇಕು ಮತ್ತು ನಿಮ್ಮ ಗುರಿಯತ್ತ ನಿರಂತರವಾಗಿ ಗಮನ ಹರಿಸಲು ಪ್ರಯತ್ನಿಸಬೇಕು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.ಏಕೆಂದರೆ ನಿಮ್ಮ ನಾಲ್ಕನೇ ಮನೆಯ ಮೇಲೆ ಬುಧದ ಏಳನೇ ದೃಷ್ಟಿಯಿರುತ್ತದೆ.ಆದ್ದರಿಂದ ಅವರ ಅರೋಗ್ಯ ಹದಗೆಡಬಹುದು.

ಪರಿಹಾರ - ಗಣೇಶ ದೇವಸ್ಥಾನಕ್ಕೆ ಹೋಗಿ ಮತ್ತು ಗಣೇಶ ದೇವರಿಗೆ 21 ದುರ್ವಾ ಹುಲ್ಲು ಅರ್ಪಿಸಿ.


ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮಅದೃಷ್ಟ ಯಾವಾಗ ತೆರೆಯುತ್ತದೆ ಮತ್ತುಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂಬುದನ್ನು ತಿಳಿಯಿರಿ.

ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧವು ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಒಂಬತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ ಇದು ಧರ್ಮ, ಅಧ್ಯಾತ್ಮ, ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ನಿಮ್ಮ ಒಂಬತ್ತನೇ ಮನೆಯಲ್ಲಿ ಬುಧದ ವಕ್ರ ಸಂಚಾರವು ನಿಮ್ಮಲ್ಲಿ ಹತಾಶೆಯ ಭಾವನೆಯನ್ನು ತರಬಹುದು. ಆದಾಗ್ಯೂ, ಈ ಸಮಯದಲ್ಲಿ ಸಾಮಾಜಿಕ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಈ ರಾಶಿಚಕ್ರ ದಜನರು ದಾನ ಪುಣ್ಯದ ಕಾರ್ಯಗಳಲ್ಲಿ ಭಾಗವಹಿಸಬಹುದು. ಪ್ರೀತಿ ಮತ್ತು ವಿವಾಹದ ಸಂಬಂಧದಲ್ಲಿ ಆಹ್ಲಾದಕರ ಬದಲಾವಣೆಯ ಸಾಧ್ಯತೆ ಇದೆ. ನಿಮ್ಮ ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿದರೆ, ಅರೋಗ್ಯಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ನೀವು ತಪ್ಪಿಸಬಹುದು. ಈ ಸಮಯದಲ್ಲಿ ನೀವು ಅವಸರಪಡಬಾರದು. ಈ ಸಮಯದಲ್ಲಿ ನೀವು ಹಿಂದೆ ನಿರ್ಲಕ್ಷಿಸಿರುವ ವಿಷಯಗಳು ನಿಮಗೆ ಉಪಯುಕ್ತವಾಗಬಹುದು.

ಪರಿಹಾರ - ಈ ಸಮಯದಲ್ಲಿ ತಂದೆ ತಾಯಿಯೊಂದಿಗೆ ತೀರ್ಥ ಯಾತ್ರೆಗೆ ಹೋಗಿ.

