ಮಿಥುನ ರಾಶಿಯಲ್ಲಿ ವಕ್ರ ಬುಧ ಸಂಚಾರ ( 30th May 2021 )

ಒಂದು ಗ್ರಹವು ವಕ್ರತೆಯನ್ನು ಹೊಂದಿದಾಗ, ಅದು ಆಕಾಶದಲ್ಲಿ ಹಿಂದಕ್ಕೆ ಚಲಿಸುವಂತೆ ಚಲಿಸುವಂತೆ ಕಂಡುಬರುತ್ತದೆ. ಮತ್ತು ಈ ಗ್ರಹವು ಪ್ರಸ್ತುತಪಡಿಸುವ ಜೀವನದ ಯಾವುದೇ ಪ್ರದೇಶವನ್ನು ಅಸ್ತವ್ಯಸ್ತಗೊಳಿಸಬಹುದು ಮತ್ತು ಅಸಮತೋಲಿತಗೊಳಿಸಬಹುದು. ಬುಧ ಸಂಚಾರವು ವಾಣಿಜ್ಯ, ಮಾರಾಟ, ಮಾರ್ಕೆಟಿಂಗ್, ಪ್ರಯಾಣ ಮತ್ತು ಕಿರಿಯ ಸಹೋದರ ಸಹೋದರಿಯರ ಅಂಶ ಗ್ರಹವಾಗಿದೆ, ಆದ್ದರಿಂದ ನೀವು ನಿಮ್ಮ ಮತ್ತು ನಿಮ್ಮ ಕುಟುಂಬ/ಸ್ನೇಹಿತರು/ ಸಹೋದ್ಯೋಗಿಗಳ ನಡುವಿನ ಬಹಳಷ್ಟು ತಪ್ಪು ಗ್ರಹಿಕೆಗಳಿಗೆ ಬಲಿಯಾಗಬಹುದು. ಬುಧ ವಕ್ರತೆಯ ಸಮಯದಲ್ಲಿ ಸಂವಹನ ಮಾಡುವಾಗ ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಕಂಪ್ಯೂಟರ್ ಸಹ ಪ್ರಭಾವಿತವಾಗುತ್ತದೆ. ಏಕೆಂದರೆ ಅವು ಮಾಹಿತಿಯ ದೊಡ್ಡ ಮೂಲವಾಗಿವೆ ಮತ್ತು ಬುಧ ಅಧಿಪತ್ಯದ ಅಡಿಯಲ್ಲಿ ಬರುತ್ತವೆ. ಅಂದರೆ ಕಂಪ್ಯೂಟರ್ ಕ್ರ್ಯಾಶ್ ಆಗಬಹುದು. ಡೇಟಾ ನಷ್ಟ ಮತ್ತು ಸಾಮಾನ್ಯ ಸಮಸ್ಯೆಗಳಿಂದಲೂ ನೀವು ತೊಂದರೆಕ್ಕೊಳಗಾಗಬಹುದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿತ್ರದ ಮೇಲೆ ಬುಧನ ವಕ್ರತೆಯ ಸಾಕಷ್ಟು ಪರಿಣಾಮ ಬೀರುತ್ತದೆ. ಈ ಸಂಚಾರದ ಸಮಯದಲ್ಲಿ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆಯನ್ನು ಕಾಣಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ತಪ್ಪಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ನಂತರ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಬುಧ ಗ್ರಹವು 30 ಮೇ 2021 ರಂದು ಬೆಳಿಗ್ಗೆ 03 ಗಂಟೆ 47 ನಿಮಿಷಕ್ಕೆ ಮಿಥುನ ರಾಶಿಯಲ್ಲಿ ವಕ್ರತೆಯನ್ನು ಹೊಂದುತ್ತದೆ ಮತ್ತು ನಂತರ 3 ಜೂನ್ 2021 ರಂದು 3:46 ಗಂಟೆಗೆ ವೃಷಭ ರಾಶಿಗೆ ಗೋಚರಿಸುತ್ತದೆ.

