ಕುಂಭ ಸಂಕ್ರಾಂತಿ 2025
ಹಿಂದೂ ಕ್ಯಾಲೆಂಡರ್ನಲ್ಲಿ ಹನ್ನೊಂದನೇ ತಿಂಗಳ ಮೊದಲ ದಿನವನ್ನು ಕುಂಭ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಲೇಖನದಲ್ಲಿ ನಾವು ಕುಂಭ ಸಂಕ್ರಾಂತಿ 2025 ಬಗ್ಗೆ ತಿಳಿದುಕೊಳ್ಳೋಣ.ಆತ್ಮದ ಸಂಕೇತವೆಂದು ಪರಿಗಣಿಸಲಾದ ಸೂರ್ಯನು ಪ್ರತಿ ತಿಂಗಳು ಒಂದು ರಾಶಿಯಿಂದ ಇನ್ನೊಂದಕ್ಕೆ ಸಂಚರಿಸುತ್ತಾನೆ ಮತ್ತು ಈ ಸಂಕ್ರಮಣದ ದಿನಾಂಕವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ.ಈ ಅದೃಷ್ಟದ ದಿನದಂದು ಗಂಗಾನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ಧ್ಯಾನ ಮಾಡುವುದು ಬಹಳ ಮುಖ್ಯ.
ಈ ಫೆಬ್ರವರಿ ಮಾಸಿಕ ಜಾತಕ 2025 ರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಅತ್ಯುತ್ತಮ ಜ್ಯೋತಿಷಿ ಗಳೊಂದಿಗೆ ಮಾತನಾಡಿ
ಕುಂಭ ಸಂಕ್ರಾಂತಿ: ದಿನಾಂಕ ಮತ್ತು ಸಮಯ
ಸೂರ್ಯ ಫೆಬ್ರವರಿ 12, 2025 ರಂದು ರಾತ್ರಿ 9:40 ಕ್ಕೆ ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗುತ್ತಾನೆ. ಸೂರ್ಯ ಮಾರ್ಚ್ 14 ರವರೆಗೆ ಈ ರಾಶಿಚಕ್ರ ಚಿಹ್ನೆಯಲ್ಲಿ ಇರುತ್ತಾನೆ. ಹಿಂದೂ ಧರ್ಮದಲ್ಲಿ, ಕುಂಭ ಸಂಕ್ರಾಂತಿಯನ್ನು ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಶುಭ ಯೋಗಗಳ ರಚನೆ
2025 ರ ಕುಂಭ ಸಂಕ್ರಾಂತಿಯ ದಿನದಂದು, ವಿಶೇಷ ಯೋಗವು ರೂಪುಗೊಳ್ಳುತ್ತದೆ, ಇದು ಈ ಪವಿತ್ರ ಸಂದರ್ಭದ ಮಹತ್ವವನ್ನು ಹೆಚ್ಚಿಸುತ್ತದೆ. ಶೋಭನ ಯೋಗವು ಫೆಬ್ರವರಿ 12 ರಂದು ಬೆಳಿಗ್ಗೆ 8:06 ಕ್ಕೆ ಪ್ರಾರಂಭವಾಗಿ ಫೆಬ್ರವರಿ 13 ರಂದು ಬೆಳಿಗ್ಗೆ 7:31 ಕ್ಕೆ ಕೊನೆಗೊಳ್ಳುತ್ತದೆ.
ನಿಮ್ಮ ಜೀವನಕ್ಕೆ ಸಂಬಂಧಿಸಿದ ಆಕಾಶಕಾಯಗಳ ಒಳನೋಟಗಳು ಬೇಕೇ? ರಾಶಿಭವಿಷ್ಯ 2025 ರಲ್ಲಿ ನಿಮ್ಮ ರಾಶಿಗಾಗಿ ಕಾಯುತ್ತಿರುವ ಅವಕಾಶಗಳನ್ನು ಅನ್ವೇಷಿಸಿ!