ತುಲಾ ರಾಶಿ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧವು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರನಾಗಿ ನಿಮ್ಮ ಗೂಢ ವಿಧ್ಯೆ, ಇದ್ದಕ್ಕಿದ್ದಂತೆ ಸಂಭವಿಸಲಾಗುವ ಲಾಭ, ಅತ್ತೆಮನೆ ಕಡೆಯ ಎಂಟನೇ ಮನೆಗೆ ಗೋಚರಿಸಲಿದೆ. ಈ ಸಮಯದಲ್ಲಿ ತುಲಾ ರಾಶಿಚಕ್ರದ ಜನರು ತುಂಬಾ ಜಾರಗುಕರಾಗಿರಬೇಕು. ವಿಶೇಷವಾಗಿ ಆರ್ಥಿಕ ವಿಷಯಗಳ ಬಗ್ಗೆ, ಏಕೆಂದರೆ ಇದ್ದಕ್ಕಿದ್ದಂತೆ ಹಣಕಾಸಿನ ನಷ್ಟವಾಗಬಹುದು. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಈ ಸಮಯದಲ್ಲಿ ಕೆಲವು ಏರಿಳಿತಗಳು ಉದ್ಭವಿಸಬಹುದು. ಇದಲ್ಲದೆ ಕೌಟುಂಬಿಕ ಸಂಬಂಧ, ಸ್ನೇಹಿತರು, ವ್ಯಾಪಾರ ಪಾಲುದಾರರೊಂದಿಗೂ ಕೆಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು. ಬುಧದ ಈ ವಕ್ರ ಚಲನೆಯ ಸಮಯದಲ್ಲಿ ಈ ರಾಶಿಚಕ್ರದ ಸ್ಥಳೀಯರು ಗುಧ ವಿಧ್ಯೆಯನ್ನು ತಿಳುದುಕೊಳ್ಳಲು ಪ್ರಯತ್ನಿಸಬಹುದು. ಆಧ್ಯಾತ್ಮಿಕ ವಿಷಯಗಳಲ್ಲೂ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಅರೋಗ್ಯ ಜೀವನದ ಮೇಲೆ ದೃಷ್ಟಿ ಹಾಕಿದರೆ ಈ ಸಮಯ ಉತ್ತಮವಾಗಿರುತ್ತದೆ. ಆದಾಗ್ಯೂ, ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ದೈನಂದಿನ ಯೋಗ, ವ್ಯಾಯಾಮ ಇತ್ಯಾದಿಯನ್ನು ಮಾಡುವುದು ಉತ್ತಮ.

ಪರಿಹಾರ - ತಾಯಿ ದುರ್ಗೆಯ ಸಪ್ತಶತಿಯನ್ನು ಪಠಿಸುವುದು ಉತ್ತಮ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಪಾಲುದಾರಿಕೆ, ವಿವಾಹ ಇತ್ಯಾದಿಯ ಏಳನೇ ಮನೆಗೆ ಗೋಚರಿಸುತ್ತದೆ. ಬುಧದ ಈ ವಕ್ರ ಸಂಚಾರವು ಸಂಬಂಧಿಕರ ಬಗ್ಗೆ ನಿಮ್ಮ ತಪ್ಪು ತಿಳುವಳಿಕೆಯನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ಸಂಬಂಧದಲ್ಲಿ ಸಂವಹನ ಅಂತರವಿದ್ದರೆ, ಅದರಲ್ಲೂ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಸಂಬಂಧಗಳನ್ನು ಬಲಪಡಿಸಲು ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿ ಮತ್ತು ತಪ್ಪುಗ್ರಹಿಕೆಗಳು ಬೆಳೆಯದಂತೆ ತಡೆಯಲು ನಿಮಗೆ ಸಲಹೆ ನೀಡಲಾಗಿದೆ. ಈ ರಾಶಿಚಕ್ರದ ಸ್ಥಳೀಯರು ಬುಧದ ವಕ್ರ ಚಲನೆಯ ಸಮಯದಲ್ಲಿ ಗೊಂದಲಕ್ಕೊಳಗಾಗಬಹುದು ಮತ್ತು ಈ ಸಮಯದಲ್ಲಿ ಪದಗಳ ತಪ್ಪಾದ ಬಳಕೆಯಿಂದಾಗಿ ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ನೀವು ಜಗಳವಾಡಬಹುದು. ಯಾವುದೇ ಸಂಬಂಧವನ್ನು ಬಲಪಡಿಸಲು ನೀವು ನಿಮ್ಮ ಧ್ವನಿಯನ್ನು ಸುಧಾರಿಸಬೇಕಾಗುತ್ತದೆ. ಈ ರಾಶಿಚಕ್ರದ ವಿವಾಹಿತ ಜನರ ಜೀವನ ಸಂಗಾತಿಯ ಆರೋಗ್ಯವು ಹದಗೆಡಬಹುದು, ಆದ್ದರಿಂದ ನೀವು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಪರಿಹಾರ - ಬೆಳಿಗ್ಗೆ ಸ್ನಾನ ಮಾಡಿದ ನಂತರ, ಹಸುವಿಗೆ ಹಸಿರು ಮೇವು ತಿನ್ನಿಸಿ ಮತ್ತು ಸಾಧ್ಯವಾದರೆ ಗಣೇಶ ದೇವಸ್ಥಾನಕ್ಕೆ ಹೋಗಿ.

ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ಗಹವು ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಶತ್ರುಗಳು, ಉದ್ಯೋಗ, ಸ್ಪರ್ಧೆಗಳು ಇತ್ಯಾದಿಯ ಆರನೇ ಮನೆಗೆ ವಕ್ರನಾಗಿ ಗೋಚರಿಸುತ್ತಾರೆ. ಬುಧದ ಈ ವಕ್ರ ಸಂಚಾರವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಅವಕಾಶ ನೀಡುತ್ತದೆ. ನೀವು ಇನ್ನೂ ಗಮನ ಹರಿಸದ ಸಮಸ್ಯೆಗಳನ್ನು ಸಹ ನಿವಾರಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರತಿಯೊಂದು ಕೆಲಸದ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತೀರಿ. ವೃತ್ತಿಪರವಾಗಿ ಈ ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ ಮತ್ತು ಇದರಿಂದಾಗಿ ಅವರು ಲಾಭ ಮತ್ತು ಮೇಲಧಿಕಾರಿಗಳ ಗೌರವವನ್ನು ಸಹ ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಆದ್ದರಿಂದ ಉತ್ತಮ ಬಜೆಟ್ ಅನ್ನು ಯೋಜಿಸಿ ನಡೆಯಿರಿ. ಮತ್ತು ಚಿಂತನಶೀಲವಾಗಿ ಖರ್ಚು ಮಾಡಿ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಪರಾಕ್ರಮ ನಿಮ್ಮ ವಿರೋಧಿಗಳ ವಿರುದ್ಧ ಜಯವನ್ನು ನೀಡುತ್ತದೆ. ನೀವು ವಾಹನವನ್ನು ಚಲಾಯಿಸಿದರೆ, ಈ ಸಮಯದಲ್ಲಿ ಜಾಗರೂಕರಾಗಿರಿ. ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ಅದನ್ನು ಬಹಳಷ್ಟು ಸತ್ಯದಿಂದ ಪರಿಹರಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಧನು ರಾಶಿಚಕ್ರದ ವಿದ್ಯಾರ್ಥಿಗಳು ಅಥವಾ ವಿದೇಶಕ್ಕೆ ಹೋಗಿ ಅಧ್ಯಯನ ಮಾಡಲು ಯೋಚಿಸುತ್ತಿರುವ ಜನರಿಗೆ ಈ ಸಂಚಾರವು ಸಾಕಷ್ಟು ಉತ್ತಮವಾಗಿರಬಹುದು.

ಪರಿಹಾರ - ಸಂಕಟಮೋಚನ ಗಣೇಶ ಸ್ತೋತ್ರವನ್ನು ಪಠಿಸಿ ಗಣೇಶ ದೇವರ ಪೂಜೆ ಮಾಡಿ ಮತ್ತು ಅವರಿಗೆ 21 ದುರ್ವವನ್ನು ಅರ್ಪಿಸಿ.


ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ತೆಗೆದುಹಾಕಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

ಮಕರ ರಾಶಿ

ಬುಧ ಗ್ರಹವು ಮಕರ ರಾಶಿಚಕ್ರದ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಬುದ್ಧಿ, ಪ್ರೀತಿ, ಮಕ್ಕಳು ಇತ್ಯಾದಿಯ ಐದನೇ ಮನೆಗೆ ವಕ್ರ ಸ್ಥಿತಿಯಲ್ಲಿ ಗೋಚರಿಸುತ್ತದೆ. ಬುಧದ ಈ ಸಂಚಾರವು ನೀವು ಬಯಸಿದಾಗ ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಬಹುದು, ಆದರೆ ಈ ಸಮಯದಲ್ಲಿ ನೀವು ವಿಷಯಗಳಿಗೆ ಹೊಂದುಕೊಳ್ಳುವುದಲ್ಲದೆ, ನಿಮ್ಮ ಪ್ರಕಾರ ವಿಷಯಗಳು ನಡೆಯುವಂತಹ ಪರಿಸ್ಥಿತಿಯನ್ನು ನೀವೇ ಕಂಡುಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕ ಪ್ರವೃತ್ತಿಗಳು ಹೆಚ್ಚಾಗಬಹುದು. ಅದು ನಿಮಗೆ ಪ್ರಯೋಜನಕಾರಿಯಾಗುವ ಸಾಧ್ಯತೆಯೂ ಇದೆ. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಈ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಂಚಾರದ ಲಾಭವನ್ನು ಪಡೆಯುತ್ತಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವಿದೇಶಕ್ಕೆ ಹೋಗಿ ತಮ್ಮ ವೃತ್ತಿ ಜೀವನವನ್ನು ಮಾಡಲು ಬಯಸುವವರಿಗೂ ಈ ಸಮಯ ಉತ್ತಮವಾಗಿರುತ್ತದೆ. ನೀವು ಇನ್ನೂ ಒಂಟಿಯಾಗಿದ್ದರೆ, ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ನಿಮ್ಮ ಆರೋಗ್ಯದ ಮೇಲೆ ದೃಷ್ಟಿ ಹಾಕಿದರೆ, ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಆದ್ದರಿಂದ ಈ ಸಮಯದಲ್ಲಿ ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಮಾತನಾಡುವಾಗ ಉತ್ತಮ ಮತ್ತು ಯೋಗ್ಯ ಪದಗಳನ್ನು ಬಳಸಿ.