ಆಸ್ಟ್ರೋಸೇಜ್ ವಾರ್ತಾದೊಂದಿಗೆ ವಿಶ್ವದ ಜ್ಯೋತಿಷಿಗಳೊಂದಿಗೆ ಕರೆಯಲ್ಲಿ ಮಾತನಾಡಿ

ನಡೆಯಿರಿ, ಎಲ್ಲಾ ರಾಶಿಗಳ ಮೇಲೆ ಇದರ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಬುಧನ ವಕ್ರತೆಯು ಮೂರನೇ ಮನೆಯಲ್ಲಿ ಸಂಭವಿಸುವುದು ಸಾಮಾನ್ಯವಾಗಿ ಈ ರಾಶಿಚಕ್ರದ ಸ್ಥಳೀಯರ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಮೇಷ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಮುಂದುವರಿಯಲು ಬಯಸುತ್ತಾರೆ ಆದರೆ ಯಾವುದೇ ಕಾರಣದಿಂದಾಗಿ ಅಡೆತಡೆಗಳು ಉದ್ಭವಿಸುತ್ತವೆ, ಇದರಿಂದಾಗಿ ನೀವು ನಿರಾಶೆಗೊಳ್ಳಬಹುದು. ಆದ್ದರಿಂದ ನಿಮ್ಮ ಪದಗಳತ್ತ ಗಮನ ಹರಿಸಿ ಮತ್ತು ನಿಮ್ಮ ಬಗ್ಗೆ ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆಯೂ ಕಾಳಜಿ ವಹಿಸಿ ಎಂದು ಸೂಚಿಸಲಾಗಿದೆ. ಇದಲ್ಲದೆ ಮೂರನೇ ಮನೆ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಗಳನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಈ ಸಮಯದಲ್ಲಿ ಅಂತಹ ವಸ್ತುಗಳ ಮೇಲೆ ಖರ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು

ಪರಿಹಾರ - ತಪ್ಪು ಆಲೋಚನೆಗಳನ್ನು ತೊಡೆದುಹಾಕಲು ಮತ್ತು ಕೆಟ್ಟ ತೆಗೆದುಕೊಳ್ಳದಿರಲು ಅತ್ಯುತ್ತಮ ಪರಿಹಾರ ಧ್ಯಾನ.

ವೃಷಭ ರಾಶಿ

ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ವಕ್ರನಾಗಿ ನಿಮ್ಮ ಎರಡನೇ ಮನೆಗೆ ಗೋಚರಿಸುತ್ತದೆ. ಇದು ಹಣಕಾಸು ಮತ್ತು ಕುಟುಂಬವನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಹಣಕಾಸಿನ ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ಮಧ್ಯೆ ತ್ವರಿತ ವ್ಯವಹಾರಗಳು ಮತ್ತು ವೇಗದ ವಹಿವಾಟುಗಳನ್ನು ತಪ್ಪಿಸಿ. ಹಣಕಾಸಿನ ವಿಷಯಗಳನ್ನು ಪರಿಶೀಲಿಸಲು ಸಮಯ ತೆಗೆದುಕೊಳ್ಳಿ ಮತ್ತು ಬೆಳವಣಿಗೆಯನ್ನು ಸಾಧಿಸಲು ಸರಿಯಾದ ಆಲೋಚನೆಗಳನ್ನು ರೂಪಿಸಿ. ಬುಧ ಗ್ರಹವು ವೃಷಭ ರಾಶಿಚಕ್ರದ ಸ್ಥಳೀಯರ ಶಿಕ್ಷಣದ ಐದನೇ ಮನೆಯ ಅಧಿಪತಿ ಆದ್ದರಿಂದ ವಿಶೇಷವಾಗಿ ಉನ್ನತ ಅಧ್ಯಾನಕ್ಕಾಗಿ ವಿಷಯಗಳ ಆಯ್ಕೆಯ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಬಹುದು. ಆದ್ದರಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ನಿಮ್ಮ ಶಿಕ್ಷಕರು ಅಥವಾ ಮರ್ದರ್ಶಕರಿಂದ ಸಲಹೆಯನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ. ಅಥವಾ ಬುಧವು ಮಾರ್ಗಿಯಾಗುವ ವರೆಗೂ ಕಾಯಿರಿ.

ಪರಿಹಾರ - ಈಸಮಯದಲ್ಲಿ ನಿಮ್ಮ ಕಚೇರಿ/ಮನೆಯಲ್ಲಿ ಪ್ರತಿದಿನ ಕರ್ಪೂರವನ್ನು ಬೆಳಗಿಸಿ.

ಮಿಥುನ ರಾಶಿ

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೊದಲನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಆತ್ಮ, ವ್ಯಕ್ತಿತ್ವ ಮತ್ತು ಕ್ರಿಯೆಯ ಮೊದಲನೇ ಮನೆಗೆ ಗೋಚರಿಸುತ್ತದೆ. ಮಿಥುನ ರಾಶಿ ಸಂವಹನವನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಈ ಸಮಯದಲ್ಲಿ ತಪ್ಪು ತಿಳುವಳಿಕೆಗಳಿಗೆ ಬಲಿಯಾಗುವುದನ್ನು ತಪ್ಪಿಸಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮಾತುಗಳ ಬಗ್ಗೆ ನೀವು ಸ್ಪಷ್ಟವಾಗಿರುವುದಿಲ್ಲ ಮತ್ತು ಹೆಚ್ಚು ಗಾಸಿಪ್ ಮಾಡಬಹುದು. ಈ ಸಮಯದಲ್ಲಿ ಹಳೆಯ ಸ್ನೇಹಿತರು ಮತ್ತೊಮ್ಮೆ ನಿಮ್ಮೊಂದಿಗೆ ಸೇರಬಹುದು. ಸ್ನೇಹಿತರು ಮತ್ತು ಸಂಬಂಧಿಕರ ಭಾಷೆಯನ್ನು ಕಲಿಯುವುದರ ಜೊತೆಯಲ್ಲಿ ಅವರೊಂದಿಗೆ ನೀವು ಪ್ರೀತಿಯಾಗಿ ಮಾತನಾಡಬೇಕು. ಇದರಿಂದಾಗಿ ಅವರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಸುಧಾರಿಸುತ್ತದೆ ಮತ್ತು ಮುಂಬರುವ ಸಮಯದಲ್ಲಿ ನೀವು ಅದರ ಲಾಭವನ್ನು ಪಡೆಯಲಾಗುತ್ತದೆ. ವಾಣಿಜ್ಯಿಕವಾಗಿ, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಆದ್ದರಿಂದ ನಿಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಎಲ್ಲಾ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಿ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಿ.