ಕುಂಭ ಸಂಕ್ರಾಂತಿ: ಮಾಡಬೇಕಾದ ಸಂಗತಿಗಳು
- ಸಂಕ್ರಾಂತಿಯಂದು ಬ್ರಾಹ್ಮಣರು ಅಥವಾ ಪುರೋಹಿತರಿಗೆ ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
- ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
- ಭಕ್ತರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಕುಂಭ ಸಂಕ್ರಾಂತಿಯಂದು ಗಂಗಾ ಮಾತೆಯನ್ನು ಪ್ರಾರ್ಥಿಸಬೇಕು ಮತ್ತು ಧ್ಯಾನಿಸಬೇಕು.
- ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯವಾಗದವರು ಯಮುನಾ, ಗೋದಾವರಿ ಅಥವಾ ಶಿಪ್ರಾದಂತಹ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡಬಹುದು.
- ಇದಲ್ಲದೆ, ಈ ದಿನದಂದು ಪ್ರಾಣಿಗಳಿಗೆ ಆಹಾರವನ್ನು ನೀಡುವುದು, ವಿಶೇಷವಾಗಿ ಹಸುಗಳಿಗೆ ಮೇವನ್ನು ಒದಗಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಕುಂಭ ಸಂಕ್ರಾಂತಿಯಂದು ಮಾಡಬೇಕಾದ ಆಚರಣೆಗಳು
- ಕುಂಭ ಸಂಕ್ರಾಂತಿಯಂದು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಗೋದಾವರಿಯಲ್ಲಿ ಸ್ನಾನ ಮಾಡುವುದು ಬಹಳ ಮಹತ್ವದ್ದಾಗಿದೆ.
- ಈ ಕ್ರಿಯೆಯು ಎಲ್ಲಾ ಪಾಪಗಳನ್ನು ತೊಳೆದುಕೊಳ್ಳುತ್ತದೆ, ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.
- ಈ ದಿನದಂದು ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ಪ್ರಾರ್ಥನೆ ಮಾಡುವುದರಿಂದ ಭಕ್ತರು ಅವರು ಬಯಸಿದ್ದನ್ನು ಸಾಧಿಸಲು ಸಹಾಯ ಮಾಡುತ್ತದೆ.
- ಎಲ್ಲಾ ದೇವತೆಗಳನ್ನು ವಿಶೇಷವಾಗಿ ಗಂಗಾ ಮಾತೆಯನ್ನು ಹೂವುಗಳು ಮತ್ತು ಹಣ್ಣುಗಳಂತಹ ವಿಶೇಷ ನೈವೇದ್ಯಗಳಿಂದ ಪೂಜಿಸಬೇಕು.
- ಈ ಮಂಗಳಕರ ದಿನದಂದು ದಾನ ಮಾಡುವುದು ಅತ್ಯಂತ ಅನುಕೂಲಕರವಾಗಿದೆ. ನೀವು ಬಡವರಿಗೆ ಆಹಾರವನ್ನು ನೀಡಬಹುದು ಅಥವಾ ಹಸುವಿಗೆ ಆಹಾರವನ್ನು ನೀಡಬಹುದು, ಇದನ್ನು ಅತ್ಯಂತ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
- ಕುಂಭ ಸಂಕ್ರಾಂತಿ 2025 ರಂದು, ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅವರ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಶಾಂತಿಗಾಗಿ ಪ್ರಾರ್ಥಿಸುತ್ತಾರೆ.
ಕುಂಭ ಸಂಕ್ರಾಂತಿಯ ಸಾಂಸ್ಕೃತಿಕ ಮಹತ್ವ
ಕುಂಭ ಸಂಕ್ರಾಂತಿ ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಅವಕಾಶವನ್ನು ನೀಡುತ್ತದೆ. ಗಂಗಾ ನದಿಯು ಆತ್ಮ ಮತ್ತು ದೇಹ ಎರಡನ್ನೂ ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ, ಗಂಗಾ ಮಾತೆಯನ್ನು ವಿಶೇಷ ಭಕ್ತಿಯಿಂದ ಪೂಜಿಸಲಾಗುತ್ತದೆ, ನಂತರ ಅವಳ ಪವಿತ್ರ ನೀರಿನಲ್ಲಿ ಸ್ನಾನ ಮಾಡಲಾಗುತ್ತದೆ. ಕುಂಭ ಸಂಕ್ರಾಂತಿಯ ದಿನದಂದು ವಿವಿಧೆಡೆ ಜಾತ್ರೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಆಚರಣೆಯನ್ನು ಮೋಕ್ಷದ ಕಡೆಗೆ ಚಲಿಸುವ ಸಂಕೇತವೆಂದು ಪರಿಗಣಿಸಲಾಗಿದೆ.