ಪರಿಹಾರ - ಬುಧವಾರ ಗಣೇಶ ದೇವಸ್ಥಾನಕ್ಕೆ ಹೋಗಿ.

ಕುಂಭ ರಾಶಿ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅವರ ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರನಾಗಿ ನಿಮ್ಮ ನಾಲ್ಕನೇ ಮನೆಗೆ ಸಾಗುತ್ತಾರೆ. ನಾಲ್ಕನೇ ಮನೆಯನ್ನು ನಿಮ್ಮ ತಾಯಿ, ಸುಖ, ಭೂಮಿ-ಭವನ, ವಾಹನ ಇತ್ಯಾದಿಯ ಅಂಶವೆಂದು ಪರಿಗಣಿಸಲಾಗಿದೆ. ಬುಧದ ಸಂಚಾರವು ನಿಮ್ಮನ್ನು ಒಂದು ಹೆಜ್ಜೆ ಹಿಂದೆ ಹೋಗಿ ಪರಿಸ್ಥಿತಿಗಳ ಬಗ್ಗೆ ಯೋಚಿಸಲು ಅವಕಾಶ ನೀಡುತ್ತದೆ ಮತ್ತು ಪರಿಸ್ಥಿತಿಗಳನ್ನು ಸುಧಾರಿಸಲು ನೀವು ಅವಕಾಶವನ್ನು ಪಡೆಯುತ್ತೀರಿ. ಜೀವನದಲ್ಲಿ ನಿಮಗೆ ಬೇಕಾದುದನ್ನು ಪಡೆಯಲು ಯಾವುದೇ ಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಡಿ ಮತ್ತು ಈ ಮಧ್ಯೆ ನಿಮ್ಮ ಆಂತರಿಕ ಸಮಸ್ಯೆಗಳನ್ನು ತೊಡೆದುಹಾಕಲು ಪ್ರಯತ್ನಿಸಿ. ನಿಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಲು ನಿಮ್ಮ ಒಳನೋಟಗಳು ಭವಿಷ್ಯದಲ್ಲಿ ನಿಮಗೆ ಸಹಾಯ ಮಾಡಬಹುದು. ನಿಮ್ಮ ವೃತ್ತಿಪರ ಜೀವನದ ಮೇಲೆ ದೃಷ್ಟಿ ಹಾಕಿದರೆ, ಇದ್ದಕ್ಕಿದ್ದಂತೆ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಬುಧದ ಈ ವಕ್ರ ಚಲನೆಯ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನೀವು ಎಷ್ಟು ಕೆಲಸ ಮಾಡುವಿರೋ, ಅಷ್ಟೇ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಯಾವುದೇ ಸಂಬಂಧದಲ್ಲಿದ್ದರೆ, ಈ ಸಮಯದಲ್ಲಿ ಜಾಗರೂಕರಾಗಿರಿ. ಏಕೆಂದರೆ ಸಂಬಂಧಗಳಲ್ಲಿ ಪ್ರತ್ಯೇಕತೆಯ ಸಾಧ್ಯತೆ ಇದೆ. ಇನ್ನೂ ಒಂಟಿಯಾಗಿರುವ ಈ ರಾಶಿಚಕ್ರದ ಜನರು ಈ ಸಮಯದಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಕುಂಭ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ತಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ತಂದೆಯೊಂದಿಗಿನ ನಿಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ವಿವಾದವಾಗಬಹುದು.

ಪರಿಹಾರ - ಗಣೇಶ ದೇವರಿಗೆ ದೂರ್ವಾ ಹುಲ್ಲು ಅರ್ಪಿಸಬೇಕು ಮತ್ತು ಗಣೇಶ ಅಥರ್ವಶೀರ್ಷವನ್ನು ಪಠಿಸಿ.