ಪರಿಹಾರ - ಗಣೇಶ ದೇವರ ಸಂಕಟ ನಾಶವನ್ನು ಪೂಜಿಸಿ.

ಕರ್ಕ ರಾಶಿ

ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವಿದೇಶ ಪ್ರಯಾಣದ ಹನ್ನೆರಡನೇ ಮನೆಯಲ್ಲಿ ವಕ್ರನಾಗುತ್ತಾನೆ. ಈ ಸಮಯದಲ್ಲಿ ವಿದೇಶದಲ್ಲಿ ವಾಸಿಸಲು ಪ್ರಯತ್ನಿಸುತ್ತಿರುವ ಅಥವಾ ವಿದೇಶದಿಂದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಕೆಲವು ಅಭಿವೃದ್ಧಿ ಮತ್ತು ಸಕಾರಾತ್ಮಕ ಸುದ್ಧಿಗಳನ್ನು ಪಡೆಯಬಹುದು. ಹೆಚ್ಚಾಗುತ್ತಿರುವ ವೆಚ್ಚಗಳ ಕಾರಣದಿಂದಾಗಿ ನೀವು ಚಿಂತೆ ಮತ್ತು ತೊಂದರೆಗೆ ಒಳಗಾಗಬಹುದು. ಈ ಸಮಯದಲ್ಲಿನಿಮ್ಮ ವೆಚ್ಚಗಳು ಆದಾಯಕ್ಕಿಂತ ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಹಣಕ್ಸುಗಾಗಿ ಸರಿಯಾದ ಯೋಜನೆ ಮತ್ತು ಮುಂಚಿತವಾಗಿ ಮಾಡಲು ನಿಮಗೆ ಸೂಚಿಸಲಾಗಿದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಚರ್ಮ ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸಿ.

ಪರಿಹಾರ - ಬುಧವಾರ ಗಣೇಶ ದೇವರಿಗೆ ದುರ್ವಾ ಅರ್ಪಿಸಿ.

ಸಿಂಹ ರಾಶಿ

ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಲಾಭ, ಯಶಸ್ಸಿನ ಹನ್ನೆರಡನೇ ಮನೆಗೆ ವಕ್ರನಾಗಿ ಗೋಚರಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಹೆಳೆಯ ಸ್ನೇಹಿತರೊಂದಿಗೆ ಸೇರುವ ಅವಕಾಶವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಮೂಲಕ ಮಾಡಲಾದ ಹೂಡಿಕೆಗಳಿಂದ ನೀವು ಉತ್ತಮ ಲಾಭವನ್ನು ಪಡೆಯಬಹುದು. ಆದರೂ ಈ ಸಮಯದಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಅಥವಾ ಟ್ರೇಡಿಂಗ್ ಅನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಇದು ಉತ್ತಮ ಸಮಯವಲ್ಲ. ಬದಲಾಗಿ ನಿಮ್ಮ ಹೂಡಿಕೆಗಳನ್ನು ವಿಶ್ಲೇಷಿಸಿ. ಇದರೊಂದಿಗೆ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಸಹಾಯ ಮಾಡಲು ನಿಮ್ಮ ವಿಶ್ಲೇಷಣಾತ್ಮಕ ಮತ್ತು ಸಲಹಾ ಸಾಮರ್ಥ್ಯಗಳನ್ನು ಬಳಸಿ. ಬುಧನ ವಕ್ರತೆಯು ನಿಮ್ಮ ತಾಳ್ಮೆ ಮತ್ತು ಇತರರ ತಾಳ್ಮೆಯನ್ನು ಸಹ ಪರೀಕ್ಷಿಸುತ್ತದೆ. ಬುಧವು ರಾಹುವಿನೊಂದಿಗೆ ಸಂಜೆಯೋಜನೆಯಲ್ಲಿದೆ, ಇದು ಹೊಸ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತದೆ. ವ್ಯಾಪಾರದಲ್ಲಿ ತೊಡಗಿರುವ ಸಿಂಹ ರಾಶಿಚಕ್ರದ ಸ್ಥಳೀಯರು ತನ್ನ ಸರಕುಗಳಿಗೆ ಹೊಸ ನೋಟವನ್ನು ಕೊಡುವ ಮೂಲಕ ಈ ವಕ್ರತೆಯ ಸಮಯದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.

ಪರಿಹಾರ - ಪ್ರತಿದಿನ ನಿಯಮಿತವಾಗಿ ಓಂ ಬುಧಾಯ್ ಮಂತ್ರವನ್ನು 108 ಬಾರಿ ಜಪಿಸಿ.


ರಾಜ ಯೋಗ ರಿಪೋರ್ಟ್ ಮೂಲಕ ನಿಮ್ಮಅದೃಷ್ಟ ಯಾವಾಗ ತೆರೆಯುತ್ತದೆ ಮತ್ತುಜೀವನದಲ್ಲಿ ಸಂತೋಷ ಯಾವಾಗ ಬರುತ್ತದೆ ಎಂಬುದನ್ನು ತಿಳಿಯಿರಿ.

ಕನ್ಯಾ ರಾಶಿ

ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನ, ಹೆಸರು ಮತ್ತು ಖ್ಯಾತಿಯ ಎರಡನೇ ಮನೆಗೆ ವಕ್ರನಾಗಿ ಗೋಚರಿಸುತ್ತದೆ. ಪರಿಣಾಮವಾಗಿ, ಈ ವಕ್ರ ಸಮಯದಲ್ಲಿ ವಿಶೇಷವಾಗಿ ಈ ರಾಶಿಚಕ್ರದ ಸ್ಥಳೀಯರು ಕೆಲಸದ ಸ್ಥಳದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವಲ್ಲಿ ವಿಳಂಬ, ಉತ್ಪನ್ನವನ್ನು ಸಮಯಕ್ಕೆ ತಲುಪಿಸಲು ಸಾಧ್ಯವಾಗದ ಕಾರಣ ತೊಂದರೆಗಳು ಅಥವಾ ಯಾವುದೇ ಉಪಕರಣ ಮುರಿದುಹೋಗುವ ಸಾಧ್ಯತೆ ಇದೆ. ಇದಲ್ಲದೆ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ನಿಮ್ಮ ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಯಾವುದೇ ಕೆಲಸವನ್ನು ಸಲ್ಲಿಸುವ ಮೊದಲು ನಿಮ್ಮ ಕೆಲಸವನ್ನು ಎರಡು ಬಾರಿ ಪರೀಕ್ಷಿಸಲು ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ಜನರು ನಿಮ್ಮೊಂದಿಗೆ ಕಡಿಮೆ ಮಾತನಾಡಲು ಮತ್ತು ನಿಮ್ಮ ಬಯಕೆಗಳನ್ನು ಮತ್ತು ಅಗತ್ಯಗಳನ್ನು ಪೂರೈಸುವಲ್ಲಿ ಹೆಚ್ಚು ಗಮನ ಹರಿಸಿ ಮತ್ತು ಕೆಲಸದ ಸ್ಥಳದಲ್ಲಿ ಗೇಮ್ ಚೇಂಜರ್ ಆಗಿ ಹೊರಹೊಮ್ಮುತ್ತೀರಿ.

ಪರಿಹಾರ - ಬುಧವಾರ ಹಸಿರು ಬಟ್ಟೆಗಳನ್ನು ಧರಿಸಿ.

ತುಲಾ ರಾಶಿ

ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಬುಧನ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಅದೃಷ್ಟ ಮತ್ತು ಆಧ್ಯಾತ್ಮಿಕತೆಯ ಒಂಬತ್ತನೇ ಮನೆಗೆ ನೆಲೆಗೊಳ್ಳುತ್ತದೆ. ಈ ಸಮಯದಲ್ಲಿ ಸಂಬಂಧಗಳು, ಜನರೊಂದಿಗೆ ಸಂವಹನ ಮತ್ತು ದಿನನಿತ್ಯದ ಕೆಲಸಗಳಲ್ಲಿ ನಿಮ್ಮ ಸಾಕಷ್ಟು ಸಮಯವನ್ನು ಕಳೆಯಬಹದು. ಈ ಸಮಯದಲ್ಲಿ ನಿಮ್ಮ ಮರುಮೌಲ್ಯಮಾಪನವನ್ನು ನೀವು ಮಾಡಬೇಕಾಗಿದೆ. ನಿಮ್ಮ ಸಂಬಂಧಗಳು ಮತ್ತು ದಿನಚರಿಯನ್ನು ಸುಧಾರಿಸಲು ಇದು ಉತ್ತಮ ಸಮಯ. ದೀರ್ಘಾವಧಿಯಲ್ಲಿ ನೀವು ನಿಮ್ಮನ್ನು ಎಲ್ಲಿ ನೋಡುತ್ತೀರಿ ಎಂಬುದರ ಬಗ್ಗೆ ಯೋಚಿಸಿ ಮತ್ತು ನಂತರ ಭವಿಷ್ಯದ ಉತ್ತಮ ಯೋಜನೆಯನ್ನು ತಯಾರಿಸಿ. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ನೀವು ಮತ್ತೆ ಪರೀಕ್ಷೆಯನ್ನು ನೀಡುತ್ತಿದ್ದರೆ ಅಥವಾ ನಿಮಗೆ ಮೊದಲು ಸಮಸ್ಯೆಗಳಿದ್ದ ವಿಷಯಗಳಲ್ಲಿ ಹಿಡಿತವನ್ನು ಬಯಸುತ್ತಿದ್ದರೆ, ಈ ಸಮಯದಲ್ಲಿ ನೀವು ಉತ್ತಮ ಪ್ರದರ್ಶನವನ್ನು ಮಾಡಬಹುದು. ವೃತ್ತಿಪರವಾಗಿ ದೀರ್ಘಾವಧಿಯ ಹೂಡಿಕೆ ಅಥವಾ ವ್ಯವಹಾರಗಳಿಗೆ ಇದು ಉತ್ತಮ ಸಮಯವಲ್ಲ.ಏಕೆಂದರೆ ನೀವು ಗೊಂದಲಕ್ಕೊಳಗಾಗಬಹುದು, ನೀವು ಭಯಭೀತರಾಗಬಹುದು ಮತ್ತು ತಪ್ಪುಗಳನ್ನು ಮಾಡಬಹುದು. ನಿಮ್ಮ ದೈಹಿಕ ಗುಣಲಕ್ಷಣಗಳನ್ನು ಸ್ವೀಕರಿಸಿ, ತುಲಾ ರಾಶಿಯು ಸೌಂದರ್ಯ, ಆಕರ್ಷಣೆ ಮತ್ತು ರಾಜತಾಂತ್ರಿಕತೆಯನ್ನು ಪ್ರತಿನಿಧಿಸುವುದರಿಂದ ಅತಿಯಾದ ಬದಲಾವಣೆ ನಿಮಗೆ ಕೆಟ್ಟದ್ದಾಗಿರಬಹುದು. ಈ ಸಮಯದಲ್ಲಿ ತಾಜಾತನವನ್ನು ಪಡೆಯಲು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಪರಿಹಾರ - ಹಸುವಿಗೆ ಹಸಿರು ಮೇವು ತಿನ್ನಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಬುಧನ ವಕ್ರ ಸಂಚಾರದ ಸಮಯದಲ್ಲಿ ನಿಮ್ಮ ಬದಲಾವಣೆ, ಆರೋಗ್ಯದಲ್ಲಿ ಬದಲಾವಣೆ, ವಯಸ್ಸು ಇತ್ಯಾದಿಯ ಎಂಟನೇ ಮನೆಗೆ ಗೋಚರಿಸುತ್ತದೆ. ಈ ಸಮಯದಲ್ಲಿ ನೀವು ನಿರಂತರವಾಗಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಶೇಷವಾಗಿ ಚರ್ಮ, ಅಲರ್ಜಿ ಮತ್ತು ಹಾರ್ಮೋನಲ್ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಹೂಡಿಕೆಗಳು ಹಿಂತಿರುಗುವುದಿಲ್ಲ ಮತ್ತು ಅದರಿಂದ ನಿಮಗೆ ಯಾವುದೇ ಲಾಭ ದೊರೆಯುವುದಿಲ್ಲ ಎಂದು ನೀವು ಅರಿತುಕೊಳ್ಳುತ್ತೀರಿ. ಆದರೆ ನಿಮಗೆ ಲಾಭವಾಗುವಂತಹ ಕೆಲವು ಯೋಜನೆಗಳು ಇರುತ್ತವೆ. ಈ ಸಮಯದಲ್ಲಿ ನೀವು ಭಾವುಕರಾಗಬಹುದು. ಆದ್ದರಿಂದ ಹೃದಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಧಾರ ಜಾಗರೂಕರಾಗಿರಿ.ಆದಾಗ್ಯೂ, ವೃಶ್ಚಿಕ ರಾಶಿಚಕ್ರದ ಜನರು ಬಹಳ ರಹಸ್ಯವಾಗಿರುತ್ತಾರೆ ಆದರೆ ಈ ಸಮಯದಲ್ಲಿ ನಿಮ್ಮ ರಹಸ್ಯ ಹೊರಬರಬಹುದು ಆದ್ದರಿಂದ ಜಾಗರೂಕರಾಗಿರಿ. ಎಂಟನೇ ಮನೆ ನಿಮ್ಮ ಹೆತ್ತವರ ಸಂಗ್ರಹವಾದ ಸಂಪತ್ತಿಗೆ ಸಂಬಂಧಿಸಿದೆ, ಆದ್ದರಿಂದ ಬುಧನ ವಕ್ರ ಸಂಚಾರದ ಸಮಯದಲ್ಲಿ ಅವರು ಕೆಲವು ವೆಚ್ಚಗಳನ್ನು ಎದುರಿಸಬೇಕಾಗಬಹುದು. ಇದು ಅವರ ಉಳಿತಾಯದ ಮೇಲೆ ಪರಿಣಾಮ ಬೀರಬಹುದು.

ಪರಿಹಾರ - ಈ ಸಮಯದಲ್ಲಿ ಭಾಗವಂತ ವಿಷ್ಣುವಿನ ಪೂಜೆ ಮಾಡಿ ಅಥವಾ ವಿಷ್ಣು ಸಹಸ್ತ್ರನಾಮವನ್ನು ಪಠಿಸಿ.

ಧನು ರಾಶಿ

ಧನು ರಾಶಿಚಕ್ರದ ಸ್ಥಳೀಯರಿಗೆ ಬುಧ ದೇವ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಮದುವೆ ಮತ್ತು ಸಹಭಾಗಿತ್ವದ ಏಳನೇ ಮನೆಯಲ್ಲಿ ವಕ್ರನಾಗುತ್ತಾನೆ. ಈ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಆದಾಗ್ಯೂ, ನೀವು ಮದುವೆಯಾಗಲು ಯೋಜಿಸುತ್ತಿದ್ದರೆ, ಬುಧ ಮತ್ತೆ ಮಾರ್ಗಿಯಾಗುವವರೆಗೆ ಮದುವೆಯನ್ನು ಮುಂದೂಡಲು ನಿಮಗೆ ಸೂಚಿಸಲಾಗಿದೆ. ವೃತ್ತಿಪರವಾಗಿ ಉದ್ಯಮಿಗಳಿಗೆ ಇದು ಉತ್ತಮ ಸಮಯವಾಗಬಹುದು. ಸಹಭಾಗಿತ್ವದಲ್ಲಿ ಯಾವುದೇ ಕೆಲಸವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಸಮಯದಲ್ಲಿ ಆರಂಭಿಸಬಹುದು. ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರಯಾಣಿಸಲು ಇದು ಉತ್ತಮ ಸಮಯವಲ್ಲ. ಪ್ರಯಾಣ ವಿಳಂಬವಾಗಬಹುದು ಅಥವಾ ಸ್ವಲ್ಪ ಸಮಯದ ನಂತರ ಪ್ರಯಾಣ ಮಾಡಲು ಪರಿಗಣಿಸಬಹುದು. ಈ ಸಮಯದಲ್ಲಿ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಲು ಮತ್ತು ತಾಳ್ಮೆಯಿಂದಿರಲು ಸೂಚಿಸಲಾಗಿದೆ.

ಪರಿಹಾರ - ಬುಧ ಹೋರಾ ಸಮಯದಲ್ಲಿ ಬುಧ ಮಂತ್ರವನ್ನು ಜಪಿಸಿ.

ಮಕರ ರಾಶಿ

ಮಕರ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಸಾಲ, ಶತ್ರು ಮತ್ತು ರೋಗದ ಆರನೇ ಮನೆಗೆ ವಕ್ರತೆಯೊಂದಿಗೆ ಗೋಚರಿಸುತ್ತದೆ. ಈ ಸಮಯಾವಧಿಯಲ್ಲಿ ಜಾಗೃತರಾಗಿರಬೇಕು ಮತ್ತು ಎಚ್ಚರವಾಗಿರಬೇಕು. ಏಕೆಂದರೆ ಕೆಲಸದ ಸ್ಥಳದಲ್ಲಿ ಕೆಅಲ್ವು ತಪ್ಪು ಗ್ರಹಿಕೆಗಳ ಕಾರಣದಿಂದಾಗಿ ನಿಮ್ಮ ಮತ್ತು ನಿಮ್ಮ ಅಧೀನ ಕೆಲಸ ಮಾಡುವವರೊಂದಿಗೆ ವಿವಾದ ಅಥವಾ ಜಗಳವಾಗಬಹುದು. ಅದರ ಪ್ರತಿಕೂಲ ಪರಿಣಾಮಗಳನ್ನು ನೀವು ಭರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಕೆಲಸದ ಭಾಗವಾಗಿರುವ ಸಂತೋಷವನ್ನು ಪರಿಗಣಿಸಿ ಮತ್ತು ನೀವು ಏನಾದರೂ ಒಳ್ಳೆಯದನ್ನು ಮಾಡಿದರೆ ಆ ಸಂತೋಷಗಳನ್ನು ಅನುಭವಿಸಿ. ನಿಮ್ಮ ಈ ಉಷ್ಣತೆ ಮತ್ತು ಸಕಾರಾತ್ಮಕತೆಯು ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ನಿಮಗೆ ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸಿ. ಇದರಿಂದಾಗಿ ನಿಮ್ಮ ಮುಂಬರುವ ಸಮಯದಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ವೃತ್ತಿ ಜೀವನವನ್ನು ಹೊರತುಪಡಿಸಿ, ಆರನೇ ಮನೆಯು ರೋಗಗಳ ಅಂಶವಾಗಿದೆ. ಆದ್ದರಿಂದ ಈ ಸಮಯದಲ್ಲಿ ಕೆಲವು ಹಳೆಯ ಅರೋಗ್ಯ ಸಮಸ್ಯೆಗಳು ಮರಳಿ ಉದ್ಭವಿಸಬಹುದು. ಆದ್ದರಿಂದ ನಿಮ್ಮ ದಿನಚರಿಯಲ್ಲಿ ನಿಯಮಿತವಾಗಿ ವ್ಯಾಯಾಮ ಮತ್ತು ಧ್ಯಾನವನ್ನು ಆಶ್ರಯಿಸಿ.

ಪರಿಹಾರ - ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ 5-6 ಕ್ಯಾರಟ್ ಪಚ್ಛೆ ರತ್ನವನ್ನು ತಯಾರಿಸಿ, ಅದನ್ನು ಬುಧವಾರದಂದು ಧರಿಸಿ.


ವೃತ್ತಿಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯನ್ನು ತೆಗೆದುಹಾಕಲು ಈಗಲೇ ಆದೇಶಿಸಿ - ಕಾಗ್ನಿ ಆಸ್ಟ್ರೋ ರಿಪೋರ್ಟ್

ಕುಂಭ ರಾಶಿ

ಕುಂಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ನಿಮ್ಮ ಪ್ರೀತಿ, ಪ್ರಣಯ ಮತ್ತು ಮಕ್ಕಳ ಐದನೇ ಮನೆಗೆ ವಕ್ರ ಸ್ಥಿತಿಯಲ್ಲಿ ಗೋಚರಿಸಲಿದೆ. ಕುಂಭ ರಾಶಿಯು ಸಂಬಂಧಗಳನ್ನು ಪ್ರತಿನಿಧಿಸುತ್ತದೆ, ಬುಧನ ಈ ವಕ್ರ ಸಂಚಾರದ ಸಮಯದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಸಂಗಾತಿಯನ್ನು ನಂಬುವಂತೆ ನಿಮಗೆ ಸೂಚಿಸಲಾಗಿದೆ. ತಪ್ಪು ತಿಳುವಳಿಕೆಗಳ ಕಾರಣದಿಂದಾಗಿ ಗೊಂದಲ ಮತ್ತು ವಿಂಗಡಣೆಯ ಪರಿಸ್ಥಿತಿ ಉದ್ಭವಿಸಬಹುದು. ಈ ಸಮಯದಲ್ಲಿ ನೀವು ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸ್ವಯಂ ಅಭಿವ್ಯಕ್ತಿಯ ಕೊರತೆಯನ್ನು ಅನುಭವಿಸಬಹುದು. ಏಕೆಂದರೆ ಈ ಸಮಯದಲ್ಲಿ ನಕಾರಾತ್ಮಕತೆಯು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಇದರಿಂದಾಗಿ ನಿಮ್ಮ ಕೆಳಸವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ನೀವು ಸ್ವಲ್ಪ ವಿಶ್ರಾಂತಿ ಪಡೆಯಲು, ಕೆಲಸದಿಂದ ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಲು ಮತ್ತು ಆತ್ಮಾವಲೋಕನ ಮಾಡಲು ಸೂಚಿಸಲಾಗಿದೆ. ತಮ್ಮ ಕುಟುಂಬವನ್ನು ಆರಂಭಿಸಲು ಯೋಜಿಸುತ್ತಿರುವ ಎಲ್ಲರಿಗೂ ತಮ್ಮ ಆಲೋಚನೆಯನ್ನು ಮುಂದೂಡಲು ಅಥವಾ ಬುಧನ ವಕ್ರತೆ ಮುಗಿದುಹೋದ ನಂತರ ಹಾಗೆ ಮಾಡಲು ಸೂಚಿಸಲಾಗಿದೆ.

ಪರಿಹಾರ - ಅಗತ್ಯವಿರುವ ಜನರಿಗೆ ಪುಸ್ತಕಗಳ ದಾನ ಮಾಡಿ.

ಮೀನಾ ರಾಶಿ

ಮೀನಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಮೀನಾ ರಾಶಿಚಕ್ರದ ಸ್ಥಳೀಯರ ಸಂತೋಷ, ತಾಯಿ, ಗೃಹ.ಐಷಾರಾಮಿ ಮತ್ತು ವಿಶ್ರಾಂತಿಯ ನಾಲ್ಕನೇ ಮನೆಯಲ್ಲಿ ವಕ್ರನಾಗಿ ಸಂಚರಿಸಲಿದೆ. ಈ ಸಮಯದಲ್ಲಿ ನಿಮ್ಮಕೆಲಸದ ವಿಧಾನವು ಪ್ರಪಂಚಕ್ಕಿಂತ ಭಿನ್ನವಾಗಿರುತ್ತದೆ. ಅದು ಕೆಲವು ಜನರನ್ನು ಗೊಂದಗೊಳಿಸಬಹುದು, ಆದರೆ ನಿಮಗೆ ಯಾವುದು ಸರಿ ಎಂದು ತಿಳಿಯುವವರೆಗೂ, ನಿಮ್ಮ ಮೂಲಕ ಮಾಡಲಾದ ಕೆಲಸಗಳು ನಿಮಗೆ ಸರಿ ಎಂದು ಸಾಬೀತುಪಡಿಸುತ್ತವೆ. ವೃತ್ತಿಪರವಾಗಿ ನಿಮ್ಮ ಆದ್ಯತೆ ಏನು ಮತ್ತು ನೀವು ಏನನ್ನು ನಿಯಂತ್ರಿಸಬೇಕು ಎಂಬುದರ ಸ್ಪಷ್ಟ ಚಿತ್ರಣವನ್ನು ನೀವು ಪಡೆಯುತ್ತೀರಿ. ನಾಲ್ಕನೇ ಮನೆ ಬಾಲ್ಯ ಮತ್ತು ಪೋಷಕರನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಕೆಲವು ಸಮಯವನ್ನು ಕಳೆಯುವ ಮೂಲಕ ಬಾಲ್ಯ ನೆನಪುಗಳನ್ನು ತಾಜಾಗೊಳಿಸಿ. ಹಾಗೆ ಮಾಡುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ನಡುವಿನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಾರಾಟ, ಖರೀದಿ, ಆಸ್ತಿಯ ವರ್ಗಾವಣೆಯನ್ನು ತಪ್ಪಿಸಲು ಪ್ರಯತ್ನಿಸಿ. ನಂತರ ವಿಷಾದಿಸಬೇಕಾಗಬಹುದು. ನಿಮ್ಮ ಮನೆಯಲ್ಲಿ ನೀವು ನವೀಕರಣ ಮಾಡಲು ಬಯಸಿದರೆ, ಇದಕ್ಕಾಗಿ ಸಮಯ ಉತ್ತಮ. ಲೇಖನ, ನೃತ್ಯ, ಫೋಟೋಗ್ರಾಫಿ, ಚಲನಚಿತ್ರ ಅಥವಾ ವರ್ಣಚಿತ್ರಗಳಂತಹ ಸೃಜನಶೀಲ ಚಟುವಟಿಕೆಗಳನ್ನು ಅಭ್ಯಾಸ ಮಾಡುವುದು ಈ ಸಮಯದಲ್ಲಿ ನಿಮಗೆ ಉತ್ತಮ.

ಪರಿಹಾರ - ಪ್ರತಿದಿನ ನಿಯಮಿತವಾಗಿ ಓಂ ನಮೋ ಭಾಗವತೇ ವಾಸುದೇವಾಯ್ ಮಂತ್ರವನ್ನು ಜಪಿಸಿ.


ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

Astrological services for accurate answers and better feature

33% off

Dhruv Astro Software - 1 Year

'Dhruv Astro Software' brings you the most advanced astrology software features, delivered from Cloud.

Brihat Horoscope
What will you get in 250+ pages Colored Brihat Horoscope.
Finance
Are money matters a reason for the dark-circles under your eyes?
Ask A Question
Is there any question or problem lingering.
Career / Job
Worried about your career? don't know what is.
AstroSage Year Book
AstroSage Yearbook is a channel to fulfill your dreams and destiny.
Career Counselling
The CogniAstro Career Counselling Report is the most comprehensive report available on this topic.

Astrological remedies to get rid of your problems

Red Coral / Moonga
(3 Carat)

Ward off evil spirits and strengthen Mars.

Gemstones
Buy Genuine Gemstones at Best Prices.
Yantras
Energised Yantras for You.
Rudraksha
Original Rudraksha to Bless Your Way.
Feng Shui
Bring Good Luck to your Place with Feng Shui.
Mala
Praise the Lord with Divine Energies of Mala.
Jadi (Tree Roots)
Keep Your Place Holy with Jadi.

Buy Brihat Horoscope

250+ pages @ Rs. 599/-

Brihat Horoscope

AstroSage on MobileAll Mobile Apps

Buy Gemstones

Best quality gemstones with assurance of AstroSage.com

Buy Yantras

Take advantage of Yantra with assurance of AstroSage.com

Buy Feng Shui

Bring Good Luck to your Place with Feng Shui.from AstroSage.com

Buy Rudraksh

Best quality Rudraksh with assurance of AstroSage.com
Call NowTalk to
Astrologer
Chat NowChat with
Astrologer