ಕುಂಭ ಸಂಕ್ರಾಂತಿ ಆಚರಣೆಯ ಸ್ಥಳಗಳು
ಕುಂಭ ಸಂಕ್ರಾಂತಿಯನ್ನು ಭಾರತದ ವಿವಿಧ ಭಾಗಗಳಲ್ಲಿ ಉಪವಾಸಗಳನ್ನು ಮಾಡುವ ಮೂಲಕ ಆಚರಿಸಲಾದರೂ, ಪೂರ್ವ ಭಾರತದಲ್ಲಿ ಇದನ್ನು ಸಾಕಷ್ಟು ಉತ್ಸಾಹದಿಂದ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಇಂದು ಫಾಲ್ಗುಣ ಮಾಸದ ಆರಂಭವಾಗಿದೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ಇದನ್ನು ಮಾಸಿ ಮಾಸಂ ಎಂದು ಕರೆಯಲಾಗುತ್ತದೆ. ಕುಂಭ ಸಂಕ್ರಾಂತಿಯಂದು ಸಾಂಪ್ರದಾಯಿಕವಾಗಿ, ಭಕ್ತರು ಪವಿತ್ರ ಸ್ಥಳಗಳಾದ ಅಲಹಾಬಾದ್ (ಪ್ರಯಾಗರಾಜ್), ಉಜ್ಜಯಿನಿ, ನಾಸಿಕ್ ಮತ್ತು ಹರಿದ್ವಾರಗಳಿಗೆ ಪ್ರಯಾಣಿಸುವರು. ಆಶೀರ್ವಾದ ಮತ್ತು ಶುದ್ಧೀಕರಣವನ್ನು ಪಡೆಯಲು ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ.
ಭವಿಷ್ಯದ ಎಲ್ಲಾ ಮೌಲ್ಯಯುತ ಒಳನೋಟಗಳಿಗಾಗಿ ಆಸ್ಟ್ರೋಸೇಜ್ ಬೃಹತ್ ಜಾತಕ
ಪೂಜಾವಿಧಿಗಳು
ಸಂಕ್ರಾಂತಿಯಂದು, ಬೇಗ ಎದ್ದು ಸ್ನಾನ ಮಾಡಿ, ನಂತರ ತಾಮ್ರದ ಪಾತ್ರೆಯಲ್ಲಿ ಸೂರ್ಯ ದೇವರಿಗೆ ನೀರು ಮತ್ತು ಎಳ್ಳನ್ನು ಅರ್ಪಿಸಿ. ಅದರ ನಂತರ, ವಿಷ್ಣುವಿಗೆ ಹಣ್ಣು, ಹೂವು, ಧೂಪ, ದೀಪ, ಎಳ್ಳು, ಅಕ್ಕಿ ಮತ್ತು ದೂರ್ವಾ ಹುಲ್ಲುಗಳನ್ನು ಅರ್ಪಿಸಿ. ಕೊನೆಯಲ್ಲಿ ವಿಷ್ಣುವಿನ ಆರತಿ ಮಾಡಬೇಕು.
ಪೌರಾಣಿಕ ಕಥೆ
ದೇವತೆಗಳು ಮತ್ತು ರಾಕ್ಷಸರು ಒಮ್ಮೆ ಮಂದಾರ ಪರ್ವತ ಮತ್ತು ವಾಸುಕಿ ಸರ್ಪದೊಂದಿಗೆ ಶ್ರೀ ಸಾಗರವನ್ನು ಮಥನ ಮಾಡುವ ಮೂಲಕ ಅಮೃತವನ್ನು ಹೊರತೆಗೆಯಲು ಯೋಜಿಸಿದರು. ಭಗವಂತ ವಿಷ್ಣುವು ಕೂರ್ಮ ಅವತಾರವನ್ನು ತೆಗೆದುಕೊಂಡು ತನ್ನ ಬೆನ್ನಿನ ಮೇಲೆ ಪರ್ವತವನ್ನು ಹೊತ್ತನು. ಸಾಗರದ ಮಂಥನದ ಸಮಯದಲ್ಲಿ ಹಲವಾರು ಬೆಲೆಬಾಳುವ ವಸ್ತುಗಳು ಒಂದರ ನಂತರ ಒಂದರಂತೆ ಹೊರಹೊಮ್ಮಿದವು, ಅಮೃತವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಅದು ಕೊನೆಗೊಂಡಿತು. ರಾಕ್ಷಸರು ಅಮೃತವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ದೇವತೆಗಳು ಚಿಂತಿತರಾಗಿದ್ದರು. ದೇವತೆಗಳು ಮತ್ತು ರಾಕ್ಷಸರ ನಡುವೆ ಅಮೃತದ ಯುದ್ಧದ ಸಮಯದಲ್ಲಿ, ಭೂಮಿಯ ಮೇಲಿನ ನಾಲ್ಕು ಸ್ಥಳಗಳಲ್ಲಿ ಕೆಲವು ಹನಿಗಳು ಮಡಕೆಯಿಂದ ಬಿದ್ದವು: ಅವುಗಳು ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್. ಕುಂಭ ಸಂಕ್ರಾಂತಿ ದಿನದಂದು ಈ ಅಮೃತದ ಹನಿಗಳು ಮಳೆಯಾಗುತ್ತವೆ. ಪರಿಣಾಮವಾಗಿ, ಈ ಸ್ಥಳಗಳು ಪವಿತ್ರವಾದವು ಮತ್ತು ಕುಂಭ ಸಂಕ್ರಾಂತಿ ಎಂಬುವುದು ಪಾಪದಿಂದ ವಿಮೋಚನೆಯಾಗುವುದರ ಸಂಕೇತವಾಯಿತು.
ಪ್ರೇಮ ಸಮಸ್ಯೆಗಳಿಗೆ ಪರಿಹಾರ ಬೇಕೇ ಜ್ಯೋತಿಷಿಗಳಲ್ಲಿ ಕೇಳಿ
ಪರಿಹಾರಗಳು
- ಮೇಷ : ಅಗ್ನಿಗೆ ಸಂಬಂಧಿಸಿದ ವಸ್ತುಗಳಾದ ಲ್ಯಾಂಪ್, ಮೇಣದಬತ್ತಿಗಳನ್ನು ದಾನ ಮಾಡಿ.
- ವೃಷಭ : ಕುಂಭ ಸಂಕ್ರಾಂತಿ 2025ರಂದು, ಅಗತ್ಯವಿರುವವರಿಗೆ ಬಟ್ಟೆ ಮತ್ತು ಆಹಾರವನ್ನು ದಾನ ಮಾಡಿ.
- ಮಿಥುನ : ಪುಸ್ತಕ ಹಂಚಿ ವಿದ್ಯಾರ್ಥಿಗಳಿಗೆ ಬೆಂಬಲಿಸಿ.
- ಕರ್ಕ : ನೀರಿನ ಆಧಾರಿತ ಉತ್ಪನ್ನಗಳನ್ನು ದಾನ ಮಾಡಿ, ಉದಾಹರಣೆಗೆ ಕುಡಿಯುವ ನೀರು ಅಥವಾ ಅಕ್ವೇರಿಯಂ.
- ಸಿಂಹ : ಅನಾಥ ಮಕ್ಕಳಿಗೆ ಅಥವಾ ದೇವಸ್ಥಾನಕ್ಕೆ ಬಂಗಾರದ ವಸ್ತುಗಳನ್ನು ದಾನ ಮಾಡಿ.
- ಕನ್ಯಾ : ಕಾಯಿಲೆಯಿರುವವರಿಗೆ ಮತ್ತು ಹಿರಿಯರಿಗೆ ಸಹಾಯ ಮಾಡುವ ಸಂಸ್ಥೆಗಳಿಗೆ ದಾನ ಮಾಡಿ.
- ತುಲಾ : ಬಟ್ಟೆ, ಚಾಕೊಲೇಟ್ ಮತ್ತು ಮೊಸರು ದಾನ ಮಾಡಿ.
- ವೃಶ್ಚಿಕ : ಕೆಂಪು ಬಟ್ಟೆ, ಧಾನ್ಯಗಳು, ತಾಮ್ರದ ಉತ್ಪನ್ನಗಳನ್ನು ದಾನ ಮಾಡಿ.
- ಧನು : ಭಗವಂತ ವಿಷ್ಣುವನ್ನು ಪೂಜಿಸಿ.
- ಮಕರ : ಕಪ್ಪು ಎಳ್ಳು, ಎಣ್ಣೆ, ನೀಲಿ ಬಣ್ಣದ ವಸ್ತುಗಳನ್ನು ದೇವಸ್ಥಾನಕ್ಕೆ ಮತ್ತು ಅಗತ್ಯವಿರುವವರಿಗೆ ದಾನ ಮಾಡಿ.
- ಕುಂಭ : ಕಪ್ಪು ಬಟ್ಟೆ ಮತ್ತು ಕಪ್ಪು ಎಳ್ಳು ದಾನ ಮಾಡಿ.
- ಮೀನ : ಹಳದಿ ಬಟ್ಟೆ, ಅರಶಿನ ಮತ್ತು ಪುಸ್ತಕಗಳನ್ನು ದಾನ ಮಾಡಿ.
ಪಿತೃ ದೋಷ ನಿವಾರಣೆಗೆ ಕ್ರಮಗಳು
ನಿಮ್ಮ ಜಾತಕ ಪಿತೃ ದೋಷವನ್ನು ಹೊಂದಿದ್ದರೆ, ನೀವು ಕುಂಭ ಸಂಕ್ರಾಂತಿಯಂದು ಈ ಕೆಳಗಿನ ವಸ್ತುಗಳನ್ನು ದಾನ ಮಾಡಬಹುದು:
- ನೇರ ದಾನ: ಗೋಧಿ ಹಿಟ್ಟು, ಎಣ್ಣೆ, ಉಪ್ಪು, ಅಕ್ಕಿ, ತುಪ್ಪ, ಬೆಲ್ಲ ಮತ್ತು ಉದ್ದಿನಬೇಳೆಯನ್ನು ಭಕ್ಷ್ಯದ ಮೇಲೆ ಇರಿಸಿ. ಸಂಕ್ರಾಂತಿಯಂದು ಈ ಎಲ್ಲಾ ವಸ್ತುಗಳನ್ನು ದೇವಸ್ಥಾನಕ್ಕೆ ದಾನ ಮಾಡಿ. ಇದರಿಂದ ಪಿತೃ ದೋಷವನ್ನು ನಿವಾರಿಸಲು ಮತ್ತು ಯಾವುದೇ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
- ಬಟ್ಟೆ ದಾನ: ಕುಂಭ ಸಂಕ್ರಾಂತಿಯಂದು ಬಟ್ಟೆ ಮತ್ತು ಧಾನ್ಯಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಮರಣಾನಂತರ ಮೋಕ್ಷ ದೊರೆಯುತ್ತದೆ. ಧಾನ್ಯಗಳು, ಬಟ್ಟೆ, ಬೇಯಿಸಿದ ಆಹಾರ ಮತ್ತು ಹೊದಿಕೆಗಳನ್ನು ದಾನ ಮಾಡಿ.
- ಐದು ಹಣ್ಣುಗಳ ದಾನ: ಕುಂಭ ಸಂಕ್ರಾಂತಿಯಂದು, ಐದು ಋತುಮಾನದ ಹಣ್ಣುಗಳನ್ನು ದೇವಸ್ಥಾನಕ್ಕೆ ದಾನ ಮಾಡಿ. ಇದು ನಿಮಗೆ ಸಾಲ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.
- ತಾಮ್ರದ ದಾನ: ಈ ಅದೃಷ್ಟದ ದಿನದಂದು, ತಾಮ್ರ ಅಥವಾ ತಾಮ್ರ-ಆಧಾರಿತ ವಸ್ತುಗಳನ್ನು ದಾನ ಮಾಡುವುದರಿಂದ ಸೂರ್ಯ ಮತ್ತು ಮಂಗಳಕ್ಕೆ ಸಂಬಂಧಿಸಿದ ದೋಷಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಕೆಂಪು ಹೂವುಗಳು, ಬಟ್ಟೆಗಳನ್ನೂ ದಾನ ಮಾಡಬಹುದು.
- ಎಳ್ಳು ದಾನ: ಈ ದಿನ ಕಪ್ಪು ಎಳ್ಳನ್ನು ದಾನ ಮಾಡಿ.
ಜ್ಯೋತಿಷ್ಯ ಪರಿಹಾರಗಳು
- ಈ ಸಂಕ್ರಾಂತಿಯಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ. ಜೊತೆಗೆ, ನೀವು ಸೂರ್ಯ ಚಾಲೀಸಾವನ್ನು ಪಠಿಸಬಹುದು, ಸೂರ್ಯ ದೇವರ ಪೂಜೆ, ಸೂರ್ಯನ ಆರತಿ ಮಾಡಬಹುದು.
- ಕುಂಭ ಸಂಕ್ರಾಂತಿ 2025ರಂದು ದಾನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಬ್ರಾಹ್ಮಣರಿಗೆ ಮತ್ತು ಬಡವರಿಗೆ ಬೆಚ್ಚಗಿನ ಉಣ್ಣೆಯ ಬಟ್ಟೆ ಮತ್ತು ಆಹಾರ ಧಾನ್ಯಗಳನ್ನು ಅರ್ಪಿಸಿ.
- ತುಪ್ಪವನ್ನು ದಾನ ಮಾಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ.
- ಸೂರ್ಯನನ್ನು ಮೆಚ್ಚಿಸಲು, ಬಡ ಮಕ್ಕಳಿಗೆ ಹಣ್ಣುಗಳನ್ನು ಅರ್ಪಿಸಿ.
ಜ್ಯೋತಿಷ್ಯ ಪರಿಹಾರಗಳು ಮತ್ತು ಸೇವೆಗಳಿಗಾಗಿ, ಭೇಟಿ ನೀಡಿ: ಆಸ್ಟ್ರೋಸೇಜ್ ಆನ್ಲೈನ್ ಶಾಪಿಂಗ್ ಸ್ಟೋರ್
ನೀವು ನಮ್ಮ ಬ್ಲಾಗ್ ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಆಸ್ಟ್ರೋಸೇಜ್ ಕುಟುಂಬದ ಪ್ರಮುಖ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಹೆಚ್ಚು ಆಸಕ್ತಿದಾಯಕ ಬ್ಲಾಗ್ಗಳಿಗಾಗಿ, ನಮ್ಮೊಂದಿಗೆ ಸಂಪರ್ಕದಲ್ಲಿರಿ!
ಹೆಚ್ಚಾಗಿ ಕೇಳುವ ಪ್ರಶ್ನೆಗಳು
1. ಕುಂಭ ಸಂಕ್ರಾಂತಿ ಎಂದರೇನು?
ಈ ದಿನ ಸೂರ್ಯನು ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚರಿಸುತ್ತಾನೆ.
2. 2025 ರಲ್ಲಿ ಕುಂಭ ಸಂಕ್ರಾಂತಿ ಯಾವಾಗ?
ಕುಂಭ ಸಂಕ್ರಾಂತಿಯನ್ನು ಫೆಬ್ರವರಿ 12, 2025 ರಂದು ಆಚರಿಸಲಾಗುತ್ತದೆ.
3. ಕುಂಭ ಸಂಕ್ರಾಂತಿಯಂದು ಸೂರ್ಯನು ಯಾವ ರಾಶಿಚಕ್ರದ ಚಿಹ್ನೆಯನ್ನು ಪ್ರವೇಶಿಸುತ್ತಾನೆ?
ಈ ದಿನ ಸೂರ್ಯ ಕುಂಭ ರಾಶಿಯಲ್ಲಿ ಸಾಗುತ್ತಾನೆ.
Astrological services for accurate answers and better feature
Astrological remedies to get rid of your problems
AstroSage on MobileAll Mobile Apps
- Horoscope 2026
- राशिफल 2026
- Calendar 2026
- Holidays 2026
- Shubh Muhurat 2026
- Saturn Transit 2026
- Ketu Transit 2026
- Jupiter Transit In Cancer
- Education Horoscope 2026
- Rahu Transit 2026
- ராசி பலன் 2026
- राशि भविष्य 2026
- રાશિફળ 2026
- রাশিফল 2026 (Rashifol 2026)
- ರಾಶಿಭವಿಷ್ಯ 2026
- రాశిఫలాలు 2026
- രാശിഫലം 2026
- Astrology 2026