ಮೀನಾ ರಾಶಿ

ಮೀನಾ ರಾಶಿಚಕ್ರದ ಸ್ಥಳೀಯರಿಗೆ ಬುಧವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಬುಧವು ನಿಮ್ಮ ಧೈರ್ಯ-ಪರಾಕ್ರಮ, ಪ್ರಯಾಣಗಳು ಮತ್ತು ಕಿರಿಯ ಸಹೋದರ ಸಹೋದರಿಯರ ಮೂರನೇ ಮನೆಯಲ್ಲಿ ವಕ್ರನಾಗಿ ಗೋಚರಿಸುತ್ತದೆ. ಬುಧದ ಈ ಸಂಚಾರವು ನಿಮ್ಮನ್ನು ಗೊಂದಲಗೊಳಿಸಬಹುದು. ಇದರಿಂದಾಗಿ ನಿಮ್ಮ ಮನೋಬಲವು ದುರ್ಬಲಗೊಳ್ಳಬಹುದು. ನಿಮ್ಮ ಹಾದಿಗೆ ಬರುವ ತೊಂದರೆಗಳು ನಿಮಗೆ ಯಾವುದು ಉತ್ತಮ ಮತ್ತು ನೀವು ಏನು ಮಾಡಬಾರದು ಎಂಬುದನ್ನು ನಿಮಗೆ ಹೇಳಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು ನೀವು ರಾಜತಾಂತ್ರಿಕವಾಗಿ ಪ್ರಯತ್ನಿಸಿ. ಈ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಸಂವಹನ ಸಾಮರ್ಥ್ಯಗಳು ಹೆಚ್ಚಾಗುತ್ತವೆ ಮತ್ತು ಇದು ನಿಮಗೆ ಲಾಭವನ್ನು ನೀಡುತ್ತದೆ. ನಿಮ್ಮ ಆರ್ಥಿಕ ಭಾಗದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ಅನೇಕ ಮೂಲಗಳಿಂದ ಹಣ ಗಳಿಸುವಿರಿ. ಈ ರಾಶಿಚಕ್ರದ ಕೆಲವು ಸ್ಥಳೀಯರು ಈ ಸಮಯದಲ್ಲಿ ಅಲ್ಪ ದೂರದ ಪ್ರಯಾಣಗಳನ್ನು ಮಾಡಬಹುದು ಆದರೆ ಬುಧದ ವಕ್ರ ಸಂಚಾರದ ಸಮಯದಲ್ಲಿ ನೀವು ಪ್ರಯಾಣಿಸದಿರುವುದು ನಿಮಗೆ ಉತ್ತಮ. ಪ್ರೀತಿಯ ಸಂಬಂಧದಲ್ಲಿರುವ ಈ ರಾಶಿಚಕ್ರದ ಸ್ಥಳೀಯರು ತಮ್ಮ ಸಂಗಾತಿಯಿಂದ ಗಮನವನ್ನು ಬಯಸುತ್ತಾರೆ. ಅವರೊಂದಿಗೆ ಸಾಧ್ಯವಾದಷ್ಟು ಸಮಯ ಕಳೆಯಲು ನಿಮಗೆ ಸೂಚಿಸಲಾಗಿದೆ. ಈ ರಾಶಿಚಕ್ರದ ಸ್ಥಳೀಯರಿಗೆ ಕೆಲವು ಅರೋಗ್ಯ ಸಮಸ್ಯೆಗಳಿರಬಹುದು. ಆದ್ದರಿಂದ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಪಡೆಯಲು ಸೂಚಿಸಲಾಗಿದೆ. ನಿಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿರಿಸಿ ಮತ್ತು ಪ್ರತಿಯೊಂದು ಕಾರ್ಯದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಲು ಜ್ಞಾನವನ್ನು ಪಡೆದುಕೊಳ್ಳುತ್ತೀರಿ.

ಪರಿಹಾರ - ದೇವಸ್ಥಾನದಲ್ಲಿ ಏನನ್ನಾದರೂ ದಾನ ಮತ್ತು ದೇವಸ್ಥಾನಕ್ಕೆ ಹೋಗಿ ಸ್ವಚ್ಛಗೊಳಿಸುವ ಕೆಲಸ ಮಾಡಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer